CoolCoder44 commited on
Commit
3138743
·
verified ·
1 Parent(s): 2e70779

Upload folder using huggingface_hub

Browse files
This view is limited to 50 files because it contains too many changes.   See raw diff
Files changed (50) hide show
  1. zeenewskannada/data1_url7_1_to_200_0.txt +1 -0
  2. zeenewskannada/data1_url7_1_to_200_1.txt +1 -0
  3. zeenewskannada/data1_url7_1_to_200_10.txt +1 -0
  4. zeenewskannada/data1_url7_1_to_200_100.txt +1 -0
  5. zeenewskannada/data1_url7_1_to_200_101.txt +1 -0
  6. zeenewskannada/data1_url7_1_to_200_102.txt +1 -0
  7. zeenewskannada/data1_url7_1_to_200_103.txt +1 -0
  8. zeenewskannada/data1_url7_1_to_200_104.txt +1 -0
  9. zeenewskannada/data1_url7_1_to_200_105.txt +1 -0
  10. zeenewskannada/data1_url7_1_to_200_106.txt +1 -0
  11. zeenewskannada/data1_url7_1_to_200_107.txt +1 -0
  12. zeenewskannada/data1_url7_1_to_200_108.txt +1 -0
  13. zeenewskannada/data1_url7_1_to_200_109.txt +1 -0
  14. zeenewskannada/data1_url7_1_to_200_11.txt +1 -0
  15. zeenewskannada/data1_url7_1_to_200_110.txt +1 -0
  16. zeenewskannada/data1_url7_1_to_200_111.txt +1 -0
  17. zeenewskannada/data1_url7_1_to_200_112.txt +1 -0
  18. zeenewskannada/data1_url7_1_to_200_113.txt +1 -0
  19. zeenewskannada/data1_url7_1_to_200_114.txt +1 -0
  20. zeenewskannada/data1_url7_1_to_200_115.txt +1 -0
  21. zeenewskannada/data1_url7_1_to_200_116.txt +1 -0
  22. zeenewskannada/data1_url7_1_to_200_117.txt +1 -0
  23. zeenewskannada/data1_url7_1_to_200_118.txt +1 -0
  24. zeenewskannada/data1_url7_1_to_200_119.txt +1 -0
  25. zeenewskannada/data1_url7_1_to_200_12.txt +1 -0
  26. zeenewskannada/data1_url7_1_to_200_120.txt +1 -0
  27. zeenewskannada/data1_url7_1_to_200_121.txt +1 -0
  28. zeenewskannada/data1_url7_1_to_200_122.txt +1 -0
  29. zeenewskannada/data1_url7_1_to_200_123.txt +1 -0
  30. zeenewskannada/data1_url7_1_to_200_124.txt +1 -0
  31. zeenewskannada/data1_url7_1_to_200_125.txt +1 -0
  32. zeenewskannada/data1_url7_1_to_200_126.txt +1 -0
  33. zeenewskannada/data1_url7_1_to_200_127.txt +1 -0
  34. zeenewskannada/data1_url7_1_to_200_128.txt +1 -0
  35. zeenewskannada/data1_url7_1_to_200_129.txt +1 -0
  36. zeenewskannada/data1_url7_1_to_200_13.txt +1 -0
  37. zeenewskannada/data1_url7_1_to_200_130.txt +1 -0
  38. zeenewskannada/data1_url7_1_to_200_131.txt +1 -0
  39. zeenewskannada/data1_url7_1_to_200_132.txt +1 -0
  40. zeenewskannada/data1_url7_1_to_200_133.txt +1 -0
  41. zeenewskannada/data1_url7_1_to_200_134.txt +1 -0
  42. zeenewskannada/data1_url7_1_to_200_135.txt +1 -0
  43. zeenewskannada/data1_url7_1_to_200_136.txt +1 -0
  44. zeenewskannada/data1_url7_1_to_200_137.txt +1 -0
  45. zeenewskannada/data1_url7_1_to_200_138.txt +1 -0
  46. zeenewskannada/data1_url7_1_to_200_139.txt +1 -0
  47. zeenewskannada/data1_url7_1_to_200_14.txt +1 -0
  48. zeenewskannada/data1_url7_1_to_200_140.txt +1 -0
  49. zeenewskannada/data1_url7_1_to_200_141.txt +1 -0
  50. zeenewskannada/data1_url7_1_to_200_142.txt +1 -0
zeenewskannada/data1_url7_1_to_200_0.txt ADDED
@@ -0,0 +1 @@
 
 
1
+ - : ಭಾರತದಲ್ಲಿ ಎಷ್ಟು ಜನರು ಮಾಂಸ, ಮೀನು & ಮೊಟ್ಟೆಗಳನ್ನು ಸೇವಿಸುತ್ತಾರೆ? - : ಭಾರತದ ಜನಸಂಖ್ಯೆಯಲ್ಲಿ ಎಷ್ಟು ಸಸ್ಯಾಹಾರಿಗಳಿದ್ದಾರೆ? ಭಾರತವು ನಿಜವಾಗಿಯೂ ಸಸ್ಯಾಹಾರಿಗಳ ದೇಶವೇ ಅಥವಾ ಇದು ಕೇವಲ ಜನಪ್ರಿಯ ಪುರಾಣವೇ? ಬನ್ನಿ ರಾಷ್ಟ್ರೀಯ ಕುಟುಂಬ & ಆರೋಗ್ಯ ಸಮೀಕ್ಷೆಯ () ದತ್ತಾಂಶ ಏನು ಹೇಳುತ್ತದೆ ಎಂದು ತಿಳಿಯಿರಿ... - :ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ೭ ವರ್ಷದ ಬಾಲಕ ತನ್ನ ಊಟದ ಡಬ್ಬದಲ್ಲಿ ಚಿಕನ್ ಬಿರಿಯಾನಿ ತಂದು ತನ್ನ ಸಹಪಾಠಿಗಳಿಗೆ ಬಡಿಸಿದ ಆರೋಪದ ಮೇಲೆ ಖಾಸಗಿ ಶಾಲೆಯಿಂದ ಹೊರಹಾಕಲಾಗಿದೆ. ಇದರಿಂದ ಕೋಪಗೊಂಡ ಬಾಲಕನ ತಾಯಿ ಹಾಗೂ ಶಾಲೆಯ ಪ್ರಾಂಶುಪಾಲರ ನಡುವಿನ ಸಂಭಾಷಣೆ ಇದೀಗ ವೈರಲ್ ಆಗಿದೆ. ಇದಾದ ಬಳಿಕ ಅಧಿಕಾರಿಗಳು ತನಿಖೆಗೆ ಸಮಿತಿ ರಚಿಸಿದ್ದಾರೆ. ಆದರೆ ಬಾಲಕ ತನ್ನ ಸಹಪಾಠಿಗಳಿಗೆ ಚಿಕನ್ ಬಿರಿಯಾನಿ ಬಡಿಸಿರುವುದು ಆಕ್ಷೇಪಾರ್ಹ ಅಂತಾ ಪ್ರಾಂಶುಪಾಲರು ಸ್ಪಷ್ಟವಾಗಿ ಹೇಳಿದ್ದಾರೆ. ಧಾರ್ಮಿಕ ನಂಬಿಕೆಗಳು ಅನೇಕ ಜನರುವನ್ನು "ಶುದ್ಧ" ಮತ್ತು ಮಾಂಸಾಹಾರವನ್ನು "ಕೊಳಕು" ಎಂದು ಪರಿಗಣಿಸುವ ಈ ದೇಶದಲ್ಲಿ ಅನೇಕರು ತಮ್ಮ ತಟ್ಟೆಗಳಲ್ಲಿ ಯಾವ ರೀತಿಯ ಊಟ ಮಾಡಬೇಕೆಂಬ ಆಳವಾದ ಧಾರ್ಮಿಕ ನಂಬಿಕೆಗಳಿಂದ ಪ್ರೇರೇಪಿಸಲ್ಪಡುತ್ತಾರೆ. ಈ ರೀತಿಯ ವಿವಾದವು ಹೊಸದೇನಲ್ಲ. ಭಾರತದ ಜನಸಂಖ್ಯೆಯ ಪ್ರಕಾರ ದೇಶದಲ್ಲಿ ಎಷ್ಟು ಪ್ರಮಾಣದ ಸಸ್ಯಾಹಾರಿಗಳಿದ್ದಾರೆ? ಅಥವಾ ಮಾಂಸಹಾರಿಗಳಿದ್ದಾರೆ? ಭಾರತವು ನಿಜವಾಗಿಯೂ ಸಸ್ಯಾಹಾರಿಗಳ ದೇಶವೇ ಅಥವಾ ಇದು ಕೇವಲ ಜನಪ್ರಿಯ ಪುರಾಣವೇ? ಬನ್ನಿ ಸರ್ಕಾರ ಅಂದರೆ ಅಧಿಕೃತ ಅಂಕಿ-ಅಂಶಗಳು ಈ ಬಗ್ಗೆ ಏನು ಹೇಳುತ್ತದೆ ಎಂದು ತಿಳಿಯೋಣ. ಭಾರತದಲ್ಲಿ ಎಷ್ಟು ಪ್ರಮಾಣದ ಸಸ್ಯಾಹಾರಿಗಳಿದ್ದಾರೆ? ಹೆಚ್ಚಿನ ಭಾರತೀಯರು ಮೊಟ್ಟೆ, ಕೋಳಿ, ಮಾಂಸ ಅಥವಾ ಮೀನುಗಳನ್ನು ಯಾವುದಾದರೂ ರೂಪದಲ್ಲಿ ತಿನ್ನುತ್ತಾರೆ. ದೇಶದ ಅರ್ಧದಷ್ಟು ಮಂದಿ ವಾರಕ್ಕೊಮ್ಮೆಯಾದರೂ ಮಾಂಸಹಾರ ಸೇವಿಸುತ್ತಾರೆ ಎನ್ನಲಾಗಿದೆ. ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ- (2019-21)ದ ಮಾಹಿತಿಯ ಪ್ರಕಾರ, ದೇಶದ ಶೇ.29.4ರಷ್ಟು ಮಹಿಳೆಯರು ಮತ್ತು ಶೇ.16.6ರಷ್ಟು ಪುರುಷರು ತಾವು ಎಂದಿಗೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುವುದಿಲ್ಲವೆಂದು ಹೇಳಿದ್ದಾರೆ. ಅದೇ ರೀತಿ 45.1% ಮಹಿಳೆಯರು ಮತ್ತು 57.3% ಪುರುಷರು ವಾರಕ್ಕೊಮ್ಮೆಯಾದರೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುತ್ತಾರೆಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮಾಂಸ ಸೇವನೆ ಹೆಚ್ಚುತ್ತಿದೆ! ದತ್ತಾಂಶ ವಿಶ್ಲೇಷಣೆಯ ಆಧಾರದ ಮೇಲೆ ಪ್ರಕಟವಾದ ವರದಿಗಳ ಪ್ರಕಾರ, ಭಾರತದಲ್ಲಿ ಮಾಂಸ ಸೇವನೆಯು ವಾಸ್ತವದಲ್ಲಿ ಹೆಚ್ಚುತ್ತಿದೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ. ಏಕೆಂದರೆ ೫ ವರ್ಷಗಳ ಹಿಂದೆ, ರಾಷ್ಟ್ರೀಯ ಕುಟುಂಬ ಮತ್ತು ಆರೋಗ್ಯ ಸಮೀಕ್ಷೆ ()- (2015-16) ಪ್ರಕಾರ, ದೇಶದಲ್ಲಿ ಶೇ.29.9ರಷ್ಟು ಮಹಿಳೆಯರು ಮತ್ತು ಶೇ.21.6ರಷ್ಟು ಪುರುಷರು ತಾವು ಎ��ದಿಗೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುವುದಿಲ್ಲವೆಂದು ಹೇಳಿದ್ದಾರೆ. ಅದೇ ರೀತಿ ಶೇ.42.8ರಷ್ಟು ಮಹಿಳೆಯರು ಮತ್ತು ಶೇ.48.9ರಷ್ಟು ಪುರುಷರು ವಾರಕ್ಕೊಮ್ಮೆಯಾದರೂ ಮೀನು, ಕೋಳಿ ಅಥವಾ ಮಾಂಸವನ್ನು ಸೇವಿಸುತ್ತಾರೆಂದು ಹೇಳಿದ್ದಾರೆ. ಮತ್ತು Vನ ಡೇಟಾದ ಹೋಲಿಕೆ ೫ ವರ್ಷಗಳ ಮಧ್ಯಂತರದಲ್ಲಿ ಸಂಗ್ರಹಿಸಿದ ಮತ್ತು ಡೇಟಾವನ್ನು ಹೋಲಿಸಿದರೆ, ದೇಶದಲ್ಲಿ ಮೀನು, ಕೋಳಿ ಅಥವಾ ಮಾಂಸವನ್ನು ಎಂದಿಗೂ ತಿನ್ನುವುದಿಲ್ಲವೆಂದು ವರದಿ ಮಾಡಿದ ಮಹಿಳೆಯರ ಸಂಖ್ಯೆಯಲ್ಲಿ ಶೇ.1.67ರಷ್ಟು ಕುಸಿತ ಕಂಡುಬಂದಿದೆ. ಅದೇ ರೀತಿ ಮೀನು, ಕೋಳಿ ಅಥವಾ ಮಾಂಸವನ್ನು ಎಂದಿಗೂ ತಿನ್ನುವುದಿಲ್ಲವೆಂದು ಹೇಳುವ ಪುರುಷರ ಸಂಖ್ಯೆಯಲ್ಲಿ ಶೇ.23ರಷ್ಟು ಕುಸಿತ ಕಂಡುಬಂದಿದೆ. ಇದೇ ವೇಳೆ ದೇಶದಲ್ಲಿ ಮೀನು, ಕೋಳಿ ಅಥವಾ ಮಾಂಸ ಸೇವಿಸುವ ಮಹಿಳೆಯರ ಸಂಖ್ಯೆ ಶೇ.5.37ರಷ್ಟು ಹೆಚ್ಚಿದ್ದು, ಪುರುಷರ ಸಂಖ್ಯೆ ಶೇ.17.18ರಷ್ಟು ಹೆಚ್ಚಾಗಿದೆ. ಲ್ಯಾಕ್ಟೋ-ಸಸ್ಯಾಹಾರ ಮತ್ತು ಪ್ರಾದೇಶಿಕ ವ್ಯತ್ಯಾಸ ವಾಸ್ತವವಾಗಿ ತಮ್ಮನ್ನು ಸಸ್ಯಾಹಾರಿ ಎಂದು ಕರೆದುಕೊಳ್ಳುವ ಜನರು ಬಹುಶಃ ಲ್ಯಾಕ್ಟೋ-ಸಸ್ಯಾಹಾರಿಗಳು, ಅಂದರೆ ಅವರು ಹಸುಗಳು ಮತ್ತು ಎಮ್ಮೆಗಳಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುತ್ತಾರೆ. - ಡೇಟಾ ಪ್ರಕಾರ, ಕೇವಲ ಶೇ.5.8ರಷ್ಟು ಮಹಿಳೆಯರು ಮತ್ತು ಶೇ.3.7ರಷ್ಟು ಪುರುಷರು ತಾವು ಹಾಲು ಅಥವಾ ಮೊಸರನ್ನು ಸಹ ಸೇವಿಸಲಿಲ್ಲವೆಂದು ವರದಿ ಮಾಡಿದ್ದಾರೆ. ಶೇ.48.8ರಷ್ಟು ಪುರುಷರು ಮತ್ತು ಮಹಿಳೆಯರು ಪ್ರತಿದಿನ ಹಾಲು ಅಥವಾ ಮೊಸರು ಸೇವಿಸುತ್ತಾರೆಂದು ಹೇಳಿದ್ದಾರೆ. ಅದೇ ರೀತಿ ಶೇ.72.2ರಷ್ಟು ಮಹಿಳೆಯರು ಮತ್ತು ಶೇ.79.8ರಷ್ಟು ಪುರುಷರು ಅವರು ವಾರಕ್ಕೊಮ್ಮೆಯಾದರೂ ಹಾಲು ಅಥವಾ ಮೊಸರು ಸೇವಿಸುತ್ತಾರೆಂದು ಹೇಳಿದ್ದಾರೆ. ಹಾಲು & ಹಾಲಿನ ಉತ್ಪನ್ನ ಸೇವಿಸುವ ಜನರು ಕಡಿಮೆ ಅಥವಾ ಮಾಂಸ ಸೇವಿಸುತ್ತಾರೆ ಗೃಹಬಳಕೆಯ ವೆಚ್ಚ ಸಮೀಕ್ಷೆ 2022-2023ರ ಮಾಹಿತಿಯ ಪ್ರಕಾರ, ಹಾಲಿನ ಸೇವನೆಯು ಸಸ್ಯಾಹಾರದ ಸಂಭವಕ್ಕೆ ನೇರವಾಗಿ ಸಂಬಂಧಿಸಿದೆ. ಹೆಚ್ಚು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸುವ ಜನರು ತುಂಬಾ ಕಡಿಮೆ ಅಥವಾ ಮಾಂಸವನ್ನು ತಿನ್ನುತ್ತಾರೆ. ವಾಸ್ತವವಾಗಿ ಭಾರತದಲ್ಲಿ ಹಾಲನ್ನು ಮಾಂಸಕ್ಕೆ ಪೌಷ್ಟಿಕಾಂಶದ ಪರ್ಯಾಯವಾಗಿ ನೋಡಲಾಗುತ್ತಿದೆ. ಒಟ್ಟಾರೆ ದೇಶದಲ್ಲಿ 14 ರಾಜ್ಯಗಳಲ್ಲಿ ಹಾಲಿನ ಮೇಲಿನ ಮಾಸಿಕ ತಲಾ ವೆಚ್ಚವು () ಮೀನು, ಮಾಂಸ ಅಥವಾ ಮೊಟ್ಟೆಗಳ ಮೇಲಿನ ವೆಚ್ಚಕ್ಕಿಂತ ಹೆಚ್ಚಾಗಿರುತ್ತದೆ ಮತ್ತು 16 ರಾಜ್ಯಗಳು ಪ್ರತಿಯಾಗಿ ಇದು ಕಡಿಮೆ ಇದೆ. ಇದನ್ನೂ ಓದಿ: ದ ಪ್ರಕಾರ, ಒಟ್ಟಾರೆ ಈ ಹಾಲು ಸೇವಿಸುವ ರಾಜ್ಯಗಳಲ್ಲಿ ಕಡಿಮೆ ಪ್ರಮಾಣದ ಜನರು (ರಾಷ್ಟ್ರೀಯ ಸರಾಸರಿಗೆ ಹೋಲಿಸಿದರೆ) ಮೀನು, ಕೋಳಿ ಅಥವಾ ಮಾಂಸವನ್ನು ತಿನ್ನುತ್ತಾರೆಂದು ವರದಿ ತಿಳಿಸಿದೆ. ಈ ಸಂದರ್ಭದಲ್ಲಿ ಸಿಕ್ಕಿಂ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಇದಕ್ಕೆ ಹೊರತಾಗಿದ್ದವು, ಅಲ್ಲಿ ಮಾಂಸದ ವೆಚ್ಚಕ್ಕಿಂತ ಹಾಲಿನ ವೆಚ್ಚ ಹೆಚ್ಚಾಗಿದೆ. ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಜನರು (ಪುರುಷರು ಮತ್ತು ಮಹಿಳೆಯರಿಗಾಗಿ) ಕನಿಷ್ಠ ವಾರಕ್ಕೊಮ್ಮೆ ಮೀನು, ಕೋಳಿ ಅಥವಾ ಮಾಂಸವನ್ನು ತಿನ್ನುತ್ತಾರೆ ಎಂದು ವರದಿ ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_1.txt ADDED
@@ -0,0 +1 @@
 
 
1
+ : ಮಾನವ ದೇಹದಲ್ಲಿನ ಅತ್ಯಂತ ದೊಡ್ಡ ಮೂಳೆ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಚೋಳ ರಾಜವಂಶವನ್ನು ಸ್ಥಾಪಿಸಿದವರು ಯಾರು? ಉತ್ತರ: ವಿಜಯಾಲಯ ಪ್ರಶ್ನೆ 2:ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಮೊದಲ ಒಲಿಂಪಿಕ್ ಕಂಚಿನ ಪದಕವನ್ನು ಗೆದ್ದ ಆಟಗಾರ ಯಾರು? ಉತ್ತರ: ವಿಜೇಂದರ್ ಸಿಂಗ್ ಪ್ರಶ್ನೆ 3:ಭಾರತದಲ್ಲಿ ಕುಶಾನ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಯಾರು? ಉತ್ತರ: ಕುಜುಲ ಕಡ್ಫಿಸೆಸ್ ಪ್ರಶ್ನೆ 4:ಫಿನ್‌ಲ್ಯಾಂಡ್‌ನ ರಾಜಧಾನಿ ಯಾವುದು? ಉತ್ತರ: ಹೆಲ್ಸಿಂಕಿ ಪ್ರಶ್ನೆ 5:ಮೊದಲ ಮಹಾಯುದ್ಧ ಯಾವಾಗ ನಡೆಯಿತು? ಉತ್ತರ: 28 ಜುಲೈ 1914 - 11 ನವೆಂಬರ್ 1918 ಇದನ್ನೂ ಓದಿ: ಪ್ರಶ್ನೆ 6:ಓಝೋನ್ ಪದರವು ವಾತಾವರಣದ ಯಾವ ಪದರದಲ್ಲಿದೆ? ಉತ್ತರ: ವಾಯುಮಂಡಲ ಪ್ರಶ್ನೆ 7:ವರ್ಕಲಾ ಬೀಚ್ ಯಾವ ರಾಜ್ಯದಲ್ಲಿದೆ? ಉತ್ತರ: ಕೇರಳ ಪ್ರಶ್ನೆ 8:ಪಾಟ್ನಾದ ಪ್ರಾಚೀನ ಹೆಸರೇನು? ಉತ್ತರ: ಪಾಟಲೀಪುತ್ರ ಪ್ರಶ್ನೆ 9:ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ಯಾವ ಕಕ್ಷೆಯಲ್ಲಿದೆ? ಉತ್ತರ: ಕಡಿಮೆ ಭೂಮಿಯ ಕಕ್ಷೆ ಪ್ರಶ್ನೆ 10:ಮಾನವ ದೇಹದಲ್ಲಿನ ಅತ್ಯಂತ ದೊಡ್ಡ ಮೂಳೆ ಯಾವುದು? ಉತ್ತರ: ಎಲುಬು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_10.txt ADDED
@@ -0,0 +1 @@
 
 
1
+ : ಜಿಂಕೆಗಳ ನಡುವೆ ಅಡಗಿದ ಆ ವಿಶೇಷ ಪ್ರಾಣಿ ಗುರುತಿಸಿ ನೋಡೋಣ.. ತಲೆ ಇದ್ದವರಿಗೆ ಮಾತ್ರ ಹೊಳೆಯುವುದು! : ಈ ಒಗಟಿನ ಫೋಟೋದಲ್ಲಿ ಒಂದು ದೊಡ್ಡ ಜಿಂಕೆಗಳ ಹಿಂಡು ಇದೆ. ಅದರಲ್ಲಿ ವಿಶಿಷ್ಟ ಪ್ರಾಣಿಯೊಂದು ಅಡಗಿದ್ದು, ಅದನ್ನು ಹುಡುಕುವ ಸವಾಲು ನಿಮಗಿದೆ. :ಆಪ್ಟಿಕಲ್ ಇಲೂಷನ್‌ ನ ಅನೇಕ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತವೆ. ಇವುಗಳಲ್ಲಿ ಕೆಲವು ತಲೆಗೆ ಸಿಕ್ಕಾಪಟ್ಟೆ ಹುಳ ಬಿಡುತ್ತವೆ. ಈ ಒಗಟುಗಳನ್ನು ಪರಿಹರಿಸಲು ತಲೆ ಕೆಡೆಸಿಕೊಳ್ಳಬೇಕಾಗುತ್ತದೆ. ಇದೀಗ ಸುಲಭವಾಗಿ ಪರಿಹರಿಸಬಹುದಾದ ಒಂದು ಫೋಟೋ ಪಜಲ್‌ನನ್ನು ನಿಮಗಾಗಿ ತಂದಿದ್ದೇವೆ. ಈ ಫೋಟೋದಲ್ಲಿ ಜಿಂಕೆಗಳ ಹಿಂಡು ಗೋಚರಿಸುತ್ತದೆ. ಅವುಗಳ ನಡುವೆ ವಿಶಿಷ್ಟ ಜಿಂಕೆ ಅಡಗಿದ್ದು, ಅದನ್ನು ಹುಡುಕುವ ಸವಾಲು ನೀಡಲಾಗಿದೆ. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ ಜಿಂಕೆಗಳ ಹಿಂಡಿನಲ್ಲಿ ವಿಶಿಷ್ಟ ಜಿಂಕೆ ಅಡಗಿದ್ದು, ಅದನ್ನು ಹುಡುಕಲು 12 ಸೆಕೆಂಡುಗಳ ಕಾಲಾವಕಾಶ ನೀಡಲಾಗಿದೆ. ಈ ಫೋಟೋದಲ್ಲಿರುವ ವಿಶಿಷ್ಟವಾದ ಜಿಂಕೆಯನ್ನು ಕಂಡುಕೊಂಡರೆ, ನೀವು ತೀಕ್ಷ್ಣವಾದ ಕಣ್ಣು ಹೊಂದಿರುವಿರಿ ಎಂದು ಪರಿಗಣಿಸಲಾಗುತ್ತದೆ. ಇದುವರೆಗೆ ಶೇ.95ರಷ್ಟು ಮಂದಿ ಈ ಒಗಟು ಬಿಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುವ ಈ ಫೋಟೋದಲ್ಲಿರುವ ಆ ವಿಶಿಷ್ಟ ಜಿಂಕೆ ಹುಡುಕಲು ಇಲ್ಲಿಯವರೆಗೆ ಅನೇಕರು ವಿಫಲರಾಗಿದ್ದಾರೆ. ನೀವು ಆ ಜಿಂಕೆಯನ್ನು ಕಂಡುಹಿಡಿದಿದದ್ದರೆ ಅದನ್ನ ಕಾಮೆಂಟ್ ಮೂಲಕ ನಮಗೆ ತಿಳಿಸಬಹುದು. ಆದರೆ ನೀವು ಒಗಟನ್ನು ಪರಿಹರಿಸಲು ಸಾಧ್ಯವಾಗದಿದ್ದರೆ, ಉತ್ತರ ಇಲ್ಲಿದೆ ನೋಡಿ. ಕೆಂಪು ಬಣ್ಣದ ಮಾರ್ಕ ಇರುವಲ್ಲಿ ವಿಶಿಷ್ಟವಾದ ಜಿಂಕೆಯನ್ನು ನೋಡಬಹುದು. ಈ ವಿಶಿಷ್ಟ ಜಿಂಕೆಯ ಕಣ್ಣು ಸ್ವಲ್ಪ ವಿಚಿತ್ರವಾಗಿ ಕಾಣುತ್ತದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_100.txt ADDED
@@ -0,0 +1 @@
 
 
1
+ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಪಾಠ ಮಾಡಲು ಶಿಕ್ಷಕರಿಗೆ ಅರ್ಜಿ ಆಹ್ವಾನ ಬಾಲಕರ, ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಪ್ರಸಕ್ತ ಸಾಲಿಗೆ ವಿಜ್ಞಾನ, ಗಣಿತ, ದೈಹಿಕ, ಯೋಗ, ಸಂಗೀತ, ಕ್ರಾಫ್ಟ್ ವಿಷಯಗಳಲ್ಲಿ ಪಾಠ ಮಾಡಲು ಅರೆಕಾಲಿಕ ಶಿಕ್ಷಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ದಾವಣಗೆರೆ:ಬಾಲಕರ, ಬಾಲಕಿಯರ ಸರ್ಕಾರಿ ಬಾಲಮಂದಿರದ ಮಕ್ಕಳಿಗೆ ಪ್ರಸಕ್ತ ಸಾಲಿಗೆ ವಿಜ್ಞಾನ, ಗಣಿತ, ದೈಹಿಕ, ಯೋಗ, ಸಂಗೀತ, ಕ್ರಾಫ್ಟ್ ವಿಷಯಗಳಲ್ಲಿ ಪಾಠ ಮಾಡಲು ಅರೆಕಾಲಿಕ ಶಿಕ್ಷಕರ ಸೇವೆಯನ್ನು ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ವಿಜ್ಞಾನ, ಗಣಿತ ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಬಿಎಸ್ಸಿ, ಬಿ.ಇಡಿ, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ದೈಹಿಕ, ಯೋಗ ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಸಿಪಿಇಡಿ, ಬಿಪಿಇಡಿ ಯೋಗ ಟ್ರೈನಿಂಗ್, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ಸಂಗೀತ, ಕ್ರಾಪ್ಟ್ ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಡಿಪ್ಲೋಮಾ, ಹಾರ್ಟ್ ಮತ್ತು ಕ್ರಾಪ್ಟ್ ಪದವಿ, ಮ್ಯೂಸಿಕ್ ಪದವೀಧರರು, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ಪಾಠ ಹೇಳುವ ಅರೆಕಾಲಿಕ ಶಿಕ್ಷಕರು ಹುದ್ದೆ ಸಂಖ್ಯೆ-2, ವಿದ್ಯಾರ್ಹತೆ ಬಿಎಸ್ಸಿ, ಬಿ.ಇಡಿ, 1 ವರ್ಷದ ಅನುಭವ, 25 ರಿಂದ 55 ವರ್ಷ ವಯೋಮಾನದವರಾಗಿರಬೇಕು. ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕವಿತಾ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_101.txt ADDED
@@ -0,0 +1 @@
 
 
1
+ ಬಿಹಾರಕ್ಕಿಲ್ಲ ವಿಶೇಷ ರಾಜ್ಯ ಸ್ಥಾನಮಾನ..! ಸ್ಪೋಟಕವಾಗುತ್ತಾ ನಿತೀಶ್ ಅಸಮಾಧಾನ..? ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ಉತ್ತರವನ್ನು ನೀಡಿದ್ದು, 5 ಅಂಶಗಳನ್ನು ನೀಡಿದ್ದು, ಅದರ ಪ್ರಕಾರ ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷದ ನಾಯಕರು ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತೆ ನಿರಂತರವಾಗಿ ಒತ್ತಾಯಿಸುತ್ತಿರುವ ಬೆನ್ನಲ್ಲೇ ಕೇಂದ್ರದ ಪ್ರತಿಕ್ರಿಯೆ ಬಂದಿದೆ. ನವದೆಹಲಿ:ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ತನ್ನ ಉತ್ತರವನ್ನು ನೀಡಿದ್ದು, 5 ಅಂಶಗಳನ್ನು ನೀಡಿದ್ದು, ಅದರ ಪ್ರಕಾರ ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತಿಲ್ಲ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಪಕ್ಷದ ನಾಯಕರು ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತೆ ನಿರಂತರವಾಗಿ ಒತ್ತಾಯಿಸುತ್ತಿರುವ ಬೆನ್ನಲ್ಲೇ ಕೇಂದ್ರದ ಪ್ರತಿಕ್ರಿಯೆ ಬಂದಿದೆ. ಭಾನುವಾರ ನಡೆದ ಸರ್ವಪಕ್ಷ ಸಭೆಯಲ್ಲೂ ಜೆಡಿಯು ನಾಯಕರು ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿದ್ದರು. ಬಿಹಾರದ ಮಧುಬನಿಯ ಝಂಜರ್‌ಪುರ ಕ್ಷೇತ್ರದ ಜೆಡಿಯು ಸಂಸದ ರಾಮಪ್ರೀತ್ ಮಂಡಲ್ ಅವರ ಪ್ರಶ್ನೆಗೆ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಲೋಕಸಭೆಯಲ್ಲಿ ಲಿಖಿತ ಉತ್ತರವನ್ನು ನೀಡಿದ್ದು, ಬಿಹಾರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ಏಕೆ ಸಿಗುವುದಿಲ್ಲ ಎಂದು ವಿವರಿಸಿದ್ದಾರೆ. ಇದನ್ನೂ ಓದಿ: ಬಿಹಾರಕ್ಕೆ ವಿಶೇಷ ರಾಜ್ಯ ಸ್ಥಾನಮಾನ ಸಿಗುವುದಿಲ್ಲವೇಕೆ? ಸ್ಥಿತಿ:ಹಿಂದಿನ ವರ್ಷಗಳಲ್ಲಿ, ರಾಷ್ಟ್ರೀಯ ಅಭಿವೃದ್ಧಿ ಮಂಡಳಿ (ಎನ್‌ಡಿಸಿ) ಯಿಂದ ಯೋಜನಾ ಸಹಾಯಕ್ಕಾಗಿ ಕೆಲವು ರಾಜ್ಯಗಳಿಗೆ ವಿಶೇಷ ರಾಜ್ಯ ಸ್ಥಾನಮಾನವನ್ನು ನೀಡಲಾಯಿತು. ಆದರೆ, ವಿಶೇಷ ಸ್ಥಾನಮಾನ ನೀಡಿರುವ ರಾಜ್ಯಗಳು ಹಲವು ಮಾನದಂಡಗಳಿಗೆ ಹೊಂದಿಕೊಂಡಿವೆ. ಜೆಡಿಯು ಸಂಸದ ರಾಮಪ್ರೀತ್ ಮಂಡಲ್ ಅವರಿಗೆ ನೀಡಿದ ಉತ್ತರದಲ್ಲಿ, ಈ ಮಾನದಂಡಗಳಿಗೆ ವಿಶೇಷ ಗಮನ ಬೇಕು ಎಂದು ಹೇಳಲಾಗಿದೆ. ಇದನ್ನೂ ಓದಿ: ವಿಶೇಷ ಸ್ಥಾನಮಾನ ಪಡೆಯಲು ಮಾನದಂಡಗಳೇನು? 1. ಗುಡ್ಡಗಾಡು ಮತ್ತು ಕಷ್ಟಕರವಾದ ಭೂಪ್ರದೇಶ.2. ಕಡಿಮೆ ಜನಸಂಖ್ಯಾ ಸಾಂದ್ರತೆ ಮತ್ತು/ಅಥವಾ ಬುಡಕಟ್ಟು ಜನಸಂಖ್ಯೆಯ ದೊಡ್ಡ ಪಾಲು.3. ನೆರೆಯ ದೇಶಗಳೊಂದಿಗೆ ಗಡಿಗಳಲ್ಲಿ ಕಾರ್ಯತಂತ್ರದ ಸ್ಥಳ.4. ಆರ್ಥಿಕ ಮತ್ತು ಮೂಲಸೌಕರ್ಯ ಹಿಂದುಳಿದಿರುವಿಕೆ.5. ರಾಜ್ಯ ಹಣಕಾಸುಗಳ ಕಾರ್ಯಸಾಧ್ಯವಲ್ಲದ ಸ್ವಭಾವ. ಮೇಲೆ ನೀಡಲಾದ ಎಲ್ಲಾ ಅಂಶಗಳು ಮತ್ತು ರಾಜ್ಯದ ನಿರ್ದಿಷ್ಟ ಪರಿಸ್ಥಿತಿಯ ಸಮಗ್ರ ಪರಿಗಣನೆಯ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದಕ್ಕೂ ಮೊದಲು, ವಿಶೇಷ ವರ್ಗದ ಸ್ಥಾನಮಾನಕ್ಕಾಗಿ ಬಿಹಾರ�� ವಿನಂತಿಯನ್ನು ಇಂಟರ್-ಮಿನಿಸ್ಟ್ರೀಯಲ್ ಗ್ರೂಪ್ () ಪರಿಗಣಿಸಿತ್ತು, ಅದು ತನ್ನ ವರದಿಯನ್ನು 30 ಮಾರ್ಚ್ 2012 ರಂದು ಸಲ್ಲಿಸಿತು. ಅಸ್ತಿತ್ವದಲ್ಲಿರುವ ಮಾನದಂಡಗಳ ಆಧಾರದ ಮೇಲೆ ಬಿಹಾರಕ್ಕೆ ವಿಶೇಷ ವರ್ಗದ ಸ್ಥಾನಮಾನಕ್ಕೆ ಯಾವುದೇ ಪ್ರಕರಣವಿಲ್ಲ ಎಂದು ತೀರ್ಮಾನಿಸಿದೆ. ಸೋಮವಾರದ ಹಿಂದೆ, ಬಿಜೆಪಿ ನಾಯಕ ಮತ್ತು ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರು ಬಿಹಾರಕ್ಕೆ ವಿಶೇಷ ಆರ್ಥಿಕ ನೆರವು ನೀಡಬೇಕೆಂದು ಒತ್ತಾಯಿಸಿದರು ಮತ್ತು ರಾಜ್ಯಕ್ಕೆ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ಹೇಳಿದರು. ಆದರೆ, ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದರು. ಬಿಹಾರಕ್ಕೆ ವಿಶೇಷ ಆರ್ಥಿಕ ನೆರವು ನೀಡುವಂತೆ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರಿಗೆ ಮನವಿ ಮಾಡಿದ್ದೇವೆ ಎಂದು ಹೇಳಿದ್ದರು. ಈ ಬಗ್ಗೆ ಪ್ರಧಾನಿ ಹಾಗೂ ಕೇಂದ್ರ ಹಣಕಾಸು ಸಚಿವರು ನಿರ್ಧಾರ ಕೈಗೊಳ್ಳಲಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_102.txt ADDED
@@ -0,0 +1 @@
 
 
1
+ 2024: ಪದವಿ ಪಾಸಾದವರಿಗೆ SBIನಲ್ಲಿ 1,040 ಹುದ್ದೆಗಳಿಗೆ ಅರ್ಜಿ ಆಹ್ವಾನ 2024: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ()ದಲ್ಲಿ ಖಾಲಿ ಇರುವ 1,040 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. 2024:ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾಲಿ ಇರುವ 1,040 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಪದವತಿ ಪಾಸಾದ ಅಭ್ಯರ್ಥಿಳು ಈ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 2024ರ ಅಧಿಕೃತ ಅಧಿಸೂಚನೆಯ ಮೂಲಕ ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಆಗಸ್ಟ್ 8ರೊಳಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ... ಹುದ್ದೆಯ ವಿವರ:ದಲ್ಲಿ ಖಾಲಿ ಇರುವ 1,040 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ವಿದ್ಯಾರ್ಹತೆ:ಸೆಂಟ್ರಲ್ ರಿಸರ್ಚ್ ಟೀಮ್(ಪ್ರಾಡಕ್ಟ್ ಲೀಡ್)ಗೆ ಎಂಬಿಎ, ಪಿಜಿಡಿಎಂ, ಪಿಜಿಡಿಬಿಎಂ, ಸೆಂಟ್ರಲ್ ರಿಸರ್ಚ್ ಟೀಮ್(ಬೆಂಬಲ)ಗೆ ಪದವಿ, ಸ್ನಾತಕೋತ್ತರ ಪದವಿ, ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್(ಟೆಕ್ನಾಲಜಿ)ಗೆ ಎಂಬಿಎ, ಎಂಎಂಎಸ್, ಎಂಇ ಅಥವಾ ., ಬಿಇ ಅಥವಾ ., ಪ್ರಾಜೆಕ್ಟ್ ಡೆವಲಪ್ಮೆಂಟ್ ಮ್ಯಾನೇಜರ್(ವ್ಯವಹಾರ)ಗೆ ಎಂಬಿಎ, ಪಿಜಿಡಿಎಂ, ಪಿಜಿಡಿಬಿಎಂ, ರಿಲೇಶನ್ಶಿಪ್ ಮ್ಯಾನೇಜರ್‌ಗೆ ಪದವಿ & ಇನ್ವೆಸ್ಟ್ಮೆಂಟ್ ಸ್ಪೆಷಲಿಸ್ಟ್‌ಗೆ ಎಂಬಿಎ, ಪಿಜಿಡಿಎಂ, ಪಿಜಿಡಿಬಿಎಂ ಪದವಿ ಪೂರ್ಣಗೊಳಿಸಿರಬೇಕು. ಇದನ್ನೂ ಓದಿ: ಉದ್ಯೋಗ ಸ್ಥಳ:ಆಯ್ಕೆಯಾದ ಅಭ್ಯರ್ಥಿಗಳು ವಾಣಿಜ್ಯ ನಗರಿ ಮುಂಬೈನಲ್ಲಿ ಕಾರ್ಯನಿರ್ವಹಿಸಬೇಕು. ವೇತನ:ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 2,50,000 ರಿಂದ 5,08,333 ರೂ. ವೇತನ ನೀಡಲಾಗುತ್ತದೆ. ಅರ್ಜಿ ಶುಲ್ಕ:/// ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಸಾಮಾನ್ಯ/ಇಡಬ್ಲ್ಯೂಎಸ್ ಅಭ್ಯರ್ಥಿಗಳು 750 ರೂ. ಅರ್ಜಿ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬೇಕು. ಆಯ್ಕೆ ಪ್ರಕ್ರಿಯೆ:ಶಾರ್ಟ್ ಲಿಸ್ಟಿಂಗ್, ಸಂವಾದ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವುದು ಹೇಗೆ?:ಮೊದಲನೆಯದಾಗಿಯ ಅಧಿಸೂಚನೆಯನ್ನು ಪರಿಶೀಲಿಸಿ. ಒಂದು ವೇಳೆ ನೀವು ಅರ್ಹ ಅಭ್ಯರ್ಥಿಯಾಗಿದ್ದಲ್ಲಿ SBIನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಆನ್‌ಲೈನ್‌ ಮೋಡ್ ಮೂಲಕ ಅರ್ಜಿಯನ್ನು ಭರ್ತಿ ಮಾಡಬೇಕು. ಅರ್ಜಿ ಸಲ್ಲಿಸುವ ಮೊದಲು ಸರಿಯಾದ ಇ-ಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯನ್ನು ನೀಡಬೇಕು. ಐಡಿ ಪ್ರೂಫ್, ವಯಸ್ಸು, ಶೈಕ್ಷಣಿಕ ಅರ್ಹತೆ, ರೆಸ್ಯೂಮ್ ಮುಂತಾದ ದಾಖಲೆಗಳನ್ನು ಅಪ್‌ಲೋಡ್‌ ಮಾಡಬೇಕು. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನ���, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_103.txt ADDED
@@ -0,0 +1 @@
 
 
1
+ : ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಬಾಗ್ದಾದ್ ಮೂಲಕ ಯಾವ ನದಿ ಹರಿಯುತ್ತದೆ? ಉತ್ತರ: ಟೈಗ್ರಿಸ್ ನದಿ ಪ್ರಶ್ನೆ 2:ಪ್ರದೇಶದ ಪ್ರಕಾರ ಆಫ್ರಿಕಾದ ಅತಿದೊಡ್ಡ ದೇಶ ಯಾವುದು? ಉತ್ತರ: ಅಲ್ಜೀರಿಯಾ ಪ್ರಶ್ನೆ 3:ನ್ಯೂಜಿಲೆಂಡ್‌ನ ರಾಜಧಾನಿ ಯಾವುದು? ಉತ್ತರ: ವೆಲ್ಲಿಂಗ್ಟನ್ ಪ್ರಶ್ನೆ 4:ಭೂಮಿಯ ಸುತ್ತ ಸುತ್ತುವ ಮೊದಲ ಮಾನವ ನಿರ್ಮಿತ ಉಪಗ್ರಹದ ಹೆಸರೇನು? ಉತ್ತರ: ಸ್ಪುಟ್ನಿಕ್ ಪ್ರಶ್ನೆ 5:ಯಾವ ಕ್ರೀಡೆಯನ್ನು 'ಕ್ರೀಡೆಯ ರಾಜ' ಎಂದು ಕರೆಯಲಾಗುತ್ತದೆ? ಉತ್ತರ: ಸಾಕರ್ (ಫುಟ್ಬಾಲ್) ಇದನ್ನೂ ಓದಿ: ಪ್ರಶ್ನೆ 6:ಪ್ರಪಂಚದಲ್ಲಿ ಯಾವ ಮರುಭೂಮಿ ದೊಡ್ಡದಾಗಿದೆ? ಉತ್ತರ: ಸಹಾರಾ ಮರುಭೂಮಿ ಪ್ರಶ್ನೆ 7:ವಿಶ್ವದ ಅತ್ಯಂತ ಚಿಕ್ಕ ದೇಶ ಯಾವುದು? ಉತ್ತರ: ವ್ಯಾಟಿಕನ್ ಸಿಟಿ ಪ್ರಶ್ನೆ 8:ಮೌಂಟ್ ಎವರೆಸ್ಟ್ ಯಾವ ಪರ್ವತ ಶ್ರೇಣಿಯಲ್ಲಿದೆ? ಉತ್ತರ: ಹಿಮಾಲಯ ಪ್ರಶ್ನೆ 9: ಗ್ರೇಟ್ ಬ್ಯಾರಿಯರ್ ರೀಫ್ ಯಾವ ಆಸ್ಟ್ರೇಲಿಯನ್ ರಾಜ್ಯದ ಕರಾವಳಿಯಲ್ಲಿದೆ? ಉತ್ತರ: ಕ್ವೀನ್ಸ್‌ಲ್ಯಾಂಡ್ ಪ್ರಶ್ನೆ 10:ಅಮೆರಿಕದ ಅತಿ ಉದ್ದದ ನದಿ ಯಾವುದು? ಉತ್ತರ: ಮಿಸೌರಿ ನದಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_104.txt ADDED
@@ -0,0 +1 @@
 
 
1
+ ಮಳೆ ಅನಾಹುತ ಮತ್ತು‌ ಪ್ರವಾಹದಿಂದ ಆದ ಜೀವಹಾನಿಗೆ ತುರ್ತಾಗಿ ಪರಿಹಾರ ಕೊಡಬೇಕು-ಸಿಎಂ ಸಿದ್ದರಾಮಯ್ಯ ಸೂಚನೆ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು. ಕಾರವಾರ:ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಪ್ರವಾಹ ಪೀಡಿತ ಪ್ರದೇಶಗಳ ಪರಿಹಾರ ಕಾರ್ಯದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಕೆಲವು ಪ್ರಮುಖ ಸೂಚನೆಗಳನ್ನು ನೀಡಿದರು. ಇದನ್ನೂ ಓದಿ: ಮಳೆಯಿಂದ ಕೃಷಿ ಮತ್ತು ತೋಟಗಾರಿಕೆ ಬೆಳೆ ನಷ್ಟಕ್ಕೆ ಎನ್‌ಡಿಆರ್‌ಎಫ್ ನಿಯಮದ ಪ್ರಕಾರ ಪರಿಹಾರ ಒಗದಿಸಲು ತಕ್ಷಣ ಹಾನಿಯ ವರದಿ ಸಲ್ಲಿಸಿ.ಕದ್ರಾ ಅಣೆಕಟ್ಟೆಯಿಂದ ಹೊರಬಿಡುವ ನೀರಿನಿಂದ ತೊಂದರೆಗೊಳಗಾಗುವ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಒದಗಿಸುವ ಬಗ್ಗೆ ಅಂತಿಮ ತೀರ್ಮಾನ ಮಾಡಿ ಎಂದು ಸಲಹೆ ನೀಡಿದರು. ಮಳೆ ಅನಾಹುತ ಮತ್ತು‌ ಪ್ರವಾಹದಿಂದ ಆದ ಜೀವಹಾನಿಗೆ ತುರ್ತಾಗಿ ಪರಿಹಾರ ಕೊಡಬೇಕು. ಕೋಸ್ಟಲ್ ಲೈನ್ ನಲ್ಲಿ ವಿದ್ಯುತ್ ಕಂಬಗಳ ಅಳವಡಿಕೆ, ಅಗತ್ಯ ಇರುವ ಕಡೆ ವೈರ್ ಗಳ ದುರಸ್ತಿ ಮತ್ತು ಬದಲಾವಣೆಗೆ ಮಾಡಬೇಕು ಎಂದು ಸೂಚಿಸಿದರು. ಇದನ್ನೂ ಓದಿ: ಜಿಲ್ಲೆಯಲ್ಲಿ ರಾಷ್ಟ್ರಿಯ ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಐ.ಆರ್.ಬಿ ಕಂಪನಿಯವರು ಟೋಲ್ ಏಕೆ ಸಂಗ್ರಹಿಸುತ್ತಿದ್ದೀರಿ? ಇದು ಸರಿಯಿಲ್ಲ. 2016ಕ್ಕೆ ಕಾಮಗಾರಿ ಮುಕ್ತಾಯಗೊಳಿಸಬೇಕಿದ್ದರೂ ಸಹ ಇದುವರೆಗೆ ಮುಕ್ತಾಯಗೊಳಿಸದೇ ಈ ಕಾಮಗಾರಿ ಬಗ್ಗೆ ಕೇಂದ್ರ ಸಚಿವರಿಗೂ ದಾರಿತಪ್ಪಿಸುವುದಲ್ಲದೆ ರಾಜ್ಯ ಸರ್ಕಾರಕ್ಕೂ ತಪ್ಪು ಮಾಹಿತಿ ನೀಡುತ್ತಿದ್ದೀರಿ. ಈ ಬಗ್ಗೆ ಕೇಂದ್ರ ಹೆದ್ದಾರಿ ಸಚಿವರಿಗೆ ತೀಕ್ಷ್ಣವಾಗಿ ಪತ್ರ ಬರೆಯುತ್ತೇನೆ ಎಂದು ಹೇಳಿದರು. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಕೂಡ ಮಳೆಯಾಗುವ ಸಾಧ್ಯತೆಗಳಿದ್ದು ಈ ರೀತಿಯಾಗಿ ಗುಡ್ಡ ಕುಸಿತ ಸೇರಿದಂತೆ ಯಾವುದೇ ರೀತಿಯ ಅಪಾಯವಾಗದಂತೆ ಜಿಲ್ಲಾಡಳಿತದಿಂದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಅಪಾಯಕಾರಿ ಪ್ರದೇಶಗಳಲ್ಲಿನ ಗ್ರಾಮಗಳಲ್ಲಿ ಗ್ರಾಮಮಟ್ಟದ ಟಾಸ್ಕ್ ಫೋರ್ಸ್ ಸಮಿತಿಗಳನ್ನು ರಚಿಸಿಕೊಂಡು ಅಲ್ಲಿನ ಪರಿಸ್ಥಿತಿಯ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು.ಜಿಲ್ಲೆಯ ಎಲ್ಲಾ ಅಧಿಕಾರಿಗಳು ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವ ಮೂಲಕ ಜನರಿಗೆ ಅಧಿಕಾರಿಗಳ ಮೇಲೆ ವಿಶ್ವಾಸ ಮೂಡುವಂತೆ ಕೆಲಸ ನಿರ್ವಹಿಸಬೇಕು ಎಂದು ಅವರು ಆಗ್ರಹಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವ���ಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_105.txt ADDED
@@ -0,0 +1 @@
 
 
1
+ , ಗೆ ಸೆಡ್ಡು ಹೊಡೆಯಲು ಮುಂದಾದ ಬಿಎಸ್ಎನ್ಎಲ್...! ರಿಲಯನ್ಸ್ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ಸುಂಕದ ಯೋಜನೆಗಳನ್ನು ದುಬಾರಿಗೊಳಿಸಿವೆ. ರಿಲಯನ್ಸ್ ಜಿಯೋ, ಏರ್‌ಟೆಲ್ ವೊಡಾಫೋನ್ ತಮ್ಮ ಸುಂಕದ ಯೋಜನೆಗಳನ್ನು ಶೇ 11-15 ರಷ್ಟು ದುಬಾರಿಗೊಳಿಸಿವೆ. :ರಿಲಯನ್ಸ್ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಟೆಲಿಕಾಂ ಕಂಪನಿಗಳು ಇತ್ತೀಚೆಗೆ ತಮ್ಮ ಸುಂಕದ ಯೋಜನೆಗಳನ್ನು ದುಬಾರಿಗೊಳಿಸಿವೆ. ರಿಲಯನ್ಸ್ ಜಿಯೋ, ಏರ್‌ಟೆಲ್ ವೊಡಾಫೋನ್ ತಮ್ಮ ಸುಂಕದ ಯೋಜನೆಗಳನ್ನು ಶೇ 11-15 ರಷ್ಟು ದುಬಾರಿಗೊಳಿಸಿವೆ.ಖಾಸಗಿ ಕಂಪನಿಗಳು ರೀಚಾರ್ಜ್ ದರವನ್ನು ಹೆಚ್ಚಿಸಿದ ನಂತರ, ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ. ಇದೆ ವೇಳೆ ಈ ನಿರ್ಧಾರದಿಂದಾಗಿ ಬಿಎಸ್ಎನ್ಎಲ್ ಅನುಕೂಲಕರವಾಗಿದೆ. - ಮತ್ತು ತಮ್ಮ ಯೋಜನೆಗಳ ದರಗಳನ್ನು ಹೆಚ್ಚಿಸಿದ ತಕ್ಷಣ, ಜನರು ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಟೀಕಿಸಲು ಪ್ರಾರಂಭಿಸಿದರು. , ನಂತಹ ಹ್ಯಾಶ್‌ಟ್ಯಾಗ್‌ಗಳು ಈಗ ಸೋಶಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿವೆ.ಖಾಸಗಿ ಕಂಪನಿಗಳ ಸುಂಕವನ್ನು ಹೆಚ್ಚಿಸಿದ ನಂತರ, ನ ಹೊಸ ಬಳಕೆದಾರರ ಸಂಖ್ಯೆ ವೇಗವಾಗಿ ಹೆಚ್ಚುತ್ತಿದೆ. ಅಗ್ಗದ ಯೋಜನೆಗಳಿಗಾಗಿ ಜನರು ನತ್ತ ಮುಖ ಮಾಡುತ್ತಿದ್ದಾರೆ. ಇದನ್ನೂ ಓದಿ: ಮಾಧ್ಯಮಗಳ ವರದಿ ಪ್ರಕಾರ, ಜುಲೈ 3-4 ರಿಂದ ಸುಮಾರು 25 ಲಕ್ಷ ಹೊಸ ಬಳಕೆದಾರರು ಗೆ ಸೇರಿದ್ದಾರೆ. ಅಗ್ಗದ ರೀಚಾರ್ಜ್ ಯೋಜನೆಗಳಿಗಾಗಿ ಜನರು ತಮ್ಮ ಸಂಖ್ಯೆಯನ್ನು ಗೆ ಪೋರ್ಟ್ ಮಾಡುತ್ತಿದ್ದಾರೆ. ಸಹ ಸುಮಾರು 2.5 ಮಿಲಿಯನ್ ಹೊಸ ಸಂಪರ್ಕಗಳನ್ನು ಪಡೆದುಕೊಂಡಿದೆ ಎನ್ನಲಾಗಿದೆ.ಇನ್ನೊಂದೆಡೆಗೆ ಜಿಯೋ-ಏರ್‌ಟೆಲ್‌ನೊಂದಿಗೆ ಸ್ಪರ್ಧಿಸಲು ಟಾಟಾದ ಬೆಂಬಲವನ್ನು ಪಡೆಯುತ್ತದೆ.ಒಂದೆಡೆ, ಜಿಯೋ-ಏರ್‌ಟೆಲ್ ಯೋಜನೆಗಳನ್ನು ದುಬಾರಿಗೊಳಿಸಿದರೆ, ಮತ್ತೊಂದೆಡೆ, ಸೇವೆಯ ಗುಣಮಟ್ಟವನ್ನು ಹೆಚ್ಚಿಸಲು ಟಾಟಾದೊಂದಿಗೆ ಕೈಜೋಡಿಸಿದೆ.ಭಾರತದಲ್ಲಿ 4G ನೆಟ್‌ವರ್ಕ್ ಅನ್ನು ಸುಧಾರಿಸುವ ಟಾಟಾದ ಐಟಿ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ಅಂದರೆ ಟಿಸಿಎಸ್ ಮತ್ತು ಬಿಎಸ್‌ಎನ್‌ಎಲ್ ನಡುವೆ 15,000 ಕೋಟಿ ರೂಪಾಯಿ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದಕ್ಕೆ ಅನುಗುಣವಾಗಿ 5ಜಿ ನೆಟ್‌ವರ್ಕ್‌ಗೆ ತಳಹದಿಯನ್ನು ರೂಪಿಸಲಾಗುವುದು.ಟಾಟಾದ ಮತ್ತು ಒಟ್ಟಾಗಿ ಭಾರತದ ಸುಮಾರು 1000 ಹಳ್ಳಿಗಳಿಗೆ 4G ಇಂಟರ್ನೆಟ್ ಸೇವೆಯನ್ನು ಹೊರತರಲಿದೆ. ಇದರಿಂದಾಗಿ ಹಳ್ಳಿಗಳ ಜನರು ಕೂಡ ವೇಗದ ಇಂಟರ್ನೆಟ್ ಸೇವೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ. ಇಲ್ಲಿಯವರೆಗೆ, ಜಿಯೋ ಮತ್ತು ಏರ್‌ಟೆಲ್‌ನಂತಹ ಟೆಲಿಕಾಂ ಕಂಪನಿಗಳು 4G ನೆಟ್‌ವರ್ಕ್‌ನಲ್ಲಿ ಪ್ರಾಬಲ್ಯ ಹೊಂದಿವೆ, ಆದರೆ ನ ಈ ಒಪ್ಪಂದವು ಈಗ ಖಾಸಗಿ ಕಂಪನಿಗಳಲ್ಲಿ ಭೀತಿಯನ್ನು ಹುಟ್ಟಿಸಿದೆ. ಗಾಗಿ ಸರ್ಕಾರ ಸಿದ್ಧಪಡಿಸಿದ ಯೋಜನೆ ಪ್ರಸ್ತುತ ಮಾರುಕಟ್���ೆಯಲ್ಲಿ ರಿಲಯನ್ಸ್ ಜಿಯೋ ಮತ್ತು ಏರ್‌ಟೆಲ್ ಪ್ರಾಬಲ್ಯ ಹೊಂದಿದೆ. ಈ ಓಟದಲ್ಲಿ ಬಿಎಸ್‌ಎನ್‌ಎಲ್ ಹಿಂದುಳಿದಿದೆ, ಆದರೆ ಈಗ ಅದನ್ನು ಬಲಪಡಿಸಲು ಸರ್ಕಾರವೂ ಯೋಜನೆ ರೂಪಿಸಿದೆ. ಬಿಎಸ್‌ಎನ್‌ಎಸ್‌ನ 4ಜಿ ನೆಟ್‌ವರ್ಕ್ ಅನ್ನು ಶೀಘ್ರವಾಗಿ ವಿಸ್ತರಿಸಲಾಗುವುದು ಇದಕ್ಕೆ ಪೂರಕವಾಗಿ ಸರ್ಕಾರಿ ಟೆಲಿಕಾಂ ಕಂಪನಿ ಅನ್ನು ನೊಂದಿಗೆ ವಿಲೀನಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ, ಒಂದುವೇಳೆ ಹಾಗಾದಲ್ಲಿ ಜೊತೆ ವಿಲೀನದಿಂದಾಗಿ ಜನರು ಉತ್ತಮ ಸೇವೆಗಳನ್ನು ಪಡೆಯುತ್ತಾರೆ. ಮೂಲಸೌಕರ್ಯವು ಮೊದಲಿಗಿಂತ ಬಲವಾಗಿರುತ್ತದೆ. ಆದರೆ, ವಿಲೀನದ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಹೀಗಾದರೆ ಬಿಎಸ್‌ಎನ್‌ಎಲ್‌ಗೆ ಲಾಭವಾಗಲಿದೆ. ಮತ್ತು ಆದಷ್ಟು ಬೇಗ 4G ಮತ್ತು 5G ಸೇವೆಗಳನ್ನು ಪ್ರಾರಂಭಿಸಲಿವೆ ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಈ ಸೇವೆಗಳೊಂದಿಗೆ, ಸರ್ಕಾರಿ ಟೆಲಿಕಾಂ ಕಂಪನಿಗಳಲ್ಲಿ ತ್ವರಿತ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಮತ್ತು ಆದಷ್ಟು ಬೇಗ 4G ಮತ್ತು 5G ಸೇವೆಗಳನ್ನು ಪ್ರಾರಂಭಿಸಲಿವೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ನ ಅಗ್ಗದ ಯೋಜನೆ ರಿಲಯನ್ಸ್ ಜಿಯೋ, ಏರ್‌ಟೆಲ್‌ನಂತಹ ಖಾಸಗಿ ಕಂಪನಿಗಳು ತಮ್ಮ ಬೆಲೆಯನ್ನು 11% ರಿಂದ 25% ರಷ್ಟು ಹೆಚ್ಚಿಸಿವೆ. ಏರ್‌ಟೆಲ್ ಮತ್ತು ವೊಡಾಫೋನ್‌ನ ಅಗ್ಗದ 28 ದಿನಗಳ ಯೋಜನೆ ಈಗ 199 ರೂ.ಗೆ ತಲುಪಿದೆ. ಆದರೆ ಜಿಯೋದ 28 ದಿನಗಳ ಅಗ್ಗದ ಯೋಜನೆ 189 ರೂ. ನ ಇದೇ ರೀತಿಯ ಯೋಜನೆ ಕೇವಲ 108 ರೂಗಳಿಗೆ ಲಭ್ಯವಿದೆ. ಖಾಸಗಿ ಕಂಪನಿಗಳಿಗೆ ಹೋಲಿಸಿದರೆ, ಯೋಜನೆಗಳು ತುಂಬಾ ಅಗ್ಗದ ಮತ್ತು ಕೈಗೆಟುಕುವ ದರದಲ್ಲಿ ಸಿಗಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_106.txt ADDED
@@ -0,0 +1 @@
 
 
1
+ : ಯಾವ ದೇಶವು ಅತಿ ಹೆಚ್ಚು ಜೀವಿತಾವಧಿಯನ್ನು ಹೊಂದಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ದೇಶವು ಅತಿ ಹೆಚ್ಚು ಜೀವಿತಾವಧಿಯನ್ನು ಹೊಂದಿದೆ? ಉತ್ತರ: ಹಾಂಗ್ ಕಾಂಗ್ ಪ್ರಶ್ನೆ 2:ಯಾವ ಭಾಷೆ ಹೆಚ್ಚು ಸ್ಥಳೀಯ ಭಾಷಿಕರು ಹೊಂದಿದೆ: ಇಂಗ್ಲೀಷ್ ಅಥವಾ ಸ್ಪ್ಯಾನಿಷ್? ಉತ್ತರ: ಸ್ಪ್ಯಾನಿಷ್ ಪ್ರಶ್ನೆ 3:ಸೂರ್ಯನ ಪ್ರಾಚೀನ ಗ್ರೀಕ್ ದೇವರು ಯಾರು? ಉತ್ತರ: ಅಪೊಲೊ ಪ್ರಶ್ನೆ 4:ವಿಶ್ವಸಂಸ್ಥೆಯನ್ನು ಯಾವ ವರ್ಷ ಸ್ಥಾಪಿಸಲಾಯಿತು? ಉತ್ತರ: 1945 ಪ್ರಶ್ನೆ 5:ರಷ್ಯಾದ ಕೊನೆಯ ರಾಜ ಯಾರು? ಉತ್ತರ: ನಿಕೋಲಸ್ ಇದನ್ನೂ ಓದಿ: ಪ್ರಶ್ನೆ 6:ಹೆಚ್ಚು ಕಾಫಿ ಕುಡಿಯುವ ದೇಶ ಯಾವುದು? ಉತ್ತರ: ಫಿನ್ಲ್ಯಾಂಡ್ ಪ್ರಶ್ನೆ 7:ಕ್ಷೀರಪಥದಲ್ಲಿ ಯಾವ ಗ್ರಹ ಅತ್ಯಂತ ಬಿಸಿಯಾಗಿರುತ್ತದೆ? ಉತ್ತರ: ಶುಕ್ರ ಪ್ರಶ್ನೆ 8:ಗ್ರೀಕ್ ವರ್ಣಮಾಲೆಯ 4ನೇ ಅಕ್ಷರ ಯಾವುದು? ಉತ್ತರ: ಡೆಲ್ಟಾ ಪ್ರಶ್ನೆ 9:ಯಾವ ಸ್ಪೋರ್ಟ್ಸ್ ಕಾರ್ ಕಂಪನಿಯು 911 ಅನ್ನು ತಯಾರಿಸುತ್ತದೆ? ಉತ್ತರ: ಪೋರ್ಷೆ ಪ್ರಶ್ನೆ 10:ಯಾವ ನಗರವನ್ನು "ದಿ ಎಟರ್ನಲ್ ಸಿಟಿ" ಎಂದು ಕರೆಯಲಾಗುತ್ತದೆ? ಉತ್ತರ: ರೋಮ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_107.txt ADDED
@@ -0,0 +1 @@
 
 
1
+ ಭಾರತ 1947ರಲ್ಲಿ ಸ್ವತಂತ್ರವಾದಾಗ ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿ ಯಾರಾಗಿದ್ರು.....! : 1947ರಲ್ಲಿ ಭಾರತಕ್ಕೆ ಸ್ವತಂತ್ರ ಸಿಕ್ಕಾಗ ಭಾರತ ಮಾತ್ರವಲ್ಲದೆ, ಈ ವ್ಯಕ್ತಿಗೆ ವಿಶ್ವದಾದ್ಯಂತ ಶ್ರೀಮಂತ ವ್ಯಕ್ತಿ ಎಂಬ ಪಟ್ಟ ಇತ್ತು. ಅದಲ್ಲದೆ ಆತನ ಬಳಿ ಅಪಾರ ಸಂಪತ್ತವಿತ್ತಂತೆ. ಅದ್ಯಾರು ಗೊತ್ತಾ ಇವರೆ ನೋಡಿ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಹೈದರಾಬಾದ್ ನಿಜಾಮರ ಆಡಳಿತದ ಸಂದರ್ಭದಲ್ಲಿ ಈ ವ್ಯಕ್ತಿ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಆತನ ಬಳಿ ಅಪಾರ ಸಂಪತ್ತು, ಆ ಸಂಪತ್ತು ಎಷ್ಟರ ಮಟ್ಟಿಗೆ ಇತ್ತು ಎಂದರೆ ಅದನ್ನು ಜನರಿಗೆ ಅಂದಾಜು ಮಾಡಲು ಸಾಧ್ಯವಿರಲಿಲ್ಲ ಈ ಕುರಿತಂದೆ ಒಂದು ಮ್ಯಾಗಝೀನ್ ಕೂಡ ದಾಖಲಾಗಿದೆ. ಇದನ್ನು ಓದಿ : ಆ ವ್ಯಕ್ತಿ ಬೇರೆ ಯಾರು ಅಲ್ಲ ಹೈದ್ರಾಬಾದ್ ನಿಜಾಮ್ ಮೀರ್ ಉಸ್ಮಾನ್ ಅಲಿ ಖಾನ್ ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಈ ವ್ಯಕ್ತಿ ಹೈದರಾಬಾದ್ ನಿಜಾಮ ನೀರ್ ಉಸ್ಮಾನ್ ಅಲಿ ಖಾನ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಈ ವ್ಯಕ್ತಿಯ ಬಳಿ 17.5 ಲಕ್ಷ ಕೋಟಿ ಸಂಪತ್ತು ಇತ್ತು ಎಂದು ದಾಖಲಾಗಿದೆ. ಫ್ರೀಡಂ ಅಟ್ ಮಿಡ್ ನೈಟ್ ಎಂಬ ಪುಸ್ತಕದಲ್ಲಿ ಈ ಕುರಿತು ದಾಖಲಾಗಿದ್ದು, ಆ ವ್ಯಕ್ತಿಯ ಬಳಿ ಸ್ವತಂತ್ರ ಸಮಯದಲ್ಲಿ ಎರಡು ಮಿಲಿಯನ್ ಪೌಂಡ್ಗಳಿಗಿಂತ ಹೆಚ್ಚು ಹಣ ಇತ್ತು ಮತ್ತು ನೋಟುಗಳ ಬಂಡಲ್ ನಿಜಾಮನ ಅರಮನೆಯಲ್ಲಿ ಇರಿಸಲಾಗಿತ್ತು. ಇದನ್ನು ಓದಿ : ಜೊತೆಗೆ ಆತನ ಬಳಿ ಚಿನ್ನ, ವಜ್ರ ಮತ್ತು ಬೆಳ್ಳಿಯ ಭಂಡಾರವಿತ್ತು. ಆದರೆ ಆ ವ್ಯಕ್ತಿ ಹೈದರಾಬಾದ್ ಮೀರ್ ಉಸ್ಮಾನ್ ಅಲಿ ಎಷ್ಟು ಶ್ರೀಮಂತರಾಗಿದ್ದಾರೋ, ಅಷ್ಟೇ ಜಿಪುಣ ಕೂಡ ಆಗಿದ್ದರಂತೆ ಮತ್ತು ಜಿಪುಣತನದಿಂದ ಕುಖ್ಯಾತಿಯನ್ನು ಪಡೆದಿದ್ದರು ಎಂದು ಹೇಳಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_108.txt ADDED
@@ -0,0 +1 @@
 
 
1
+ ಮುಂಬೈನಲ್ಲಿ ಕ್ಷಣಾರ್ಧದಲ್ಲಿ ಭಯಂಕರ ಶಬ್ದದೊಂದಿಗೆ ಕುಸಿದು ಕಟ್ಟಡ...ಬೆಚ್ಚಿಬೀಳಿಸುವ ಸಿಸಿಟಿವಿ ದೃಶ್ಯಾವಳಿ! : ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಬೇರೆ ಬೇರೆ ಹಲವು ಕಡೆಗಳಲ್ಲಿ ಮಳೆಯಾಗುತ್ತಿದ್ದು, ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದೆ. ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಭಾರಿ ಮಳೆಗೆ ಕಟ್ಟಡವೊಂದು ಕುಸಿದು ಬಿದ್ದಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಈ ದೃಶ್ಯ ಸೆರೆಯಾಗಿದ್ದು, ಭಯಂಕರ ಶಬ್ದದೊಂದಿಗೆ ಹತ್ತಿರದ ಅಂಗಡಿಯ ಸಿಸಿಟಿವಿ ದೃಶ್ಯಾವಳಿಗಳು ಇದನ್ನು ಸೆರೆಯಾಗಿದೆ. ದೊಡ್ಡ ಕಟ್ಟಡವೊಂದು ಭಯಂಕರ ಶಬ್ದದೊಂದಿಗೆ ಕ್ಷಣಾರ್ಧದಲ್ಲಿ ಕುಸಿದು ನೆಲಮಟ್ಟಕ್ಕೆ ಬಿದ್ದಿದೆ. ಈ ಕುರಿತು ಹತ್ತಿರದ ಅಂಗಡಿಯಲ್ಲಿ ಸಿಸಿಟಿವಿ ದೃಶ್ಯಾವಳಿಗಳು ಸೆರೆಯಾಗಿದೆ. ಇದನ್ನು ಓದಿ : ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗಿದ್ದು, ಸತತ ಮಳೆಯಿಂದ ಕಟ್ಟಡ ಕುಸಿದು ಬಿದ್ದಿದೆ. ಕುಸಿದು ಬಿದ್ದ ಕಟ್ಟಡದ ಅವಘಡ ಭಾರೀ ಅಪಾಯವನ್ನು ಉಂಟುಮಾಡಿದೆ. ಅಪಘಾತದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿದ್ದು, 13 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದಲ್ಲಿ ಸಿಲುಕಿಕೊಂಡವರ ರಕ್ಷಿಸುವ ಕಾರ್ಯ ನಡೆಯುತ್ತಿದೆ. ಅಪಘಾತದ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು, ಅಪಘಾತ ಉಂಟು ಮಾಡಿದೆ. 10.30am . 🙏 — (@s_r_khandelwal) ಮುಂಬೈನಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಎಡೆಬಿಡದೆ ಸುರಿದ ಮಳೆಯಿಂದಾಗಿ ಬಸ್ ನಿಲ್ದಾಣ, ರೈಲ್ವೆ ಸುರಂಗ ಮಾರ್ಗಗಳಲ್ಲಿ ಮಳೆ ನೀರು ಶೇಖರಣೆಯಾಗಿದೆ. ಈ ತಾಂತ್ರಿಕ ಸಮಸ್ಯೆಯಿಂದಾಗಿ ಸೆಂಟ್ರಲ್ ರೈಲುಗಳು ವಿಳಂಬವಾಗಿವೆ ಮತ್ತು ಇತರ ರೈಲುಗಳು ಯಾವುದೇ ತೊಂದರೆಗಳಿಲ್ಲದೆ ಓಡುತ್ತವೆ ಎಂದು ಹೇಳಲಾಗುತ್ತದೆ. ಈ ಮಳೆಗೆ ಕಟ್ಟಡವೊಂದು ಕುಸಿದು ಬೀಳುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಹೊರಬಿದ್ದಿದ್ದು ಆಘಾತ ಉಂಟು ಮಾಡಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ಓದಿ : ಮುಂಬೈನಲ್ಲಿ ಮಳೆಯಿಂದಾಗಿ ಮನೆಗಳಲ್ಲಿ ಸಿಲುಕಿರುವವರು ಮತ್ತು ಸಂತ್ರಸ್ತರ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆ ತೀವ್ರವಾಗಿ ನಡೆಯುತ್ತಿದೆ. ಅದರ ದೃಶ್ಯಾವಳಿಗಳು ಸದ್ಯ ಅಂತರ್ಜಾಲದಲ್ಲಿ ವೈರಲ್ ಆಗುತ್ತಿವೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_109.txt ADDED
@@ -0,0 +1 @@
 
 
1
+ : ನೊಬೆಲ್ ಪ್ರಶಸ್ತಿಯನ್ನು ಗೆದ್ದ ಮೊದಲ ಮಹಿಳೆ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ವಿಶ್ವದ ಅತ್ಯಂತ ವೇಗದ ಮನುಷ್ಯ ಎಂದು ಯಾರು ಕರೆಯುತ್ತಾರೆ? ಉತ್ತರ: ಉಸೇನ್ ಬೋಲ್ಟ್ ಪ್ರಶ್ನೆ 2:ವಿಂಬಲ್ಡನ್‌ನಲ್ಲಿ ಯಾವ ಕ್ರೀಡೆಯನ್ನು ಆಡಲಾಗುತ್ತದೆ? ಉತ್ತರ: ಟೆನಿಸ್ ಪ್ರಶ್ನೆ 3:ರಗ್ಬಿ ಲೀಗ್ ತಂಡದಲ್ಲಿ ಎಷ್ಟು ಆಟಗಾರರು ಇರುತ್ತಾರೆ? ಉತ್ತರ: 13 ಆಟಗಾರರು ಪ್ರಶ್ನೆ 4:ಚೀನಾದ ಮೊದಲ ಚಕ್ರವರ್ತಿ ಯಾರು? ಉತ್ತರ: ಕಿನ್ ಶಿ ಹುವಾಂಗ್ ಪ್ರಶ್ನೆ 5:ಯುನೈಟೆಡ್ ಸ್ಟೇಟ್ಸ್ ಯಾವ ವರ್ಷ ಸ್ವಾತಂತ್ರ್ಯವನ್ನು ಘೋಷಿಸಿತು? ಉತ್ತರ: 1776 ಇದನ್ನೂ ಓದಿ: ಪ್ರಶ್ನೆ 6:ಕೈಗಾರಿಕಾ ಕ್ರಾಂತಿ ಯಾವ ದೇಶದಲ್ಲಿ ಪ್ರಾರಂಭವಾಯಿತು? ಉತ್ತರ: ಗ್ರೇಟ್ ಬ್ರಿಟನ್ ಪ್ರಶ್ನೆ 7:ನಾಜಿ ಪಕ್ಷದ ನಾಯಕ ಯಾರು? ಉತ್ತರ: ಅಡಾಲ್ಫ್ ಹಿಟ್ಲರ್ ಪ್ರಶ್ನೆ 8: ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಮಾನವ ಯಾರು? ಉತ್ತರ: ಯೂರಿ ಗಗಾರಿನ್ ಪ್ರಶ್ನೆ 9:ರೋಮನ್ ಸಾಮ್ರಾಜ್ಯ ಯಾವಾಗ ಪತನವಾಯಿತು? ಉತ್ತರ: ಕ್ರಿಶ 476 ಪ್ರಶ್ನೆ 10:ನೊಬೆಲ್ ಪ್ರಶಸ್ತಿಯನ್ನು (1903 ರಲ್ಲಿ) ಗೆದ್ದ ಮೊದಲ ಮಹಿಳೆ ಯಾರು? ಉತ್ತರ: ಮೇರಿ ಕ್ಯೂರಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_11.txt ADDED
@@ -0,0 +1 @@
 
 
1
+ ಕೆಟ್ಟ ಕಾಲದಲ್ಲಿ ನಿಮ್ಮವರು ಯಾರು ಅಂತ ಗೊತ್ತಾಗುತ್ತೆ...'! ಬಿಜೆಪಿ ವಿರುದ್ಧ ವಿನೇಶ್ ಫೋಗಟ್ ವಾಗ್ದಾಳಿ ನಮ್ಮನ್ನು ಬೀದಿಗೆ ಎಳೆದಾಗ ಬಿಜೆಪಿ ಹೊರತು ಪಡಿಸಿ ಎಲ್ಲಾ ಪಕ್ಷಗಳು ನಮಗೆ ಬೆಂಬಲ ನೀಡಿವೆ.ಇಂದು ನಾನು ಹೊಸ ಆರಂಭವನ್ನು ಮಾಡುತ್ತಿದ್ದೇನೆ. ನವದೆಹಲಿ:ಹರಿಯಾಣ ವಿಧಾನಸಭೆ ಚುನಾವಣೆಗೆ ಮುನ್ನ ಕುಸ್ತಿಪಟುಗಳಾದ ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಇದೇ ವೇಳೆ ಅವರು ಕಾಂಗ್ರೆಸ್ ಸೇರಿದ ತಕ್ಷಣ ಬಿಜೆಪಿಯನ್ನು ಗುರಿಯಾಗಿಸಿಕೊಂಡು ತೀವ್ರ ವಾಗ್ದಾಳಿ ನಡೆಸಿದ್ದಾರೆ. ನಾನು ನಿಮ್ಮ ನಿರೀಕ್ಷೆಯನ್ನು ಈಡೇರಿಸುತ್ತೇನೆ ಎಂದು ನಾನು ಭಾವಿಸುತ್ತೇನೆ.ಕಾಂಗ್ರೆಸ್ ಗೆ ಹೃತ್ಪೂರ್ವಕ ಧನ್ಯವಾದಗಳು.ಕಷ್ಟಕಾಲದಲ್ಲಿ ಮಾತ್ರ ನಮ್ಮವರು ಯಾರು ಎಂಬುದು ಗೊತ್ತಾಗುತ್ತದೆ.ಮಹಿಳಾ ಹಕ್ಕುಗಳಿಗಾಗಿ ಬೀದಿಗಿಳಿದು ಸಂಸತ್ತಿನವರೆಗೂ ಹೋರಾಡಲು ಸಿದ್ಧವಾಗಿರುವ ಪಕ್ಷದ ಭಾಗವಾಗಿದ್ದೇನೆ ಎಂಬುದಕ್ಕೆ ಇಂದು ನಾನು ಹೆಮ್ಮೆಪಡುತ್ತೇನೆ ಎಂದು ವಿನೇಶ್ ಫೋಗಟ್ ಹೇಳಿದರು. ಇದನ್ನೂ ಓದಿ: ಬಿಜೆಪಿ ಹೊರತುಪಡಿಸಿ ಎಲ್ಲರೂ ಬೆಂಬಲಿಸಿದ್ದಾರೆ: ನಮ್ಮನ್ನು ಬೀದಿಗೆ ಎಳೆದಾಗ ಬಿಜೆಪಿ ಹೊರತು ಪಡಿಸಿ ಎಲ್ಲಾ ಪಕ್ಷಗಳು ನಮಗೆ ಬೆಂಬಲ ನೀಡಿವೆ.ಇಂದು ನಾನು ಹೊಸ ಆರಂಭವನ್ನು ಮಾಡುತ್ತಿದ್ದೇನೆ.ಹೋರಾಟ ಇನ್ನೂ ಮುಂದುವರೆದಿದ್ದು, ಅದನ್ನೂ ಗೆಲ್ಲುತ್ತೇವೆ. ಅದರಿಂದ ಹಿಂದೆ ಸರಿಯುವುದಿಲ್ಲ. ನಮ್ಮ ಪ್ರಕರಣ ನ್ಯಾಯಾಲಯದಲ್ಲಿದೆ, ಅದರಲ್ಲಿಯೂ ನಾವು ಗೆಲ್ಲುತ್ತೇವೆ ನಾವು ಸಹಿಸಿಕೊಂಡದ್ದನ್ನು ಆಟಗಾರರು ಸಹಿಸಿಕೊಳ್ಳಬಾರದು ಎಂದು ನಾನು ಬಯಸುತ್ತೇನೆ ಎಂದು ವಿನೇಶ್ ಫೋಗಟ್ ಹೇಳಿದರು. ಇದಕ್ಕೂ ಮುನ್ನ ಫೋಗಟ್ ಮತ್ತು ಪುನಿಯಾ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಹಿರಿಯ ನಾಯಕರನ್ನು 10 ರಾಜಾಜಿ ಮಾರ್ಗದಲ್ಲಿ ಭೇಟಿ ಮಾಡಿದ್ದರು.ಸದ್ಯ ಇಬ್ಬರೂ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದಾರೆ. ಅವರು ಹರಿಯಾಣ ವಿಧಾನಸಭೆ ಚುನಾವಣೆಗೂ ಸ್ಪರ್ಧಿಸುವ ನಿರೀಕ್ಷೆ ಇದೆ. ಹರಿಯಾಣದ 90 ವಿಧಾನಸಭಾ ಸ್ಥಾನಗಳಿಗೆ ಅಕ್ಟೋಬರ್ 5 ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_110.txt ADDED
@@ -0,0 +1 @@
 
 
1
+ ವಿಂಡ್ ಸ್ಕ್ರೀನ್ʼನಲ್ಲಿ ಇಲ್ಲಾ ಅಂದ್ರೆ ಡಬಲ್ ಶುಲ್ಕ! ಮಾರ್ಗಸೂಚಿ ಬಿಡುಗಡೆ ಎಲ್ಲಾ ಬಳಕೆದಾರರ ಶುಲ್ಕ ಪ್ಲಾಜಾಗಳಲ್ಲಿ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ, ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸ್ಥಿರವಾದ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಲೇನ್‌ಗೆ ಪ್ರವೇಶಿಸಲು ಅನುಸರಿಸದಿದ್ದಕ್ಕಾಗಿ ದಂಡದ ಬಗ್ಗೆ ಹೆದ್ದಾರಿ ಬಳಕೆದಾರರಿಗೆ ತಿಳಿಸುತ್ತದೆ ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ ಬಳಕೆದಾರರು ಉದ್ದೇಶಪೂರ್ವಕವಾಗಿ ವಾಹನದ ವಿಂಡ್‌ಸ್ಕ್ರೀನ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಸರಿಪಡಿಸದೆ ಇರುವುದನ್ನು ತಡೆಯಲು, ಒಳಗಿನಿಂದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಅಂಟಿಸದ ಫಾಸ್ಟ್‌ʼಟ್ಯಾಗ್‌ʼನೊಂದಿಗೆ ಟೋಲ್ ಲೇನ್‌ಗೆ ಪ್ರವೇಶಿಸುವ ಬಳಕೆದಾರರಿಂದ ದುಪ್ಪಟ್ಟು ಬಳಕೆದಾರ ಶುಲ್ಕವನ್ನು ಸಂಗ್ರಹಿಸಲು ಮಾರ್ಗಸೂಚಿಗಳನ್ನು ನೀಡಿದೆ. ಇದನ್ನೂ ಓದಿ: ವಿಂಡ್‌ಸ್ಕ್ರೀನ್‌ನಲ್ಲಿ ಉದ್ದೇಶಪೂರ್ವಕವಾಗಿ ಫಾಸ್ಟ್‌ಟ್ಯಾಗ್ ಅನ್ನು ಅಳವಡಿಸದಿರುವುದು ಟೋಲ್ ಪ್ಲಾಜಾಗಳಲ್ಲಿ ಅನಗತ್ಯ ವಿಳಂಬಗಳಿಗೆ ಕಾರಣವಾಗುತ್ತದೆ, ಇದು ಸಹ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಅನಾನುಕೂಲತೆಯನ್ನು ಉಂಟುಮಾಡುತ್ತದೆ.ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್ ಅಂಟಿಸದೇ ಇದ್ದಲ್ಲಿ ಬಳಕೆದಾರರ ಶುಲ್ಕವನ್ನು ದುಪ್ಪಟ್ಟು ವಿಧಿಸಲು ಎಲ್ಲಾ ಬಳಕೆದಾರ ಶುಲ್ಕ ಸಂಗ್ರಹ ಏಜೆನ್ಸಿಗಳು ಮತ್ತು ರಿಯಾಯಿತಿದಾರರಿಗೆ ವಿವರವಾದ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು () ನೀಡಲಾಗಿದೆ. ಎಲ್ಲಾ ಬಳಕೆದಾರರ ಶುಲ್ಕ ಪ್ಲಾಜಾಗಳಲ್ಲಿ ಮಾಹಿತಿಯನ್ನು ಪ್ರಮುಖವಾಗಿ ಪ್ರದರ್ಶಿಸಲಾಗುತ್ತದೆ, ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಸ್ಥಿರವಾದ ಫಾಸ್ಟ್‌ಟ್ಯಾಗ್ ಇಲ್ಲದೆ ಟೋಲ್ ಲೇನ್‌ಗೆ ಪ್ರವೇಶಿಸಲು ಅನುಸರಿಸದಿದ್ದಕ್ಕಾಗಿ ದಂಡದ ಬಗ್ಗೆ ಹೆದ್ದಾರಿ ಬಳಕೆದಾರರಿಗೆ ತಿಳಿಸುತ್ತದೆ.ಹೆಚ್ಚುವರಿಯಾಗಿ, ಶುಲ್ಕ ಪ್ಲಾಜಾದಲ್ಲಿ ವಾಹನ ನೋಂದಣಿ ಸಂಖ್ಯೆ () ನೊಂದಿಗೆ ಫೂಟೇಜ್ ಅನ್ನು ಅಂಟಿಸದೆ ಇರುವ ಫಾಸ್ಟ್ಯಾಗ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ. ಟೋಲ್ ಲೇನ್‌ನಲ್ಲಿ ವಾಹನದ ಉಪಸ್ಥಿತಿ ಮತ್ತು ಶುಲ್ಕದ ಬಗ್ಗೆ ಸರಿಯಾದ ದಾಖಲೆಯನ್ನು ನಿರ್ವಹಿಸಲು ಇದು ಸಹಾಯ ಮಾಡುತ್ತದೆ. ಈಗಾಗಲೇ ಸ್ಥಾಪಿತವಾದ ನಿಯಮಗಳಿಗೆ ಅನುಸಾರವಾಗಿ, ಒಳಗಿನಿಂದ ನಿಯೋಜಿಸಲಾದ ವಾಹನದ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ಫಾಸ್ಟ್‌ಟ್ಯಾಗ್ ಅನ್ನು ಅಂಟಿಸಲು ಪ್ರಮಾಣಿತ ಕಾರ್ಯವಿಧಾನದ ಮಾರ್ಗಸೂಚಿಗಳನ್ನು ಜಾರಿಗೊಳಿಸುವ ಗುರಿಯನ್ನು ಹೊಂದಿದೆ. ಸ್ಟ್ಯಾಂಡರ್ಡ್ ಪ್ರಕ್ರಿಯೆಯ ಪ್ರಕಾರ ನಿಯೋಜಿಸಲಾದ ವಾಹನದ ಮೇಲೆ ಅಂಟಿಸದ ಯಾವುದೇ ಫಾಸ್ಟ್‌ಟ್ಯಾಗ್ ಬಳಕೆದಾರರ ಶುಲ್ಕ ಪ್ಲಾಜಾದಲ್ಲಿ ಎಲೆಕ್ಟ್ರಾನಿಕ್ ಟೋಲಿ ಕಲೆಕ್ಷನ್ (ಇಟಿಸಿ) ವಹಿವಾಟು ನಡೆಸಲು ಅರ್ಹತೆ ಹೊಂದಿಲ್ಲ ಮತ್ತು ಡಬಲ್ ಟೋಲ್ ಶುಲ��ಕವನ್ನು ಪಾವತಿಸಬೇಕಾಗುತ್ತದೆ ಮತ್ತು ಸರಿಯಾಗಿ ಕಪ್ಪುಪಟ್ಟಿಗೆ ಸೇರಿಸಬಹುದು. ವಿವಿಧ ಪಾಯಿಂಟ್ ಆಫ್-ಸೇಲ್ (ಪಿಒಎಸ್) ಯಿಂದ ವಿತರಿಸುವ ಸಮಯದಲ್ಲಿ ಮುಂಭಾಗದ ವಿಂಡ್‌ಶೀಲ್ಡ್‌ನಲ್ಲಿ ನಿಯೋಜಿಸಲಾದ ವಾಹನಕ್ಕೆ ಫಾಸ್ಟ್‌ಟ್ಯಾಗ್ ಅನ್ನು ಸರಿಪಡಿಸಲು ವಿತರಕ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆ) ನಿಯಮಗಳು, 2008 ರ ಪ್ರಕಾರ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬಳಕೆದಾರರ ಶುಲ್ಕವನ್ನು ಸಂಗ್ರಹಿಸುತ್ತದೆ. ಪ್ರಸ್ತುತ, ರಾಷ್ಟ್ರೀಯ ಹೆದ್ದಾರಿಗಳ ಸುಮಾರು 1,000 ಟೋಲ್ ಪ್ಲಾಜಾಗಳಲ್ಲಿ ಸುಮಾರು 45,000 ಕಿಮೀ ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಗೆ ಬಳಕೆದಾರರ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ. ಇದನ್ನೂ ಓದಿ: ಸುಮಾರು 98 ಪ್ರತಿಶತ ಮತ್ತು 8 ಕೋಟಿಗೂ ಹೆಚ್ಚು ಬಳಕೆದಾರರ ಒಳಹೊಕ್ಕು ದರದೊಂದಿಗೆ, ಫಾಸ್ಟ್ಯಾಗ್ ದೇಶದಲ್ಲಿ ಎಲೆಕ್ಟ್ರಾನಿಕ್ ಟೋಲ್ ಸಂಗ್ರಹ ವ್ಯವಸ್ಥೆಯನ್ನು ಕ್ರಾಂತಿಗೊಳಿಸಿದೆ. ಫಾಸ್ಟ್‌ಟ್ಯಾಗ್ ಅನ್ನು ಅಂಟಿಸದೇ ಇರುವ ಬಳಕೆದಾರರ ಶುಲ್ಕವನ್ನು ಎರಡು ಬಾರಿ ವಿಧಿಸುವ ಈ ಉಪಕ್ರಮವು ಟೋಲ್ ಕಾರ್ಯಾಚರಣೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಮತ್ತು ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತಡೆರಹಿತ ಮತ್ತು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_111.txt ADDED
@@ -0,0 +1 @@
 
 
1
+ ಬಾಲ್ಯದಲ್ಲಿ ಅನಂತ್ ಅಂಬಾನಿಯನ್ನು ನೋಡಿಕೊಂಡಿದ್ದು ಈಕೆ? ಬಾಲಿವುಡ್ ಖ್ಯಾತ ಜೋಡಿಯ ಮಕ್ಕಳನ್ನು ಇವರೇ ನೋಡಿಕೊಂಡಿದ್ದಾರೆ! : ಇತ್ತೀಚಿಗಷ್ಟೇ ಭರ್ಜರಿಯಾಗಿ ವಿವಾಹವಾದ ಏಷ್ಯಾದ ಶ್ರೀಮಂತ ವ್ಯಕ್ತಿಯ ಮಗ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಮುಂಬೈ ನಲ್ಲಿ ನಡೆಯಿತು. :ಇತ್ತೀಚಿಗಷ್ಟೇ ಭರ್ಜರಿಯಾಗಿ ವಿವಾಹವಾದ ಏಷ್ಯಾದ ಶ್ರೀಮಂತ ವ್ಯಕ್ತಿಯ ಮಗ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆ ಮುಂಬೈ ನಲ್ಲಿ ನಡೆಯಿತು. ವಿವಾಹವಾದ ಅನಂತ್ ಅಂಬಾನಿ ತನ್ನ ಹಳೆಯ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ವಿವಾಹದ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹದ ಫೋಟೋವನ್ನು ನೋಡಿ ವ್ಯಕ್ತಿಯೊಬ್ಬರು ಅಭಿನಂದಿಸಿದ್ದಾರೆ ಅವರು ಯಾರು ಗೊತ್ತಾ ಇವರೇ ನೋಡಿ. ಇದನ್ನು ಓದಿ : ಸಾಮಾನ್ಯವಾಗಿ ಸ್ಟಾರ್ ದಂಪತಿಗಳು ತಮ್ಮ ಮಕ್ಕಳನ್ನು ನೋಡಲು ಬೇಬಿ ಸಿಟ್ಟರನ್ನು ನೇಮಿಸಿಕೊಳ್ಳುತ್ತಾರೆ. ಹಾಗೆ ಅನಂತ್ ಅಂಬಾನಿ ಅವರನ್ನು ನೋಡಿಕೊಳ್ಳಲು ಈ ವ್ಯಕ್ತಿ ಒಬ್ಬರನ್ನು ನೇಮಿಸಿದ್ದರಂತೆ, ಅವರು ಬೇರೆ ಯಾರು ಅಲ್ಲ ತಾರಾಜೋಡಿ ಕರೀನಾ ಕಪೂರ್ ಮತ್ತು ಸೈಫ್ ಅಲಿ ಖಾನ್ ಅವರ ಪುತ್ರರನ್ನು ನೋಡಿಕೊಳ್ಳಲು ಇವರನ್ನು ನೇಮಿಸಿದ್ದರಂತೆ. ಅವರೇ ಖ್ಯಾತ ನರ್ಸ್ ಲಲಿತಾ ಸಿಲ್ವಾ. ಅನಂತ್ ಅಂಬಾನಿ ಅವರನ್ನು ಬಾಲ್ಯದಲ್ಲಿ ಇವರೇ ನೋಡಿಕೊಂಡಿದ್ದರು. ಇತ್ತೀಚಿಗಷ್ಟೇ ಮದುವೆಯಾದ ಅನಂತ ಅಂಬಾನಿ ಮದುವೆಯಲ್ಲಿ ಲಲಿತಾ ಸಿಲ್ವಾ ಕಾಣಿಸಿಕೊಂಡಿದ್ದಾರೆ. ಇದನ್ನು ಓದಿ : ಅವರೊಟ್ಟಿಗೆ ತೆಗೆದುಕೊಂಡ ಫೋಟೋ ಅನಂತ ಅಂಬಾನಿ ಅವರನ್ನು ತಮ್ಮ ಬಾಲ್ಯಕ್ಕೆ ಕರೆದುಕೊಂಡು ಹೋಗಿದೆ. ಅನಂತ ಅವರ ಬಾಲ್ಯದ ಫೋಟೋ ಒಂದನ್ನು ನೋಡಿ ಲಲಿತಾ ಸಿಲ್ವಾ ತುಂಬಾ ಒಳ್ಳೆ ಹುಡುಗ ಎಂದು ಉಲ್ಲೇಖಿಸಿದ್ದಾರೆ. ಬಾಲ್ಯದಲ್ಲಿ ಡಿಸ್ನಿ ವರ್ಲ್ಡ್ ಪ್ಯಾರಿಸ್ ಪ್ರವಾಸದ ಸಮಯದಲ್ಲಿ ತೆಗೆದುಕೊಂಡು ಫೋಟೋವನ್ನು ಹಂಚಿಕೊಂಡಿದ್ದಾರೆ ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_112.txt ADDED
@@ -0,0 +1 @@
 
 
1
+ ಅಂಕೋಲಾ ಅವಘಡ, ತಂಡಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡಲಿ : ಕೇಂದ್ರ ಸಚಿವ ಜೋಶಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ರಣ ಮಳೆಯಿಂದಾಗಿ ಅವಘಡಗಳು ಸಂಭವಿಸಿ ಸಾವು-ನೋವು ಉಂಟಾಗುತ್ತಿದೆ. ಜನರು ಬಹು ಎಚ್ಚರಿಕೆಯಿಂದ ಇರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದ್ದಾರೆ. ನವದೆಹಲಿ:ಅಂಕೋಲಾ ಬಳಿ ರಾಷ್ಟ್ತ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಮೃತಪಟ್ಟವರನ್ನು ಹೊರ ತೆಗೆಯಲು ಕೇಂದ್ರ ಸರ್ಕಾರ . ತಂಡವನ್ನು ನಿಯೋಜಿಸಿದ್ದು, ರಾಜ್ಯ ಸರ್ಕಾರ ಅಗತ್ಯ ಸಹಕಾರ ನೀಡುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ವರುಣ ಅಬ್ಬರಿಸುತ್ತಿದ್ದು, ರಣ ಮಳೆಯಿಂದಾಗಿ ಅವಘಡಗಳು ಸಂಭವಿಸಿ ಸಾವು-ನೋವು ಉಂಟಾಗುತ್ತಿದೆ. ಜನರು ಬಹು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ. ಅಲ್ಲದೆ, ಉತ್ತರ ಕನ್ನಡದ ಅಂಕೋಲಾ ಸಮೀಪ ಶಿರೂರು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಜನರು ಮೃತಪಟ್ಟಿರುವ ಬಗ್ಗೆ ಸಚಿವ ಜೋಶಿ ವಿಷಾದ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈ ದುರ್ಘಟನೆಯಲ್ಲಿ ಬಲಿಯಾಗಿ ಕಾಣೆಯಾಗಿರುವ ಮೃತರ ದೇಹಗಳ ಶೋಧ ಕಾರ್ಯ ಮುಂದುವರೆದಿದೆ. ಈ ಕಾರ್ಯಕ್ಕೆ ಎನ್​ಡಿಆರ್​ಎಫ್​ ತಂಡವನ್ನು ನಿಯೋಜಿಸಲಾಗಿದ್ದು, ಶೋಧ ಕಾರ್ಯ ಮುಂದುವರೆಸಲು ಈ ತಂಡಕ್ಕೆ ಬೇಕಾದ ಅಗತ್ಯ ಸಹಕಾರವನ್ನು ರಾಜ್ಯ ಸರ್ಕಾರ ಒದಗಿಸಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ. ಈ ಪ್ರಕೃತಿ ವಿಕೋಪಕ್ಕೆ ಬಲಿಯಾದವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಅಗತ್ಯ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಚಿವ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_113.txt ADDED
@@ -0,0 +1 @@
 
 
1
+ : ಜಗತ್ತಿನ ಅತಿ ದೊಡ್ಡ ದೇಶ ಯಾವುದು..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಫಿನ್‌ಲ್ಯಾಂಡ್‌ನ ರಾಜಧಾನಿ ಯಾವುದು? ಉತ್ತರ: ಹೆಲ್ಸಿಂಕಿ ಪ್ರಶ್ನೆ 2:ಮಡೋನಾ ಯಾವ ದಶಕದಲ್ಲಿ ಜನಿಸಿದರು? ಉತ್ತರ: 1950 (1958) ಪ್ರಶ್ನೆ 3:ಜಗತ್ತಿನ ಅತಿ ದೊಡ್ಡ ಪ್ರಾಣಿ ಯಾವುದು? ಉತ್ತರ: ನೀಲಿ ತಿಮಿಂಗಿಲ ಪ್ರಶ್ನೆ 4:ಐಸ್‌ಲ್ಯಾಂಡ್‌ನ ರಾಜಧಾನಿ ಯಾವುದು? ಉತ್ತರ: ರೇಕ್ಜಾವಿಕ್ ಪ್ರಶ್ನೆ 5:2019ರ ಮಹಿಳಾ ವಿಶ್ವಕಪ್‌ನಲ್ಲಿ ರನ್ನರ್ಸ್-ಅಪ್ ಆದ ದೇಶ ಯಾವುದು? ಉತ್ತರ: ನೆದರ್ಲ್ಯಾಂಡ್ಸ್ ಇದನ್ನೂ ಓದಿ: ಪ್ರಶ್ನೆ 6:ಮೋನಾಲಿಸಾವನ್ನು ಚಿತ್ರಿಸಿದವರು ಯಾರು? ಉತ್ತರ: ಲಿಯೊನಾರ್ಡೊ ಡಾ ವಿನ್ಸಿ ಪ್ರಶ್ನೆ 7:ಯಾವ ಗ್ರಹವು ಸೂರ್ಯನಿಗೆ ಹತ್ತಿರದಲ್ಲಿದೆ? ಉತ್ತರ: ಬುಧ () ಪ್ರಶ್ನೆ 8:ರಾಣಿ ಎಲಿಜಬೆತ್ ರ ಉಪನಾಮ ಯಾವುದು? ಉತ್ತರ: ಎಲಿಜಬೆತ್ ಅಲೆಕ್ಸಾಂಡ್ರಾ ಮೇರಿ ವಿಂಡ್ಸರ್ ಪ್ರಶ್ನೆ 9:ಜಗತ್ತಿನ ಅತಿ ದೊಡ್ಡ ದೇಶ ಯಾವುದು? ಉತ್ತರ: ರಷ್ಯಾ ಪ್ರಶ್ನೆ 10:ಅಧಿಕ ವರ್ಷದಲ್ಲಿ ಎಷ್ಟು ದಿನಗಳಿರುತ್ತವೆ? ಉತ್ತರ: 366 ದಿನಗಳು ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_114.txt ADDED
@@ -0,0 +1 @@
 
 
1
+ : ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಯಾವ ನಕ್ಷತ್ರವು ನಮ್ಮ ಗ್ರಹಕ್ಕೆ ಹತ್ತಿರದಲ್ಲಿದೆ? ಉತ್ತರ: ಸೂರ್ಯ ಪ್ರಶ್ನೆ 2:ಯಾವ ಪ್ರಾಣಿಯನ್ನು ಮರುಭೂಮಿಯ ಹಡಗು ಎಂದು ಕರೆಯಲಾಗುತ್ತದೆ? ಉತ್ತರ: ಒಂಟೆ ಪ್ರಶ್ನೆ 3:ಯಾವ ಪ್ರಾಣಿಯು ಕಾಡಿನ ರಾಜ ಬಿರುದು ಹೊಂದಿದೆ? ಉತ್ತರ: ಸಿಂಹ ಪ್ರಶ್ನೆ 4:ಇಂಗ್ಲಿಷ್ ವರ್ಣಮಾಲೆಯಲ್ಲಿ ಎಷ್ಟು ವ್ಯಂಜನಗಳಿವೆ? ಉತ್ತರ: 21 ವರ್ಣಮಾಲೆಗಳಿವೆ ಪ್ರಶ್ನೆ 5 :ಜಗತ್ತಿಗೆ ಬೆಳಕು ನೀಡುವ ಸೂರ್ಯ ಯಾವ ದಿಕ್ಕಿನಲ್ಲಿ ಉದಯಿಸುತ್ತಾನೆ? ಉತ್ತರ: ಪೂರ್ವ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತಿದೊಡ್ಡ ಹೂ ಯಾವುದು..? ಉತ್ತರ: ರಾಫ್ಲೆಸಿಯಾ ಪ್ರಶ್ನೆ 7:ಮಾನವ ದೇಹವು ಎಷ್ಟು ಶ್ವಾಸಕೋಶಗಳನ್ನು ಹೊಂದಿದೆ? ಉತ್ತರ: 2 ಶ್ವಾಸಕೋಶಗಳಿವೆ ಪ್ರಶ್ನೆ 8:ಯಾವ ದೇಶವನ್ನು ಉದಯಿಸುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 9: ವಿಶ್ವದ ಅತಿ ಎತ್ತರದ ಪರ್ವತ ಯಾವುದು? ಉತ್ತರ: ಮೌಂಟ್ ಎವರೆಸ್ಟ್ ಪ್ರಶ್ನೆ 10:ಕರ್ನಾಟಕ ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು? ಉತ್ತರ: ಕೆ.ಚೆಂಗಲರಾಯ ರೆಡ್ಡಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_115.txt ADDED
@@ -0,0 +1 @@
 
 
1
+ ತುಳುನಾಡಿಗೆ ಬಂದು ಕೊರಗಜ್ಜ ದೈವದ ಹರಕೆ ತೀರಿಸಿದ ಬಾಲಿವುಡ್ ನಟಿ ಕತ್ರಿನಾ ಕೈಫ್! ಫೋಟೋ ವೈರಲ್ : ಇದೇ ಸಂದರ್ಭದಲ್ಲಿ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರಿನ ಪ್ರಖ್ಯಾತ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. : ಬಾಲಿವುಡ್ ನಟಿ ಕತ್ರಿನಾ ಕೈಫ್ ಕಳೆದ ಕೆಲ ಸಮಯದಿಂದ ಪಾಪರಾಜಿಗಳ ಕ್ಯಾಮರಾ ಕಣ್ಣಿನಿಂದ ದೂರ ಉಳಿದಿದ್ದಾರೆ. ಆದರೆ ಇತ್ತೀಚಿಗೆ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಪತಿ ವಿಕ್ಕಿ ಕೌಶಲ್ ಜೊತೆ ಮದುವೆಯಲ್ಲಿ ಭಾಗವಹಿಸಿದ್ದರು. ಆದರೆ ಇದೇ ಸಂದರ್ಭದಲ್ಲಿ ಫೋಟೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ಮಂಗಳೂರಿನ ಪ್ರಖ್ಯಾತ ಕೊರಗಜ್ಜ ಕಟ್ಟೆಗೆ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಜುಲೈ 16 ರಂದು ಕತ್ರಿನಾ ಕೈಫ್ ಹುಟ್ಟುಹಬ್ಬ. ಹೀಗಿರುವಾಗ ಈ ವಿಶೇಷ ದಿನಕ್ಕೂ ಮುನ್ನ ಕೊರಗಜ್ಜ ಸ್ವಾಮಿಯ ಆಶೀರ್ವಾದ ಪಡೆಯಲು ನಟಿ ಬಂದಿದ್ದಾರೆ ಎನ್ನಲಾಗುತ್ತಿದೆ. ಕತ್ರಿನಾ ಫೋಟೋ ವೈರಲ್ ಕತ್ರಿನಾ ಕೈಫ್ ಅವರ ಫೋಟೋವನ್ನು ಶೇರ್ ಮಾಡಿಕೊಂಡಿರುವ ಫ್ಯಾನ್ ಪೇಜ್, ನಟಿ ಇತ್ತೀಚೆಗೆ ತೊಂದರೆಯಲ್ಲಿದ್ದಾರೆ. ಇದೇ ಕಾರಣಕ್ಕೆ ಸ್ವಾಮಿ ಕೊರಗಜ್ಜ ಕ್ಷೇತ್ರಕ್ಕೆ ಭೇಟಿ ನೀಡಿ ಹರಕೆ ತೀರಿಸಿ ಆಶೀರ್ವಾದ ಪಡೆದಿದ್ದಾರೆ ಎಂದು ಹೇಳಿಕೊಂಡಿದೆ. ಇದನ್ನೂ ಓದಿ: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಕತ್ರಿನಾ ಕೈಫ್ ಗಮನ ಸೆಳೆದಿದ್ದರು. ನಟಿಯ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಅಂಬಾನಿ ಕುಟುಂಬದ ಅದ್ಧೂರಿ ಮದುವೆಗೆ ಕತ್ರಿನಾ ಕೈಫ್ ಸುಂದರವಾದ ಕೆಂಪು ಸೀರೆಯನ್ನು ಧರಿಸಿ ಆಗಮಿಸಿದ್ದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_116.txt ADDED
@@ -0,0 +1 @@
 
 
1
+ : ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಭಾರತೀಯ ರಾಷ್ಟ್ರೀಯ ಸೇನೆಯ (ಆಜಾದ್ ಹಿಂದ್ ಫೌಜ್) ಸ್ಥಾಪಕರು ಯಾರು? ಉತ್ತರ: ಸುಭಾಷ್ ಚಂದ್ರ ಬೋಸ್ ಪ್ರಶ್ನೆ 2:ಸ್ವತಂತ್ರ ಭಾರತದ ಗವರ್ನರ್ ಜನರಲ್ ಆದ ಮೊದಲ ಭಾರತೀಯ ಯಾರು? ಉತ್ತರ: ಸಿ.ರಾಜಗೋಪಾಲಾಚಾರಿ ಪ್ರಶ್ನೆ 3:ಅಟಪಾಕ ಪಕ್ಷಿಧಾಮವು ಯಾವ ರಾಜ್ಯದಲ್ಲಿದೆ? ಉತ್ತರ: ಆಂಧ್ರಪ್ರದೇಶ ಪ್ರಶ್ನೆ 4:ಮೌರ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿ ಯಾರು? ಉತ್ತರ: ಚಂದ್ರಗುಪ್ತ ಮೌರ್ಯ ಪ್ರಶ್ನೆ 5:ತಾಜ್ ಮಹಲ್ ಅನ್ನು ನಿರ್ಮಿಸಿದ ಮೊಘಲ್ ಚಕ್ರವರ್ತಿ ಯಾರು? ಉತ್ತರ: ಷಹಜಹಾನ್ ಇದನ್ನೂ ಓದಿ:ಪ್ರಶ್ನೆ 6:ಭಾರತದಲ್ಲಿ ಖಿಲ್ಜಿ ರಾಜವಂಶದ ಸ್ಥಾಪಕರು ಯಾರು? ಉತ್ತರ: ಜಲಾಲುದ್ದೀನ್ ಖಿಲ್ಜಿ ಪ್ರಶ್ನೆ 7:ಹಿಂದೂ ಧರ್ಮದಲ್ಲಿ ಸುಧಾರಣಾ ಚಳುವಳಿಯಾದ ಆರ್ಯ ಸಮಾಜವನ್ನು ಸ್ಥಾಪಿಸಿದವರು ಯಾರು? ಉತ್ತರ: ಸ್ವಾಮಿ ದಯಾನಂದ ಸರಸ್ವತಿ ಪ್ರಶ್ನೆ 8:ಯಾವ ನದಿಯನ್ನು ಭಾರತದ ಜೀವನಾಡಿ ಎಂದು ಕರೆಯಲಾಗುತ್ತದೆ? ಉತ್ತರ: ಗಂಗಾ ನದಿ ಪ್ರಶ್ನೆ 9:ಭಾರತದ ಅತಿ ಎತ್ತರದ ಶಿಖರ ಯಾವುದು? ಉತ್ತರ: ಕಾಂಚನಜುಂಗಾ ಪ್ರಶ್ನೆ 10:ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ ಯಾವುದು? ಉತ್ತರ: ರಾಜಸ್ಥಾನ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_117.txt ADDED
@@ -0,0 +1 @@
 
 
1
+ ಅನಂತ್ ಅಂಬಾನಿ ಮದುವೆಯಲ್ಲಿ ವಿಶೇಷ ಸಾಮಗ್ರಿಯೊಂದಿಗೆ ಕಾಣಿಸಿಕೊಂಡ ನೀತಾ ಅಂಬಾನಿ!! ಅದೇನದು ? ನೀತಾ ಅಂಬಾನಿ - ರಮಣ್ ಡಿವೋ : ಏಷ್ಯಾದ ದೊರೆ ಮುಖೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನೆರವೇರಿತು. ಈ ಸಮಾರಂಭಕ್ಕೆ ದೇಶ-ವಿದೇಶಗಳ ಅನೇಕ ಪ್ರಸಿದ್ಧ ವ್ಯಕ್ತಿಗಳು ಆಗಮಿಸಿದ್ದರು. ಏಷ್ಯಾದ ಶ್ರೀಮಂತ ವ್ಯಕ್ತಿ, ರಿಲಯನ್ಸ್ ಗ್ರೂಪ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹವು ಅದ್ದೂರಿಯಾಗಿ ನಡೆಯಿತು. ಈ ದಶಕದ ಅತ್ಯಂತ ದುಬಾರಿ ಮದುವೆ ಎಂಬ ದಾಖಲೆ ಸೃಷ್ಟಿಸಿದೆ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ವಿಶ್ವದ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಇದನ್ನು ಓದಿ : ಈ ಮದುವೆ ಸಮಾರಂಭದಲ್ಲಿ ಇಡೀ ಅಂಬಾನಿ ಕುಟುಂಬ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿತ್ತು. ಅದರಲ್ಲೂ 60ರ ಹರೆಯದಲ್ಲೂ ನೀತಾ ಅಂಬಾನಿ ಸ್ಪರ್ಧಾತ್ಮಕ ಹುಡುಗಿಯಾಗಿ ಸೌಂದರ್ಯದಿಂದ ಮಿಂಚಿದ್ದಾರೆ. ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ನೀತಾ ಅಂಬಾನಿ ಐಟಂ ಹಿಡಿದುಕೊಂಡು ಕಾಣಿಸಿಕೊಂಡಿದ್ದರು. ಈ ಮದುವೆ ಆಗುವವರೆಗೂ ಅವಳ ಕೈಯಲ್ಲಿ ಕಾಣುತ್ತಿತ್ತು. ನೀತಾ ಅಂಬಾನಿ ಕೈಯಲ್ಲಿರುವ ಈ ವಿಚಿತ್ರ ವಸ್ತುವಿಗೆ ಗಣೇಶನ ಪ್ರತಿಮೆಯನ್ನು ಜೋಡಿಸಲಾಗಿದೆ. ಅಲ್ಲದೆ, ಪ್ರತಿಮೆಯ ಮುಂದೆ ದೀಪವಿದೆ. ಮುಕೇಶ್ ಅಂಬಾನಿ ತಮ್ಮ ಮಗ ಅನಂತ್ ಅಂಬಾನಿಯನ್ನು ಮದುವೆ ಮಂಟಪಕ್ಕೆ ಕರೆತರುತ್ತಿದ್ದರೆ, ನೀತಾ ಅಂಬಾನಿ ಈ ವಿಶೇಷ ವಸ್ತುವನ್ನು ಕೈಯಲ್ಲಿ ಹಿಡಿದುಕೊಂಡು ಎಲ್ಲರಿಗಿಂತ ಮುಂದೆ ಹೋಗುತ್ತಿರುವುದು ಕಂಡುಬಂದಿತು. ನೀತಾ ಅಂಬಾನಿಯ ವಸ್ತು ಯಾವುದು? ಮದುವೆ ಆಗುವ ತನಕ ಯಾಕೆ ಕಾಯ್ತಿದ್ದೀಯ? ಆ ವಸ್ತುವಿನ ವಿಶೇಷತೆ ಏನು? ಈ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ನೀತಾ ಅಂಬಾನಿ ತನ್ನ ಮಗನ ಕೈ ಹಿಡಿದು ಮದುವೆ ಮಾಡುವುದು ಗುಜರಾತಿನ ಮದುವೆಗಳಲ್ಲಿ ಕಂಡು ಬರುವ ಸಂಪ್ರದಾಯ. ಅಲ್ಲದೆ, ಗುಜರಾತಿನ ಜನರು ಗಣೇಶನ ವಿಗ್ರಹ ಮತ್ತು ಮುಂಭಾಗದ ದೀಪದೊಂದಿಗೆ ಅಂತಹ ವಿಶೇಷ ವಸ್ತುವನ್ನು ಹಿಡಿದಿಟ್ಟುಕೊಳ್ಳುವುದರಿಂದ ಮದುವೆಗಳನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ರಾಮನ್ ದೇವೋ ಎಂದು ಕರೆಯಲಾಗುತ್ತದೆ. ಇದನ್ನು ಓದಿ : ಇದು ಹೊಸ ಜೀವನವನ್ನು ಪ್ರಾರಂಭಿಸುವ ದಂಪತಿಗಳನ್ನು ಆಶೀರ್ವದಿಸುತ್ತದೆ, ಕತ್ತಲೆಯನ್ನು ಹೋಗಲಾಡಿಸುತ್ತದೆ ಮತ್ತು ಅವರ ಜೀವನವನ್ನು ಹೊಸ ಬೆಳಕನ್ನು ತುಂಬುತ್ತದೆ ಎಂದು ನಂಬಲಾಗಿದೆ. ಸಾಂಪ್ರದಾಯಿಕ ಗುಜರಾತಿ ವಿವಾಹಗಳಲ್ಲಿ ಇದು ಖಂಡಿತವಾಗಿಯೂ ಕಂಡುಬರುತ್ತದೆ. ಅದಕ್ಕಾಗಿಯೇ ನೀತಾ ಅಂಬಾನಿ ತನ್ನ ಮಗನ ಮದುವೆಯ ಬಹುಪಾಲು ಅವರ ಕೈ ಹಿಡಿದಂತೆ ಕಂಡುಬಂದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_118.txt ADDED
@@ -0,0 +1 @@
 
 
1
+ ಮಗನ ಮದುವೆಗೆ 100 ಕ್ಯಾರೆಟ್ ಡೈಮಂಡ್ ನೆಕ್ಲೇಸ್ ಧರಿಸಿದ್ದ ನೀತಾ ಅಂಬಾನಿ! ತಯಾರಿಗೆ ತೆಗೆದುಕೊಂಡು ಸಮಯ ಕೇಳಿದ್ರೆ ಎದೆ ಜಲ್ ಅನ್ನುತ್ತೆ ನೀತಾ ಅಂಬಾನಿ ಅನಂತ ಅಂಬಾನಿ ಮದುವೆಗೆ 100 ಕ್ಯಾರೆಟ್ ಹಳದಿ ಡೈಮಂಡ್ ನೆಕ್ಲೆಸ್ ಧರಿಸಿದ್ದರು ಇದು ಎಲ್ಲರ ಗಮನವನ್ನು ಸೆಳೆದಿದ್ದು, ನೀತಾ ಅಂಬಾನಿ ರಾಣಿಯಂತೆ ಕಂಗೊಳಿಸುವಂತೆ ಮಾಡಿತ್ತು ಎಂದು ನೆಟಿಜನ್ಸ್ ಹೇಳುತ್ತಾರೆ. ನೀತಾ ಅಂಬಾನಿ ಅನಂತ ಅಂಬಾನಿ ಮದುವೆಗೆ 100 ಕ್ಯಾರೆಟ್ ಹಳದಿ ಡೈಮಂಡ್ ನೆಕ್ಲೆಸ್ ಧರಿಸಿದ್ದರು ಇದು ಎಲ್ಲರ ಗಮನವನ್ನು ಸೆಳೆದಿದ್ದು, ನೀತಾ ಅಂಬಾನಿ ರಾಣಿಯಂತೆ ಕಂಗೊಳಿಸುವಂತೆ ಮಾಡಿತ್ತು ಎಂದು ನೆಟಿಜನ್ಸ್ ಹೇಳುತ್ತಾರೆ. ಇದನ್ನು ಮುಂಬೈನ ಕುಶಲಕರ್ಮಿ ಆಭರಣಕಾರರ ಗುಂಪು ರಚಿಸಿದ್ದು, ಕಾಂದಿಲಾಲ್ ಚೋಟಾಲಾಲ್ ಎನ್ನುವವರು 1000 ಗಂಟೆಗಳನ್ನು ತೆಗೆದುಕೊಂಡು ರಚಿಸಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ಮದುವೆಯಲ್ಲಿ ನೀತಾ ಭರ್ಜರಿ ಲುಕ್ ನ ನೆಕ್ಲೇಸ್ ಒಂದನ್ನು ಧರಿಸಿದ್ದರು. ಇದನ್ನು ಓದಿ : ಕಂದಿಲಾಲ್ ಚೋಟಾಲಾಲ್ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿಯೂ ಇದನ್ನು ಉಲ್ಲೇಖಿಸಿದ್ದು ಈ ನೆಕ್ಲೇಸ್‌ನ ಪ್ರಮುಖ ಅಂಶವೆಂದರೆ 100 ಕ್ಯಾರೆಟ್ ಹಳದಿ ವಜ್ರವನ್ನು ಸುತ್ತುವರೆದಿರುವ ಸಂಕೀರ್ಣವಾದ ಮೋಟಿಫ್‌ಗಳು, ನಂತರ ಅದನ್ನು 80 ಕ್ಯಾರೆಟ್ ಪಚ್ಚೆ ಕಟ್ ಸಾಲಿಟೇರ್ ಡ್ರಾಪ್‌ನೊಂದಿಗೆ ಜೋಡಿಸಲಾಗಿದೆ, ಇದನ್ನು ಐದು ಸಾಲುಗಳ ಬೆರಗುಗೊಳಿಸುವ ಸಾಲಿಟೇರ್‌ಗಳಲ್ಲಿ ರಚಿಸಲಾಗಿದೆ. ನೀತಾ ಅಂಬಾನಿಯವರ ಸೌಂದರ್ಯವನ್ನು ಈ ಹಳದಿ ವಜ್ರದಿಂದ ಹೊದಿಸಿದ ನೆಕ್ಲೇಸ್‌ನಿಂದ ಹೆಚ್ಚಿಸಲಾಗಿದೆ, ಪೂರ್ಣ ಡೈಮಂಡ್ ಸ್ಟಡ್‌ಗಳು, ಸಾಲಿಟೇರ್ ಹೇರ್‌ಪಿನ್‌ಗಳು (ಮತ್ತಲ್), ಮತ್ತು ನೇತಿ ಚುಟಿಯೊಂದಿಗೆ ಜೋಡಿಸಲಾಗಿದೆ. ಇದರಿಂದ ಆಕೆ ರಾಣಿಯಂತೆ ಕಾಣುವಂತೆ ಮಾಡಿದೆ ಎಂದು ನೆಟಿಜನ್‌ಗಳು ಹೇಳುತ್ತಿದ್ದಾರೆ. ಇದನ್ನು ಓದಿ : ನೀತಾ ಅಂಬಾನಿ ಧರಿಸಿರುವ ಈ ಆಭರಣದ ಮೌಲ್ಯ ಬರೋಬ್ಬರಿ 400 ರಿಂದ 500 ಕೋಟಿ ರೂಪಾಯಿ ಎಂದು ಹೇಳಲಾಗುತ್ತಿದೆ. ಅನಂತ್ -ರಾಧಿಕಾ ಮದುವೆ ವಿಶ್ವದ ಅತ್ಯಂತ ಅದ್ದೂರಿ ಮದುವೆಯಾಗಿದೆ. ಅಂದರೆ ಈ ಮದುವೆಗೆ ಮುಕೇಶ್ ಅಂಬಾನಿ 5000 ಕೋಟಿ ರೂ ಖರ್ಚು ಮಾಡಿದ್ದಾರೆ. ಜಿಯೋ ವರ್ಲ್ಡ್ ಪ್ಲಾಜಾದಲ್ಲಿ ನಡೆದ ಅನಂತ್ -ರಾಧಿಕಾ ವಿವಾಹವು ನಟಿ ನಯನತಾರಾ-ವಿಕ್ಕಿ ದಂಪತಿಗಳು, ಸೂಪರ್‌ಸ್ಟಾರ್ ರಜನಿಕಾಂತ್ ಕುಟುಂಬ, ನಿರ್ದೇಶಕ ಅಟ್ಲಿ-ಪ್ರಿಯಾ ಮತ್ತು ಕಿಮ್ ಕಾರ್ಡಶಿಯಾನ್, ಜಸ್ಟಿನ್ ಬೈಬರ್, ಬಿಲ್ ಗೇಟ್ಸ್ ಮತ್ತು ಮಾರ್ಕ್ ಜುಕರ್‌ಬರ್ಗ್‌ನಂತಹ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಸೇರಿದಂತೆ ಇಡೀ ಬಾಲಿವುಡ್ ಸೆಲೆಬ್ರಿಟಿಗಳಿಂದ ಅಲಂಕರಿಸಲ್ಪಟ್ಟಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸ��ದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_119.txt ADDED
@@ -0,0 +1 @@
 
 
1
+ ಎಕ್ಷ್ ನಲ್ಲಿ 100 ಮಿಲಿಯನ್ ಫಾಲೋವರ್ಸ್ ಗಳನ್ನು ತಲುಪಿದ ಪ್ರಧಾನಿ ಮೋದಿ ಎಕ್ಷ್ ಸಾಮಾಜಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ 100 ಮಿಲಿಯನ್ ಫಾಲೋವರ್ಸ್ ಗಳನ್ನು ತಲುಪುವ ಮೂಲಕ ಹಾಲಿ ಜಾಗತಿಕ ನಾಯಕರಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ನವದೆಹಲಿ:ಎಕ್ಷ್ ಸಾಮಾಜಿಕ ವೇದಿಕೆಯಲ್ಲಿ ಪ್ರಧಾನಿ ಮೋದಿ 100 ಮಿಲಿಯನ್ ಫಾಲೋವರ್ಸ್ ಗಳನ್ನು ತಲುಪುವ ಮೂಲಕ ಹಾಲಿ ಜಾಗತಿಕ ನಾಯಕರಲ್ಲಿ ಅತಿ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸದ್ಯ ಅಮೆರಿಕದ ಅಧ್ಯಕ್ಷ ಜೋ ಬಿಡೆನ್ (38.1 ಮಿಲಿಯನ್ ಅನುಯಾಯಿಗಳು), ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ (11.2 ಮಿಲಿಯನ್ ಅನುಯಾಯಿಗಳು) ಮತ್ತು ಪೋಪ್ ಫ್ರಾನ್ಸಿಸ್ (18.5 ಮಿಲಿಯನ್ ಅನುಯಾಯಿಗಳು) ಅವರಂತಹ ಇತರ ವಿಶ್ವ ನಾಯಕರಿಗಿಂತ ಪ್ರಧಾನಿ ಮೋದಿ ಬಹಳ ಮುಂದಿದ್ದಾರೆ. . 100 . , . … — (@) ಭಾರತದಲ್ಲಿ ಪ್ರಧಾನಿ ಮೋದಿ ಇತರ ಭಾರತೀಯ ರಾಜಕಾರಣಿಗಳಿಗಿಂತ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 26.4 ಮಿಲಿಯನ್ ಹಿಂಬಾಲಕರನ್ನು ಹೊಂದಿದ್ದರೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 27.5 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_12.txt ADDED
@@ -0,0 +1 @@
 
 
1
+ ನಾಲ್ಕು ದಿವಸಗಳ ಮಾರಿಷಸ್ ಪ್ರವಾಸದಲ್ಲಿ ಶ್ರೀ ಶ್ರೀ ರವಿಶಂಕರ ಗುರೂಜಿ : ಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ರವಿಶಂಕರ ಗುರೂಜಿ, ಮಾರಿಷಸ್ʼನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್ʼನ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು. ಬೆಂಗಳೂರು:ಜಾಗತಿಕ ಮಾನವತಾವಾದಿ ಹಾಗೂ ಆಧ್ಯಾತ್ಮಿಕ ನಾಯಕ ಗುರುದೇವ್ ಶ್ರೀ ಶ್ರೀ ರವಿಶಂಕರರು ಮಾರಿಷಸ್ʼಗೆ ನಾಲ್ಕು ದಿವಸಗಳ ಪ್ರವಾಸವನ್ನು ಕೈಗೊಂಡಿದ್ದಾರೆ. ಮಾರಿಷಸ್ ದೇಶದ ಅಧ್ಯಕ್ಷ ಪೃಥ್ವಿರಾಜ್ ಸಿಂಗ್ ರೂಪುನ್ ಮತ್ತು ಪ್ರಧಾನಮಂತ್ರಿ ಪ್ರವೀಣ್ ಕುಮಾರ್ ಜಗನ್ನಾಥ್ ಅವರು ರವಿಶಂಕರ ಗುರೂಜಿಯವರನ್ನು ಸ್ವಾಗತಿಸಿದ್ದಾರೆ. ಈ ಬಳಿಕ ಪ್ರಧಾನಮಂತ್ರಿಗಳೊಡನೆ ನಡೆದ ಸಭೆಯಲ್ಲಿ ರವಿಶಂಕರ ಗುರೂಜಿ, ಮಾರಿಷಸ್ʼನ ಸಂಸ್ಕೃತಿಯ ಸಂರಕ್ಷಣೆಯ ಬಗ್ಗೆ, ಮಾದಕವಸ್ತು-ಮುಕ್ತ ಮಾರಿಷಸ್ʼನ ಗುರಿಯನ್ನು ತಲುಪುವುದರ ಬಗ್ಗೆ ಚರ್ಚಿಸಿದರು. ಇದನ್ನೂ ಓದಿ: ಅಧ್ಯಕ್ಷರನ್ನು ಭೇಟಿ ಮಾಡಿದ ರವಿಶಂಕರ ಗುರೂಜಿಯವರು, ಅವರೊಡನೆ ಯುವ ಸಬಲೀಕರಣದ ಮಹತ್ವದ ಬಗ್ಗೆ, ಒತ್ತಡ ನಿವಾರಣಾ ಕಾರ್ಯಕ್ರಮಗಳ ಮೂಲಕ ಸಾಮರಸ್ಯವನ್ನು ಉತ್ಥಾಪಿಸುವ ಕುರಿತು, ಮಾರಿಷಸ್ʼಗೆ ಆಯುರ್ವೇದದ ಪರಿಚಯ ಹಾಗೂ ವ್ಯಾಪಕ ರೀತಿಯಲ್ಲಿ ಪ್ರಭಾವವನ್ನು ಬೀರುವ ಕೈದಿಗಳ ಪುನಶ್ಚೇತನ ಕಾರ್ಯಕ್ರಮದ ಬಗ್ಗೆಯೂ ಚರ್ಚಿಸಿದರು. ಕೈದಿಗಳ ಪುನಶ್ಚೇತನ ಕಾರ್ಯಕ್ರಮವು ಬಹಳ ಪರಿಣಾಮಕಾರಿಯಾಗಿರುವುದರಿಂದ ಆರ್ಟ್ ಆಫ್ ಲಿವಿಂಗ್ʼನ, ಕೈದಿಗಳ ಪುನಶ್ಚೇತನ ಕಾರ್ಯಕ್ರಮವನ್ನು ಮುಂದುವರಿಸುವ ಸಲುವಾಗಿ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಲಿದ್ದಾರೆ. ಈ ಪುನಶ್ಚೇತನ ಕಾರ್ಯಕ್ರಮಗಳು ಕೈದಿಗಳ ಭಾವನಾತ್ಮಕ ಒತ್ತಡವನ್ನು ನಿವಾರಿಸಿ, ಹಿಂಸಾಪ್ರವೃತ್ತಿಯಿಂದ ಹೊರಬಂದು ಕೈದಿಗಳು ಮತ್ತೆ ಸಮಾಜದ ಮುಖ್ಯವಾಹಿನಿಗೆ ಸೇರುವಂತೆ ಮಾಡುತ್ತದೆ. ಈ ಬಗ್ಗೆ ಮಾತನಾಡಿದ ರವಿಶಂಕರ ಗುರೂಜಿ, "ಅವರಲ್ಲಿರುವ ನಿಕೃಷ್ಟವಾದ ಗುಣಗಳಿಂದಾಗಿ ಅವರು ಕಾರಾಗೃಹಕ್ಕೆ ಬಂದರು. ಆದರೆ ಆಧ್ಯಾತ್ಮಿಕತೆಯು ಅವರಲ್ಲಿರುವ ಅತ್ಯುತ್ತಮ ಗುಣಗಳನ್ನು ಹೊರತರುತ್ತದೆ. ಅವರು ಒಳ್ಳೆಯ ನಾಗರಿಕರಾಗಿ, ಸಮಾಜಕ್ಕೆ ಸಕಾರಾತ್ಮಕವಾದ ರೀತಿಯಲ್ಲಿ ಕಾಣಿಕೆಯನ್ನು ನೀಡುತ್ತಾರೆ" ಎಂದು ಹೇಳಿದರು. ರವಿಶಂಕರ ಗುರೂಜಿಯವರ ಪ್ರಥಮ ದಿನದ ಭೇಟಿಯಂದು ನಡೆದ ಸಾರ್ವಜನಿಕ ಸಂಜೆಯಲ್ಲಿ ಜ್ಞಾನ, ಸತ್ಸಂಗ ಹಾಗೂ ಧ್ಯಾನ ನಡೆಯಿತು. ಈ ಸಭೆಯಲ್ಲಿ ಮಾರಿಷಸ್ʼನ ಸಾವಿರಾರು ಜನರು ಭಾಗವಹಿಸಿದ್ದಲ್ಲದೆ, ಅಧ್ಯಕ್ಷರು, ವಿಪಕ್ಷ ನಾಯಕರು ಹಾಗೂ ಪ್ರಮುಖ ಸರ್ಕಾರಿ ಅಧಿಕಾರಿಗಳೂ ಭಾಗವಹಿಸಿದ್ದರು. ಸಭೆಗೆ ಆಗಮಿಸಿದ್ದ ಇತರ ಗಣ್ಯರೆಂದರೆ ಅಡ್ರೇನ್ ದುವಲ್, ರಾಷ್ಟ್ರೀಯ ಅಸೆಂಬ್ಲಿಯ ಸ್ಪೀಕರ್, ಭಾರತದ ದೂತಾವಾಸದ ಕಮಿಷನರ್ ನಂದಿನಿ ಸಿಂಗ್ಲಾ, ಮಾರಿಷಸ್ʼನ ಮಾಜಿ ಅಧ್ಯಕ್ಷರ ಪತ್ನಿ ಸರೋಜಿನಿ ಜಗನ್ನಾಥ್, ವಿಪಕ್ಷ ನಾಯಕ ಅರವಿಂದ್ ಬೂಲೆಲೀ, ಅಲನ��� ಗಣೂ, ವಿದೇಶಾಂಗ ಸಚಿವರು, ಸಾರ್ವಜನಿಕ ಸೌಲಭ್ಯಗಳ ಸಚಿವ ಬಾಬ್ಬಿ ಹುರೀರಾಮ್, ನಾಗರಿಕ ಸೇವಗಳ ಸಚಿವ ಅಂಜೀವ್ ರಾಮ್ಧಾನ್, ಸಹಕಾರ ಸಚಿವ ನವೀನ್ ರಾಮಯ್ಯೆಡ್ ಮತ್ತು ಆರೋಗ್ಯ ಹಾಗೂ ವೆಲ್ನೆಸ್ ನ ಸಚಿವ ಕೈಲಾಶ್ ಜಗತ್ಪಾಲ್ ಆಗಮಿಸಿದ್ದರು. ಇದನ್ನೂ ಓದಿ: ತಮ್ಮ ನಾಲ್ಕು ದಿವಸಗಳ ಭೇಟಿಯಲ್ಲಿ ರವಿಶಂಕರ ಗುರೂಜಿಯವರು ಅನೇಕ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜ್ಞಾನ, ಸಂಗೀತ ಹಾಗೂ ಸತ್ಸಂಗದ ಕಾರ್ಯಕ್ರಮಗಳು ಪೈಲ್ಲಿಸ್, ಗೂಡ್ಲ್ಯಾಂಡ್ಸ್ ಮತ್ತು ವೂಟಾನ್ʼನಲ್ಲೂ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_120.txt ADDED
@@ -0,0 +1 @@
 
 
1
+ ಅಂಬಾನಿ ಮಗನ ಮದುವೆಗೆ ಅತಿಥಿಗಳನ್ನು ಕರೆತರಲು ಬುಕ್ ಮಾಡಿದ್ದ ವಿಮಾನಗಳೆಷ್ಟು ಗೊತ್ತಾ? ಇದರ ಬೆಲೆಯೆಷ್ಟು? : ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12ರಂದು ಮುಂಬೈನಲ್ಲಿ ನಡೆಯಿತು. ಹಿನ್ನೆಲೆ ಬೇರೆ ಬೇರೆ ಕ್ಷೇತ್ರಗಳಿಂದ ಗಣ್ಯರು ಆಗಮಿಸಿದ್ದರು. ಇವರೆಲ್ಲರನ್ನು ಸ್ವಾಗತಿಸಲು ಅಂಬಾನಿ ಹಲವು ವ್ಯವಸ್ಥೆಗಳನ್ನು ಮಾಡಿದ್ದರು. ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹವು ಜುಲೈ 12ರಂದು ಮುಂಬೈನಲ್ಲಿ ನಡೆಯಿತು. ಹಿನ್ನೆಲೆ ಬೇರೆ ಬೇರೆ ಕ್ಷೇತ್ರಗಳಿಂದ ಗಣ್ಯರು ಆಗಮಿಸಿದ್ದರು. ಇವರೆಲ್ಲರನ್ನು ಸ್ವಾಗತಿಸಲು ಅಂಬಾನಿ ಹಲವು ವ್ಯವಸ್ಥೆಗಳನ್ನು ಮಾಡಿದ್ದರು. ಇದನ್ನು ಓದಿ : ದೇಶ ವಿದೇಶಗಳಿಂದ ಇವರ ಈ ಸಮಾರಂಭಕ್ಕೆ ಅನೇಕ ಗಣ್ಯರು ಆಗಮಿಸಿದ್ದರು. ಇವರ ಸ್ವಾಗತಕ್ಕೆ ಮುಕೇಶ್ ಅಂಬಾನಿ ಭರ್ಜರಿ ಪ್ಲಾನ್ ಮಾಡಿದ್ದರು. ಅತಿಥಿಗಳನ್ನು ಕರೆತರಲು ಮುಕೇಶ್ ಅಂಬಾನಿ ಮೂರು ಪಾಲ್ಕನ್ 2000 ಚಟುಗಳನ್ನು ಕಾಯ್ದಿರಿಸಿದ್ದರು ಮತ್ತು ಮುಂಬೈಗೆ ಕಳುಹಿಸಲು 100 ಖಾಸಗಿ ಜೆಟ್ ಗಳನ್ನು ಕಾಯ್ದೀರಿಸಿದ್ದರು. ಇದನ್ನು ಓದಿ : ವಿಮಾನ ಬುಕ್ ಮಾಡಲು ಅಂಬಾನಿ ಕುಟುಂಬದವರು ನೂರಾರು ಕೋಟಿಗಿಂತಲೂ ಹೆಚ್ಚು ಖರ್ಚು ಮಾಡಿದೆ ಮತ್ತು ಆಚರಣೆಗಳಿಗಾಗಿ 320 ಮಿಲಿಯನ್ ಡಾಲರ್ ಕರಿಗಿಂತ ಹೆಚ್ಚು ಖರ್ಚು ಮಾಡಿದೆ. ಪ್ರಯಾಣದ ಅನುಕೂಲಕ್ಕಾಗಿ 100 ಕ್ಕೂ ಹೆಚ್ಚು ಖಾಸಗಿ ವಿಮಾನಗಳನ್ನು ಕಾಯ್ದಿರಿಸಿದ್ದರು ಮತ್ತು ಅದಲ್ಲದೆ ಅಂಬಾನಿ ಕುಟುಂಬ ಕೇವಲ ಮದುವೆಗೆ ಮಾತ್ರವಲ್ಲದೆ ವಿದೇಶಿ ಅತಿಥಿಗಳಿಗೂ ದೇಶ ಸುತ್ತಿಸಿದರು ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_121.txt ADDED
@@ -0,0 +1 @@
 
 
1
+ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕರಾಗಿ ಗೌರವ್ ಗೊಗೊಯ್ ನೇಮಕ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆಯ ಸ್ಪೀಕರ್ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ವಿಪ್‌ಗಳನ್ನು ನೇಮಿಸುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ. ನವದೆಹಲಿ:ಕಾಂಗ್ರೆಸ್‌ನ ಗೌರವ್ ಗೊಗೊಯ್ ಲೋಕಸಭೆಯಲ್ಲಿ ಪಕ್ಷದ ಉಪ ನಾಯಕರಾಗಲಿದ್ದು, ಈ ನಿರ್ಧಾರದ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಕಳುಹಿಸಲಾಗಿದೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಲೋಕಸಭೆಯ ಸ್ಪೀಕರ್ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಉಪನಾಯಕ, ಮುಖ್ಯ ಸಚೇತಕ ಮತ್ತು ಇಬ್ಬರು ವಿಪ್‌ಗಳನ್ನು ನೇಮಿಸುವ ಕುರಿತು ಮಾಹಿತಿ ನೀಡಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ತಿಳಿಸಿದ್ದಾರೆ. ಇದನ್ನೂ ಓದಿ: ಗೊಗೊಯ್ ಅವರು ಲೋಕಸಭೆಯಲ್ಲಿ ಪಕ್ಷದ ಉಪ ನಾಯಕರಾಗಿದ್ದರೆ, ಕೇರಳದಿಂದ ಎಂಟು ಬಾರಿ ಸಂಸದರಾಗಿರುವಅವರು ಪಕ್ಷದ ಮುಖ್ಯ ಸಚೇತಕರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.ವಿರುದುನಗರ ಸಂಸದ ಮಾಣಿಕ್ಕಂ ಟ್ಯಾಗೋರ್ ಮತ್ತು ಕಿಶನ್‌ಗಂಜ್ ಸಂಸದ ಮೊಹಮ್ಮದ್ ಜಾವೇದ್ ಲೋಕಸಭೆಯಲ್ಲಿ ಪಕ್ಷದ ವಿಪ್ ಆಗಲಿದ್ದಾರೆ ಎಂದು ಅವರು ಹೇಳಿದರು. ಈ ಹಿಂದೆ, ಪಕ್ಷವು ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕ ಎಂದು ಹೆಸರಿಸಿತ್ತು, ನಂತರ ಅವರನ್ನು ಆ ಸ್ಥಾನಕ್ಕೆ ನೇಮಿಸಲಾಯಿತು. ಲೋಕಸಭೆಯಲ್ಲಿ ರಾಹುಲ್ ಗಾಂಧಿಯವರ ಮಾರ್ಗದರ್ಶನದಲ್ಲಿ ಕಾಂಗ್ರೆಸ್ ಮತ್ತು ಭಾರತ ಪಕ್ಷಗಳು ಶಕ್ತಿಯುತವಾಗಿ ಜನರ ಸಮಸ್ಯೆಗಳ ಮೇಲೆ ಹೋರಾಟ ನಡೆಸಲಿವೆ ಎಂದು ವೇಣುಗೋಪಾಲ್ ಹೇಳಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_122.txt ADDED
@@ -0,0 +1 @@
 
 
1
+ ಮಧ್ಯಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಮೂರ್ತಿ ರೋಹಿತ್ ಆರ್ಯ ಬಿಜೆಪಿಗೆ ಸೇರ್ಪಡೆ ಮಧ್ಯಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ರೋಹಿತ್ ಆರ್ಯ ಶನಿವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.ಕೇವಲ ಮೂರು ತಿಂಗಳ ಹಿಂದಷ್ಟೇ ಅವರು ವೃತ್ತಿಯಿಂದ ನಿವೃತ್ತಿಯಾಗಿದ್ದರು. ನವದೆಹಲಿ:ಮಧ್ಯಪ್ರದೇಶ ಹೈಕೋರ್ಟ್‌ನ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ರೋಹಿತ್ ಆರ್ಯ ಶನಿವಾರ ಭಾರತೀಯ ಜನತಾ ಪಕ್ಷಕ್ಕೆ ಸೇರಿದ್ದಾರೆ.ಕೇವಲ ಮೂರು ತಿಂಗಳ ಹಿಂದಷ್ಟೇ ಅವರು ವೃತ್ತಿಯಿಂದ ನಿವೃತ್ತಿಯಾಗಿದ್ದರು. ಇದನ್ನೂ ಓದಿ: ವರದಿಯ ಪ್ರಕಾರ, ಭೋಪಾಲ್‌ನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಆರ್ಯ ಅವರು ಬಿಜೆಪಿ ಮಧ್ಯಪ್ರದೇಶದ ಮುಖ್ಯಸ್ಥ ಡಾ ರಾಘವೇಂದ್ರ ಶರ್ಮಾ ಅವರ ಸದಸ್ಯತ್ವವನ್ನು ಸ್ವೀಕರಿಸಿದರು.ಜಸ್ಟಿಸ್ ಆರ್ಯ ಅವರು 1962 ರಲ್ಲಿ ಜನಿಸಿದ್ದು 1984 ರಲ್ಲಿ ವಕೀಲರಾಗಿ ದಾಖಲಾದರು. ಮುಂದೆ ಅವರನ್ನು ಮಧ್ಯಪ್ರದೇಶ ಹೈಕೋರ್ಟ್ 2003 ರಲ್ಲಿ ಹಿರಿಯ ವಕೀಲರಾಗಿ ನೇಮಿಸಲಾಯಿತು.ಅವರು ಪ್ರಮುಖವಾಗಿ ನಾಗರಿಕ ಕಾನೂನು, ವಾಣಿಜ್ಯ ಕಾನೂನು, ಮಧ್ಯಸ್ಥಿಕೆ, ಆಡಳಿತಾತ್ಮಕ ಕಾನೂನು, ಸೇವಾ ಕಾನೂನು, ಕಾರ್ಮಿಕ. ಕಾನೂನು ಮತ್ತು ತೆರಿಗೆ ಕಾನೂನಿನಲ್ಲಿ ಪರಿಣಿತಿಯನ್ನು ಹೊಂದಿದ್ದಾರೆ. ಇದನ್ನೂ ಓದಿ: ಅಷ್ಟೇ ಅಲ್ಲದೆ ಅವರು ಕೇಂದ್ರ ಸರ್ಕಾರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಟೆಲಿಕಾಂ ಇಲಾಖೆ, ಬಿಎಸ್ ಎನ್ ಎಲ್ ನೌಕರರ ರಾಜ್ಯ ವಿಮಾ ನಿಗಮ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಸಂಸ್ಥೆಗಳನ್ನು ಪ್ರತಿನಿಧಿಸಿದರು.ಅವರು 2013 ರಲ್ಲಿ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಉನ್ನತೀಕರಿಸಲ್ಪಟ್ಟ ಅವರು 2015 ರಲ್ಲಿ ಕಾಯಂ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರು ಏಪ್ರಿಲ್ 27, 2024 ರಂದು ನಿವೃತ್ತರಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_123.txt ADDED
@@ -0,0 +1 @@
 
 
1
+ ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರ ಮೆಹಂದಿ ಏನನ್ನು ಒಳಗೊಂಡಿತ್ತು ಗೊತ್ತಾ? : ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ? ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ? ನೀತಾ ಅಂಬಾನಿ ತಮ್ಮ ಪುತ್ರ ಅನಂತ್ ಅಂಬಾನಿ ಅವರ ವಿವಾಹದಲ್ಲಿ ವಿಸ್ತಾರವಾದ ಮೆಹೆಂದಿ ವಿನ್ಯಾಸ ಸಕತ್ ವೈರಲ್ ಆಗಿದೆ. ಈ ಮೆಹೆಂದಿ ಸಾಮಾನ್ಯವಾಗಿರದೆ ವಿಭಿನ್ನ ರೀತಿಯಲ್ಲಿ ಮೂಡಿ ಬಂದಿತ್ತು ಎಂದು ಹೇಳಿಲಾಗಿದೆ. ಏನಿತ್ತು ಅಷ್ಟೊಂದು ಆಶ್ಚರ್ಯ ಪಡುವಂತದ್ದು ಎಂದರೆ ಇಲ್ಲಿದೆ ಇದನ್ನು ಓದಿ : ನೀತಾ ಅಂಬಾನಿ, ಮುಖೇಶ್ ಅಂಬಾನಿ, ಇಶಾ ಅಂಬಾನಿ, ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್, ಆಕಾಶ್ ಅಂಬಾನಿ ಮತ್ತು ಹೆಚ್ಚಿನವರ ಹೆಸರುಗಳನ್ನು ಒಳಗೊಂಡಿತ್ತು ಅದರ ಜೊತೆಗೆ ಅಂಗೈ ಮೇಲೆ ರಾಧಾ-ಕೃಷ್ಣರ ಲಕ್ಷಣವನ್ನು ಒಳಗೊಂಡಿತ್ತು. ಇನ್‌ಸ್ಟಾಗ್ರಾಮ್ ನ ವೆಡ್ ಮಿ ಗುಡ್ ಪೇಜ್ ನಲ್ಲಿ ಅವರ ಮೆಹೆಂದಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದನ್ನು ಓದಿ : ಮೆಹೆಂದಿಯ ವಿವರವಾದ ಚಿತ್ರವನ್ನು ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ, “ಕ್ಲಾಸಿಕ್ ಇಂಡಿಯನ್ ವೆಡ್ಡಿಂಗ್ ಮೆಹೆಂದಿ ಸಂಪ್ರದಾಯದಿಂದ ಸ್ಫೂರ್ತಿ ಪಡೆದ ಶ್ರೀಮತಿ ನೀತಾ ಅಂಬಾನಿ ಅವರ ವಿನ್ಯಾಸವು ನವವಿವಾಹಿತರ ಹೆಸರುಗಳೊಂದಿಗೆ ಅವರ ಅಂಗೈಯಲ್ಲಿ ರಾಧಾ-ಕೃಷ್ಣ ಮೋಟಿಫ್ ಅನ್ನು ಹೊಂದಿದೆ, ಅನಂತ್ ಮತ್ತು ರಾಧಿಕಾ, ಮತ್ತು ಇಡೀ ಅಂಬಾನಿ ಕುಟುಂಬ ಅವಳ ಕೈ ಬೆನ್ನಿನ ಮೇಲೆ ಬರೆಯಿಸಿಕೊಂಡಿದ್ದಾರೆ. ಖ್ಯಾತ ಸೆಲೆಬ್ರಿಟಿ ಮೆಹೆಂದಿ ಕಲಾವಿದೆ ವೀಣಾ ನಗ್ಡಾ ಅವರು ಅಂಬಾನಿ ನಿವಾಸದಲ್ಲಿ ಅನೇಕ ಸೆಲೆಬ್ರಿಟಿಗಳ ಕೈಗಳನ್ನು ತಮ್ಮ ಸೊಗಸಾದ ವಿನ್ಯಾಸಗಳಿಂದ ಅಲಂಕರಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_124.txt ADDED
@@ -0,0 +1 @@
 
 
1
+ : ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳು ಇವೆ..? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಬಾಹ್ಯಾಕಾಶಕ್ಕೆ ಹೋದ ಮೊದಲ ಭಾರತೀಯ ಮಹಿಳೆ ಯಾರು? ಉತ್ತರ: ಕಲ್ಪನಾ ಚಾವ್ಲಾ ಪ್ರಶ್ನೆ 2:ಭಾರತದ ರಾಷ್ಟ್ರಗೀತೆ "ಜನ ಗಣ ಮನ" ವನ್ನು ಮೂಲತಃ ಯಾವ ಭಾಷೆಯಲ್ಲಿ ಬರೆಯಲಾಗಿದೆ? ಉತ್ತರ: ಬಾಂಗ್ಲಾ ಪ್ರಶ್ನೆ 3:ಮಹಾತ್ಮ ಗಾಂಧಿಯವರ ಪೂರ್ಣ ಹೆಸರೇನು? ಉತ್ತರ: ಮೋಹನ್‌ದಾಸ್ ಕರಮಚಂದ್ ಗಾಂಧಿ ಪ್ರಶ್ನೆ 4:ಸಂಸತ್ತಿನ ಮೇಲ್ಮನೆ ಯಾವುದು? ಉತ್ತರ: ರಾಜ್ಯಸಭೆ ಪ್ರಶ್ನೆ 5:'ಟ್ರೇನ್ ಟು ಪಾಕಿಸ್ತಾನ್' ಕೃತಿಯನ್ನು ಬರೆದವರು ಯಾರು? ಉತ್ತರ: ಖುಷ್ವಂತ್ ಸಿಂಗ್ ಇದನ್ನೂ ಓದಿ: ಪ್ರಶ್ನೆ 6:ವಿಶ್ವದ ಅತ್ಯಂತ ಕಡಿಮೆ ಯುದ್ಧ ಎಷ್ಟು ಕಾಲ ನಡೆಯಿತು? ಉತ್ತರ: 38 ನಿಮಿಷಗಳು ಪ್ರಶ್ನೆ 7:ಕರ್ನಾಟಕದಲ್ಲಿ ಎಷ್ಟು ಲೋಕಸಭಾ ಕ್ಷೇತ್ರಗಳು ಇವೆ..? ಉತ್ತರ: 28 ಪ್ರಶ್ನೆ 8:ಲಾಹೋರ್ ಹೈಕೋರ್ಟ್‌ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಯಾರು? ಉತ್ತರ: ಆಲಿಯಾ ನೀಲಂ ಪ್ರಶ್ನೆ 9:ಬಿಮ್‌ಸ್ಟೆಕ್ ಗುಂಪಿನಲ್ಲಿ ಎಷ್ಟು ದೇಶಗಳನ್ನು ಸೇರಿಸಲಾಗಿದೆ? ಉತ್ತರ: 7 ಪ್ರಶ್ನೆ 10:ಭಾರತದ ಪ್ರಾಜೆಕ್ಟ್-75i ಯಾವುದಕ್ಕೆ ಸಂಬಂಧಿಸಿದೆ? ಉತ್ತರ: ಜಲಾಂತರ್ಗಾಮಿ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_125.txt ADDED
@@ -0,0 +1 @@
 
 
1
+ 2024: ಪಾಕ್ ಬಗ್ಗುಬಡಿದ ಟೀಮ್ ಇಂಡಿಯಾಗೆ ವಿಶ್ವ ಚಾಂಪಿಯನ್ ಪಟ್ಟ..! ಇಲ್ಲಿನ ಎಡ್ಜ್‌ಬಾಸ್ಟನ್ ನಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ವಿರುದ್ಧ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವು ಐದು ವಿಕೆಟ್ ಕಳೆದುಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಬರ್ಮಿಂಗ್ಹ್ಯಾಮ್:ಇಲ್ಲಿನ ಎಡ್ಜ್‌ಬಾಸ್ಟನ್ ನಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್ ತಂಡದ ವಿರುದ್ಧ ನಡೆದ ವರ್ಲ್ಡ್ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ 2024 ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಡಿಯಾ ಚಾಂಪಿಯನ್ಸ್ ತಂಡವು ಐದು ವಿಕೆಟ್ ಕಳೆದುಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿದ ಪಾಕಿಸ್ತಾನ್ ಚಾಂಪಿಯನ್ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿತು.ಪಾಕ್ ಪರವಾಗಿ ಶೋಯಬ್ ಮಲ್ಲಿಕ್ 36 ಎಸೆತಗಳಲ್ಲಿ ಮೂರು ಬೌಂಡರಿಗಳ ನೆರವಿನೊಂದಿಗೆ 41 ರನ್ ಗಳಿಸಿದರು.ಇನ್ನೊಂದೆಡೆಗೆ ಕ್ರಮಾನ್ ಅಕ್ಮಲ್ 24,ಮಾಕ್ಸೂದ್ 21,ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.ಟೀಮ್ ಇಂಡಿಯಾ ಪರವಾಗಿ ಅನುರೀತ್ ಸಿಂಗ್ ಮೂರು ವಿಕೆಟ್ ಗಳನ್ನು ಕಬಳಿಸಿದರು. 🏆 — (@India_Champions) ಪಾಕ್ ತಂಡವು ನೀಡಿದ ಗೆಲುವಿನ ಗುರಿಯನ್ನು ಬೆನ್ನತ್ತಿದ ಇಂಡಿಯಾ ಚಾಂಪಿಯನ್ಸ್ ತಂಡವು 19.1 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 159 ರನ್ ಗಳಿಸುವ ಮೂಲಕ ಗೆಲುವಿನ ಗುರಿಯನ್ನು ತಲುಪಿತು.ಇಂಡಿಯಾ ಚಾಂಪಿಯನ್ಸ್ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಂಬಟಿ ರಾಯಡು 30 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಎರಡು ಸಿಕ್ಸರ್ ಗಳ ನೆರವಿನಿಂದಾಗಿ 50 ರನ್ ಗಳಿಸಿದರೆ ಇನ್ನೊಂದೆಡೆಗೆ ಯುಸೂಪ್ ಪಠಾಣ್ ಕೇವಲ 16 ಎಸೆತಗಳಲ್ಲಿ 30 ರನ್ ಗಳಿಸುವ ಮೂಲಕ ತಂಡವು ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ನೆರವಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_126.txt ADDED
@@ -0,0 +1 @@
 
 
1
+ ಅಮೆಜಾನ್ ಪೇ ಜೊತೆ ಸಹಯೋಗ; ದೆಹಲಿ ಮೆಟ್ರೋ ಹೊಸ ಟಿಕೆಟ್ ವ್ಯವಸ್ಥೆ ಪ್ರಾರಂಭ : ದೆಹಲಿ ಮೆಟ್ರೋ ಪ್ರಯಾಣಿಕರು ಈಗ ಅಡಿಯಲ್ಲಿ ಟಿಕೆಟ್ ಆಯ್ಕೆ ಮೂಲಕ ಆನ್‌ಲೈನ್ ಪಾವತಿಸಿ ಟಿಕೆಟ್ ಪಡೆಯುವಂತೆ ಅಮೆಜಾನ್ ಪೇ ಜೊತೆ ಸಹಯೋಗ ಮಾಡಿಕೊಂಡಿದೆ. : ಲಕ್ಷಾಂತರ ದೆಹಲಿ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿಯನ್ನು ನೀಡಿದ್ದು, ಆನ್‌ಲೈನ್ ಟಿಕೆಟ್ ವ್ಯವಸ್ಥೆಯನ್ನು ಸರಳಗೊಳಿಸಲು ಡಿಎಂಆರ್‌ಸಿ ನಿರ್ಧರಿಸಿದೆ. ಪ್ರಯಾಣಿಕರು ಈಗ ಮೂಲಕ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಟಿಕೆಟ್‌ಗಳನ್ನು ಪಡೆಯಬಹುದು. ಗುರುವಾರ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ ಜೊತೆ ಪಾಲುದಾರಿಕೆಯನ್ನು ಘೋಷಿಸಿದೆ. ಈ ಮೂಲಕ ಪ್ರಯಾಣಿಕರಿಗೆ ಟಿಕೆಟ್ ಪಾವತಿಯನ್ನು ಸುಲಭಗೊಳಿಸುತ್ತದೆ ಎಂದು ನಿರೀಕ್ಷಿಸಲಾಗಿದೆ ಇದನ್ನು ಓದಿ : ಮೆಟ್ರೋ ಪ್ರಯಾಣಿಕರು ಈಗ ಟ್ಯಾಬ್ ಅಡಿಯಲ್ಲಿ ದೆಹಲಿ ಮೆಟ್ರೋ ಟಿಕೆಟ್ ಆಯ್ಕೆ ಮಾಡಬಹುದು. ಅವರು ತಮ್ಮ ನಿರ್ಗಮನ ಮತ್ತು ಗಮ್ಯಸ್ಥಾನ ಕೇಂದ್ರಗಳನ್ನು ಆಯ್ಕೆ ಮಾಡಬೇಕಾಗುತ್ತದೆ, ನಂತರ ತಮ್ಮ ಮೊಬೈಲ್ ಫೋನ್‌ಗಳಲ್ಲಿ ಟಿಕೆಟ್ ಅನ್ನು ತಕ್ಷಣವೇ ಸ್ವೀಕರಿಸಲು ಆನ್‌ಲೈನ್ ಪಾವತಿಯನ್ನು ಮಾಡಬೇಕಾಗುತ್ತದೆ. ಈ ವಿಶಿಷ್ಟ ಟಿಕೆಟ್ ವ್ಯವಸ್ಥೆಯು ಪ್ರಯಾಣಿಕರಿಗೆ ಪ್ರಯಾಣದಲ್ಲಿರುವಾಗ ಸುಲಭವಾಗಿ ಮೆಟ್ರೋ ಟಿಕೆಟ್‌ಗಳನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ, ದೆಹಲಿ ಮೆಟ್ರೋದಲ್ಲಿ ಪ್ರತಿದಿನ ಪ್ರಯಾಣಿಸುವ ಲಕ್ಷಾಂತರ ಜನರಿಗೆ ತ್ವರಿತ, ಸಂಪರ್ಕವಿಲ್ಲದ ಮತ್ತು ತೊಂದರೆ-ಮುಕ್ತ ಅನುಭವವನ್ನು ನೀಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೆಟ್ರೋ ನಿಲ್ದಾಣಗಳನ್ನು ಪ್ರವೇಶಿಸಲು ಮತ್ತು ನಿರ್ಗಮಿಸಲು ಎಎಫ್‌ಸಿ ಗೇಟ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನರ್ ಮುಂದೆ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಹಿಡಿದಿಟ್ಟುಕೊಳ್ಳಬೇಕು ಎಂದು ದೆಹಲಿ ಮೆಟ್ರೋ ಅಧಿಕಾರಿಗಳು ತಿಳಿಸಿದ್ದಾರೆ. ಟಿಕೆಟ್‌ಗಳಿಗಾಗಿ ಜೊತೆಗೆ ಪಾಲುದಾರಿಕೆಯು ದೈನಂದಿನ ಪ್ರಯಾಣವನ್ನು ಸುಲಭಗೊಳಿಸುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ವಿಕಾಸ್ ಕುಮಾರ್ ತಿಳಿಸಿದ್ದಾರೆ.ಕಾಗದದ ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಪರಿಸರ ಸ್ನೇಹಿಯಾಗಲು ಅವರ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ತಿಳಿಸಿದ್ದಾರೆ. ಇದನ್ನು ಓದಿ : ಅಮೆಜಾನ್ ಪೇ ಇಂಡಿಯಾದ ನಿರ್ದೇಶಕರಾದ ಅನುರಾಧಾ ಅಗರ್ವಾಲ್, “ಅಮೆಜಾನ್ ಪೇನಲ್ಲಿ ಮೆಟ್ರೋ ಕ್ಯೂಆರ್ ಟಿಕೆಟ್ ವ್ಯವಸ್ಥೆಯನ್ನು ಪ್ರಾರಂಭಿಸಲು ನಾವು ಉತ್ಸುಕರಾಗಿದ್ದೇವೆ, ಇದು ಲಕ್ಷಾಂತರ ಜನರಿಗೆ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಇದು ಟಿಕೆಟ್‌ಗಳನ್ನು ಖರೀದಿಸುವಾಗ ಟೋಕನ್‌ಗಳು ಮತ್ತು ನಗದು ಅಗತ್ಯವನ್ನು ತೆಗೆದುಹಾಕುತ್ತದೆ. ದೆಹಲಿ-ಎನ್‌ಸಿಆರ್‌ನ ವಿವಿಧ ಮಾರ್ಗಗಳಲ್ಲಿ ಮೆಟ್ರೋ ಪ್ರತಿದಿನ ಸುಮಾರು 6.5 ಮಿಲಿಯನ್ ಪ್ರಯಾಣಿಕರನ್ನು ಒಯ್ಯುತ್ತದೆ ಎಂದು ಡಿಎಂಆರ್‌ಸಿಯ ಪ್ರಧಾನ ಕಾರ್ಯನಿರ್ವಾಹಕ ನಿರ್ದೇಶಕ ಅನುಜ್ ದಯಾಲ್ ತಿಳಿಸಿದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_127.txt ADDED
@@ -0,0 +1 @@
 
 
1
+ ರಾಧಿಕಾ ಮರ್ಚೆಂಟ್ ನಿರ್ಗಮನ ಸಮಾರಂಭಕ್ಕಾಗಿ ಧರಿಸಿದ್ದ ಕೆಂಪು ಚಿನ್ನದ ಕಸೂತಿ ಲೆಹೆಂಗಾ ವಿನ್ಯಾಸಗೊಳಿಸದವರು ಇವರೇ ನೋಡಿ.....! - : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರೊಂದಿಗೆ ಶುಕ್ರವಾರ ವಿವಾಹವಾದ ರಾಧಿಕಾ ಮರ್ಚೆಂಟ್, ತಮ್ಮ ವಿದಾಯಿ ಸಮಾರಂಭದಲ್ಲಿ ಕೆಂಪು ಬಣ್ಣದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು. : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರೊಂದಿಗೆ ಶುಕ್ರವಾರ ವಿವಾಹವಾದ ರಾಧಿಕಾ ಮರ್ಚೆಂಟ್, ತಮ್ಮ ವಿದಾಯಿ ಸಮಾರಂಭದಲ್ಲಿ ಕೆಂಪು ಬಣ್ಣದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು. ಸಾಂಪ್ರದಾಯಿಕ ಗುಜರಾತಿ ಕಲಾತ್ಮಕತೆಯನ್ನು ನೆನಪಿಸುವ ನಿಜವಾದ ಚಿನ್ನದ ಕರ್ಚೋಬಿ ಕೆಲಸದಿಂದ ಅಲಂಕರಿಸಲ್ಪಟ್ಟ ಬ್ಯಾಕ್‌ಲೆಸ್ ಬ್ಲೌಸ್ ಮತ್ತು ಬ್ರೊಕೇಡ್ ಸಿಲ್ಕ್ ಲೆಹೆಂಗಾ ಸ್ಕರ್ಟ್, ಸೂರ್ಯಾಸ್ತದ ವರ್ಣಗಳಲ್ಲಿ ಬನಾರಸಿ ಬ್ರೊಕೇಡ್ ಪ್ರಿಂಟ್‌ನಿಂದ ಒಳಗೊಂಡಿತ್ತು. ಈ ಮೂಲಕ ಸಾಂಸ್ಕೃತಿಕ ಗೌರವವನ್ನು ತೋರ್ಪಡಿಸಿದರು. ಮದುವೆಗೆ ಅಬು ಜಾನಿ ಸಂದೀಪ್ ಖೋಸ್ಲಾ ಅವರ ಸಾಂಪ್ರದಾಯಿಕ ದಂತ ಮತ್ತು ಕೆಂಪು ಲೆಹೆಂಗಾವನ್ನು ಧರಿಸಿದ್ದ ರಾಧಿಕಾ ಮರ್ಚೆಂಟ್ ಭಾವನಾತ್ಮಕ ನಿರ್ಗಮನ ಸಮಾರಂಭಕ್ಕಾಗಿ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು. ಇದನ್ನು ಓದಿ : ರಿಯಾ ಕಪೂರ್ ಅವರ ಶೈಲಿಯಲ್ಲಿ, ರಾಧಿಕಾ ಅವರ ವಿದೈ ಬೆಸ್ಪೋಕ್ ಕೌಚರ್ ಲೆಹೆಂಗಾವನ್ನು ಒಳಗೊಂಡಿತ್ತು.ರಾಧಿಕಾ, ಬನಾರಸಿ ರೇಷ್ಮೆ ದುಪಟ್ಟಾವನ್ನು ನಿಜವಾದ ಚಿನ್ನದ ಕಸೂತಿ ಮತ್ತು ರೇಶಮ್ ತನ್ನ ಭುಜದ ಮೇಲೆ ಹಾಕಿಕೊಂಡಿದ್ದರು. ಹಿರಾಲ್ ಭಾಟಿಯಾ ಮತ್ತು ಲವ್ಲೀನ್ ರಾಮಚಂದಾನಿ ಅವರು ರಾಧಿಕಾ ಅವರ ಮೇಕ್ಅಪ್ ಮತ್ತು ಹೇರ್ ಸ್ಟೈಲಿಂಗ್ ಮಾಡಿದ್ದರು. ರಾಧಿಕಾ ಅವರ ಆಭರಣಗಳು, ಅವರ ಕುಟುಂಬದ ಪರಂಪರೆಯ ಪ್ರತಿಬಿಂಬವಾಗಿದ್ದು, ಪೀಳಿಗೆಯಿಂದ ಬಂದ ಚರಾಸ್ತಿಯ ತುಣುಕುಗಳನ್ನು ಒಳಗೊಂಡಿತ್ತು.ಚಿನ್ನ, ವಜ್ರಗಳು ಮತ್ತು ಪಚ್ಚೆಗಳಿಂದ ಅಲಂಕರಿಸಲ್ಪಟ್ಟ ಅವಳ ಮೇಳವು ಚೋಕರ್, ನೆಕ್ಲೇಸ್, ಪೋಲ್ಕಿ ಕಿವಿಯೋಲೆಗಳು, ಬಾಜು ಬಂಧ್, ಕದಾಸ್, ಬಳೆಗಳು, ಹಾತ್ ಫೂಲ್, ಉಂಗುರಗಳು ಮತ್ತು ಮಾಂಗ್ ಟಿಕಾವನ್ನು ಒಳಗೊಂಡಿತ್ತು ಇದನ್ನು ಓದಿ : ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ರಾಧಿಕಾ ಮತ್ತು ಅನಂತ್ ಅಂಬಾನಿ ಅವರ ವಿವಾಹವು ಸ್ಟಾರ್-ಸ್ಟಾಡ್ ಅಫೇರ್ ಆಗಿತ್ತು, ಇದರಲ್ಲಿ ಅಂತರರಾಷ್ಟ್ರೀಯ ಸೆಲೆಬ್ರಿಟಿಗಳು ಮತ್ತು ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು. ಆಚರಣೆಯ ಉದ್ದಕ್ಕೂ ರಾಧಿಕಾ ಅವರ ಉಡುಗೆಯ ಆಯ್ಕೆಯು ಸಮಕಾಲೀನ ಫ್ಯಾಷನ್ ಮಿಶ್ರಣದೊಂದಿಗೆ ಗುಜರಾತಿ ಸಂಪ್ರದಾಯಗಳನ್ನು ಸತತವಾಗಿ ಆಚರಿಸುತ್ತಿತ್ತು. ಜುಲೈ 14 ���ಂದು ಮದುವೆಯ ಆರತಕ್ಷತೆ 'ಮಂಗಲ್ ಉತ್ಸವ' ದೊಂದಿಗೆ ಆಚರಣೆ ನಡೆಯಲಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_128.txt ADDED
@@ -0,0 +1 @@
 
 
1
+ ಜಮ್ಮು ಕಾಶ್ಮೀರದಲ್ಲಿ ಬಸ್ ಕಂದಕಕ್ಕೆ ಬಿದ್ದು 2 ಸಾವು, 25 ಜನರಿಗೆ ಗಾಯ ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಬಸ್ಸೊಂದು ರಸ್ತೆಯಿಂದ ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನವದೆಹಲಿ:ಜಮ್ಮು ಮತ್ತು ಕಾಶ್ಮೀರದ ದೋಡಾ ಜಿಲ್ಲೆಯಲ್ಲಿ ಶನಿವಾರ ಬಸ್ಸೊಂದು ರಸ್ತೆಯಿಂದ ಸ್ಕಿಡ್ ಆಗಿ 200 ಅಡಿ ಆಳದ ಕಮರಿಗೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 25 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಾಸಗಿ ಮಿನಿ ಬಸ್ ಭಾಲೆಸ್ಸಾದಿಂದ ಥಾತ್ರಿಗೆ ತೆರಳುತ್ತಿದ್ದಾಗ ಬೆಳಿಗ್ಗೆ 10.25 ರ ಸುಮಾರಿಗೆ ಭತ್ಯಾಸ್ ಬಳಿ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ರಕ್ಷಕರು ಸ್ಥಳದಲ್ಲೇ ಒಬ್ಬ ಮಹಿಳೆ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದರು.ಗಾಯಗೊಂಡ ಇತರ ಒಂಬತ್ತು ವ್ಯಕ್ತಿಗಳ ಸ್ಥಿತಿ ಗಂಭೀರವಾಗಿದ್ದು, ಅವರನ್ನು ದೋಡಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_129.txt ADDED
@@ -0,0 +1 @@
 
 
1
+ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ : ಮುಂಬೈಗೆ ಬಂದಿಳಿದ ಖ್ಯಾತ ರ‍್ಯಾಪರ್!!! ಜುಲೈ 12 ರಂದು ನಡೆಯಲಿರುವ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದಲ್ಲಿ ರಾಪರ್ ಯೋ ಯೋ ಹನಿ ಸಿಂಗ್ ಮುಂಬೈನಲ್ಲಿ ಕಾಣಿಸಿಕೊಂಡರು. ವಿಮಾನ ನಿಲ್ದಾಣಕ್ಕೆ ಆಗಮಿಸಿದ ರಾಪರ್ ಸ್ಮೈಲ್ ಮಾಡಿಕೊಂಡು ಬಿಳಿ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು. ಅಭಿಮಾನಿಗಳು ಆತ್ಮೀಯವಾಗಿ ಸ್ವಾಗತಿಸಿದರು, ಅಂಬಾನಿ ಕುಟುಂಬವು ಮುಂಬೈನಲ್ಲಿರುವ ತಮ್ಮ ಸಾಂಪ್ರದಾಯಿಕ ನಿವಾಸವಾದ ಆಂಟಿಲಿಯಾದಲ್ಲಿ ರೋಮಾಂಚಕ 'ಹಲ್ದಿ' ಸಮಾರಂಭವನ್ನು ಆಯೋಜಿಸಿತ್ತು. ಅನಂತ್ ಮತ್ತು ರಾಧಿಕಾ ಅವರ ಅದ್ಧೂರಿ ವಿವಾಹದ ಮೊದಲು ಬುಧವಾರ ವಿಶೇಷ ಪೂಜೆಯನ್ನು ಆಯೋಜಿಸಲಾಗಿದೆ. ಈ ಅದ್ದೂರಿ ಸಮಾರಂಭದಲ್ಲಿ ಕುಟುಂಬಸ್ಥರು ಮತ್ತು ಬಾಲಿವುಡ್ ಗಣ್ಯರು ಭಾಗವಹಿಸಿದ್ದರು. ಅತಿಥಿಗಳಲ್ಲಿ ಅನಂತ್ ಅವರ ಚಿಕ್ಕಪ್ಪ ಮತ್ತು ಖ್ಯಾತ ಉದ್ಯಮಿ ಅನಿಲ್ ಅಂಬಾನಿ ಅವರ ಪತ್ನಿ, ಮಾಜಿ ನಟ ಟೀನಾ ಅಂಬಾನಿ ಅವರೊಂದಿಗೆ ಇದ್ದರು.ಹಳದಿ ಬಣ್ಣದ ಕುರ್ತಾ ಮತ್ತು ಕಪ್ಪು ಪೈಜಾಮಾವನ್ನು ಧರಿಸಿರುವ ಸಲ್ಮಾನ್ ಖಾನ್ ಶೀಘ್ರದಲ್ಲೇ ವಿವಾಹವಾಗಲಿರುವ ದಂಪತಿಗಳಿಗೆ ತಮ್ಮ ಆಶೀರ್ವಾದವನ್ನು ನೀಡಲು ಶೈಲಿಯಲ್ಲಿ ಆಗಮಿಸಿದರು. ರಣವೀರ್ ಸಿಂಗ್, ಅನನ್ಯಾ ಪಾಂಡೆ ಮತ್ತು ಸಾರಾ ಅಲಿ ಖಾನ್ ಇನ್ನಿತರರು ಇದ್ದರು. ಗ್ರಹ ಶಾಂತಿ ಪೂಜೆ ಸಮಾರಂಭದಲ್ಲಿ ಅನಂತ್ ಮತ್ತು ರಾಧಿಕಾ ಭಾಗವಹಿಸಿದ್ದರು. ಗಾಯಕಿ ನಿಕಿತಾ ವಘೇಲಾ ಅವರು ಗ್ರಹ ಶಾಂತಿ ಮತ್ತು ಮಂಟಪ ಮುಹೂರ್ತ ಪೂಜೆಯ ಪ್ರಶಾಂತ ಕ್ಷಣಗಳನ್ನು ನಿರ್ಮಿಸಲಾಗಿತ್ತು. ಅಂದವಾದ ಆಭರಣಗಳಿಂದ ಅಲಂಕರಿಸಲ್ಪಟ್ಟ ಕೆನೆ ಮತ್ತು ಗೋಲ್ಡನ್ ಸೀರೆಯಲ್ಲಿ ರಾಧಿಕಾ ಅದ್ಭುತವಾಗಿ ಕಾಣುತ್ತಿದ್ದರೆ, ಅನಂತ್ ಅವರು ಚಿನ್ನದ ಜಾಕೆಟ್‌ನೊಂದಿಗೆ ಕೆಂಪು ಕುರ್ತಾವನ್ನು ಧರಿಸಿದ್ದರು. ವಿವಾಹ ಮಹೋತ್ಸವದ ಅಂಗವಾಗಿ, ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಇತ್ತೀಚೆಗೆ ಜುಲೈ 2 ರಂದು ಪಾಲ್ಘರ್‌ನ ಸ್ವಾಮಿ ವಿವೇಕಾನಂದ ವಿದ್ಯಾಮಂದಿರದಲ್ಲಿ ಹಿಂದುಳಿದವರಿಗಾಗಿ ಸಾಮೂಹಿಕ ವಿವಾಹವನ್ನು ಆಯೋಜಿಸಿದ್ದರು. ಸಾಂಪ್ರದಾಯಿಕ ಹಿಂದೂ ವೈದಿಕ ಪದ್ಧತಿಗಳಿಗೆ ಬದ್ಧವಾಗಿ ವಿವಾಹ ಮಹೋತ್ಸವಗಳನ್ನು ಆಯೋಜಿಸಲಾಗಿದೆ. ಮುಖ್ಯ ಸಮಾರಂಭಗಳು ಶುಕ್ರವಾರ, ಜುಲೈ 12 ರಂದು ಶುಭ ವಿವಾಹ ಅಥವಾ ವಿವಾಹ ಕಾರ್ಯದೊಂದಿಗೆ ಪ್ರಾರಂಭವಾಗಿ ಮತ್ತು ಸಾಂಪ್ರದಾಯಿಕ ಭಾರತೀಯ ಉಡುಗೆಯನ್ನು ಧರಿಸುವ ಮೂಲಕ ಅತಿಥಿಗಳು ಉತ್ಸಾಹವನ್ನು ತೋರ್ಪಡಿಸಿದರು. ಜುಲೈ 13 ರ ಶನಿವಾರದಂದು ಶುಭ್ ಆಶೀರ್ವಾದ್ ಅವರೊಂದಿಗೆ ಆಚರಣೆಗಳು ಮುಂದುವರಿಯುತ್ತವೆ. ಅಂತಿಮ ಕಾರ್ಯಕ್ರಮವಾದ ಮಂಗಲ್ ಉತ್ಸವ ಅಥವಾ ವಿವಾಹದ ಆರತಕ್ಷತೆಯನ್ನು ಜುಲೈ 14 ರಂದು ಭಾನುವಾರ ನಿಗದಿಪಡಿಸಲಾಗಿದೆ. ಈ ವರ್ಷದ ಆರಂಭದಲ್ಲಿ, ದಂಪತಿಗಳು ಜಾಮ್‌ನಗರದಲ್ಲಿ ಪೂರ್ವ-ವಿವಾಹದ ಹಬ್ಬಗಳ ಸರಣಿಯನ್ನು ಆಯೋಜಿಸಿದ್ದರು
zeenewskannada/data1_url7_1_to_200_13.txt ADDED
@@ -0,0 +1 @@
 
 
1
+ ಕೃಷಿ ಪ್ರಶಸ್ತಿ ಯೋಜನೆಯಡಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳ ಸ್ಪರ್ಧೆಗೆ ಅರ್ಜಿಗಳ ಆಹ್ವಾನ ಧಾರವಾಡ ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆ ಧಾರವಾಡ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಧಾರವಾಡ:ಧಾರವಾಡ ಜಿಲ್ಲೆಯ ಕೃಷಿ ವಲಯದಲ್ಲಿ ಉತ್ಪಾದಕತೆ ಹೆಚ್ಚಿಸಲು ಹಾಗೂ ರೈತರಲ್ಲಿ ಸ್ಪರ್ಧಾ ಮನೋಭಾವ ಬೆಳೆಸಲು ಕೃಷಿ ಇಲಾಖೆ ಧಾರವಾಡ 2024-25 ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯ, ಜಿಲ್ಲೆ, ತಾಲ್ಲೂಕು ಮಟ್ಟದಲ್ಲಿ ನಿಗದಿಪಡಿಸಿದ ವಿವಿಧ ಬೆಳೆಗಳಲ್ಲಿ ಬೆಳೆ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಕೃಷಿ ಪ್ರಶಸ್ತಿಯಡಿ ಮುಂಗಾರು ಹಂಗಾಮಿನ ಬೆಳೆ ಸ್ಪರ್ಧೆಗೆ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಕೃಷಿ ಇಲಾಖೆಯ ಕೆ-ಕಿಸಾನ ಫೋರ್ಟಲ್‍ನಲ್ಲಿ ಕೃಷಿ ಪ್ರಶಸ್ತಿಗೆ ಅರ್ಜಿ ನಮೂನೆಯನ್ನು ಅಳವಡಿಸಲಾಗಿದೆ.ಸಿಟಿಜನ್ ಲಾಗಿನ್ ಅಥವಾ ಆರ್‍ಎಸ್‍ಕೆ ಲಾಗಿನ್ ಮೂಲಕ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸೇವಾಕೇಂದ್ರ ಅಥವಾ ಸ್ವತಃ ಆಸಕ್ತ ರೈತ ಮತ್ತು ರೈತ ಮಹಿಳೆಯರು ಪ್ರತ್ಯೇಕವಾಗಿ ಸದರಿ ಪ್ರಶಸ್ತಿಗಳಿಗೆ ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಎಫ್‍ಐಡಿ ಅನ್ನು ಬಳಸಿಕೊಂಡು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸಕ್ತಿಯುಳ್ಳ ರೈತರು ಸೆಪ್ಟೆಂಬರ್ 10 ರೊಳಗಾಗಿ ಅರ್ಜಿ ಸಲ್ಲಿಸಬಹುದು.ಅರ್ಜಿ ಸಲ್ಲಿಸಲು ಯಾವುದೇ ಶುಲ್ಕ ಇರುವುದಿಲ್ಲ. ಬೆಳೆ ಕಟಾವು ಮಾಡುವ ವಿಧಾನ, ಸ್ಪರ್ಧಾತ್ಮಕ ಇಳುವರಿಯ ಮಾಹಿತಿ ಇತ್ಯಾದಿಗಳ ಬಗ್ಗೆ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ ಅಥವಾ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ. ಇದನ್ನೂ ಓದಿ: ರಾಜ್ಯ ಮಟ್ಟದ ಪ್ರಶಸ್ತಿಗೆ ಬೆಳೆ:ಮುಂಗಾರು ಹಂಗಾಮಿಗೆ ರಾಜ್ಯ ಮಟ್ಟಕ್ಕೆ ಭತ್ತ (ನೀರಾವರಿ), ಭತ್ತ (ಮಳೆ ಆಶ್ರಿತ), ರಾಗಿ (ಮಳೆ ಆಶ್ರಿತ), ಶೇಂಗಾ (ಮಳೆ ಆಶ್ರಿತ), ತೊಗರಿ (ಮಳೆ ಆಶ್ರಿತ), ಸೋಯಾ ಅವರೆ (ಮಳೆ ಆಶ್ರಿತ), ಮುಸುಕಿನ ಜೋಳ (ಮಳೆ ಆಶ್ರಿತ), ನವಣೆ (ಮಳೆ ಆಶ್ರಿತ), ಸಜ್ಜೆ (ಮಳೆ ಆಶ್ರಿತ) ಬೆಳೆ ನಿಗದಿಪಡಿಸಲಾಗಿದೆ. ಜಿಲ್ಲಾ ಮಟ್ಟದ ಪ್ರಶಸ್ತಿಗೆ ಬೆಳೆ: ಜಿಲ್ಲಾ ಮಟ್ಟದ ಸ್ಪರ್ಧೆಗೆ ಮುಸುಕಿನಜೋಳ (ಮಳೆ ಆಶ್ರಿತ) ಹಾಗೂ ತಾಲೂಕಾ ಮಟ್ಟದ ಸ್ಪರ್ಧೆಗೆ ಧಾರವಾಡ ಹಾಗೂ ಹುಬ್ಬಳ್ಳಿ ನಗರ ತಾಲೂಕಿಗೆ ಸೋಯಾಅವರೆ (ಮಳೆಆಶ್ರಿತ), ಹುಬ್ಬಳ್ಳಿ, ಕಲಘಟಗಿ, ಅಳ್ನಾವರ, ನವಲಗುಂದ ತಾಲೂಕಿಗೆ ಮುಸುಕಿನಜೋಳ (ಮಳೆಆಶ್ರಿತ) ಮತ್ತು ಅಣ್ಣಿಗೇರಿ, ಕುಂದಗೋಳ ತಾಲೂಕಿಗೆ ಶೇಂಗಾ (ಮಳೆಆಶ್ರಿತ) ಬೆಳೆ ನಿಗದಿಪಡಿಸಲಾಗಿದೆ. 2024-25 ನೇ ಸಾಲಿನಲ್ಲಿಯೂ ಸಹ ಕೃಷಿಯಲ್ಲಿ ರೈತ ಮಹಿಳೆಯರನ್ನು ಪ್ರೊತ್ಸಾಹಿಸುವ ಹಾಗೂ ಇತರೆ ಮಹಿಳೆಯರನ್ನು ಕೃಷಿಯತ್ತ ಆಕರ್ಷಿಸ��ು ಪ್ರತ್ಯೇಕವಾಗಿ ಮಹಿಳೆಯರಿಗೆ ಕೃಷಿ ಪ್ರಶಸ್ತಿಯನ್ನು ನೀಡಲು ಸರ್ಕಾರವು ಅನುಮೋದನೆ ನೀಡಿದೆ. ಆದ್ದರಿಂದ ಮಹಿಳೆಯರು ಸಹ ಪ್ರತ್ಯೇಕವಾಗಿ ಮಹಿಳಾ ವಿಭಾಗಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಆಸಕ್ತ ರೈತರು, ರೈತ ಮಹಿಳೆಯರು ಸೆಪ್ಟೆಂಬರ 10, 2024 ರೊಳಗಾಗಿ ಆನಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಾರ್ಯಾಲಯ, ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಿಬಹ್ಮದು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_130.txt ADDED
@@ -0,0 +1 @@
 
 
1
+ : ಭಾರತದ ಅತ್ಯಂತ ಚಿಕ್ಕ ರಾಜ್ಯ ಯಾವುದು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸಿಟ್ರಸ್ ಹಣ್ಣುಗಳಲ್ಲಿ ಯಾವ ಆಮ್ಲ ಕಂಡುಬರುತ್ತದೆ..? ಉತ್ತರ: ಸಿಟ್ರಿಕ್ ಆಮ್ಲ ಪ್ರಶ್ನೆ 2:ಅಶೋಕ ಚಕ್ರವರ್ತಿ ಯಾರ ಉತ್ತರಾಧಿಕಾರಿ..? ಉತ್ತರ: ಬಿಂದುಸಾರ ಪ್ರಶ್ನೆ 3:ಭಾರತೀಯ ಸಂವಿಧಾನವನ್ನು ಮೊದಲ ಬಾರಿಗೆ ಯಾವಾಗ ತಿದ್ದುಪಡಿ ಮಾಡಲಾಯಿತು..? ಉತ್ತರ: 1950 ಪ್ರಶ್ನೆ 4:ರೌಲತ್ ಕಾಯಿದೆಯನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು..? ಉತ್ತರ: 1919 ಪ್ರಶ್ನೆ 5:ಸಿಂಧೂ ಕಣಿವೆ ನಾಗರಿಕತೆಯ ಬಂದರು ಎಲ್ಲಿತ್ತು..? ಉತ್ತರ: ಲೋಥಲ್ ಇದನ್ನೂ ಓದಿ: ಪ್ರಶ್ನೆ 6:ಜೈನ ಧರ್ಮದಲ್ಲಿ ಮಹಾವೀರನನ್ನು ಏನೆಂದು ಪರಿಗಣಿಸಲಾಗಿದೆ..? ಉತ್ತರ: ಮೂಲ ಸಂಸ್ಥಾಪಕರು ಪ್ರಶ್ನೆ 7:ಇಸ್ರೋದ ಪ್ರಧಾನ ಕಛೇರಿ ಎಲ್ಲಿದೆ? ಉತ್ತರ: ಬೆಂಗಳೂರು ಪ್ರಶ್ನೆ 8:ಸಂಸತ್ತಿನಲ್ಲಿ ಯಾವ 2 ಸದನಗಳಿವೆ? ಉತ್ತರ: ಲೋಕಸಭೆ ಮತ್ತು ರಾಜ್ಯಸಭೆ ಪ್ರಶ್ನೆ 9:ಭಾರತದ ಅತ್ಯಂತ ಚಿಕ್ಕ ರಾಜ್ಯ ಯಾವುದು? ಉತ್ತರ: ಗೋವಾ ಪ್ರಶ್ನೆ 10:ಭಾರತದಲ್ಲಿ ಯಾವ ನಗರವನ್ನು ಬ್ಲೂ ಸಿಟಿ ಎಂದು ಕರೆಯಲಾಗುತ್ತದೆ? ಉತ್ತರ: ಜೋಧಪುರ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_131.txt ADDED
@@ -0,0 +1 @@
 
 
1
+ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಸ್ಪತ್ರೆಗೆ ದಾಖಲು ಮೊನ್ನೆ ಮೊನ್ನೆಯಷ್ಟೇ, ಬುಧವಾರ (ಜುಲೈ 10) ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ ರಾಜನಾಥ್ ಸಿಂಗ್ ( ), ಮೋದಿ ಕ್ಯಾಬಿನೆಟ್ ನಲ್ಲಿ 2014ರಿಂದಲೂ ಕೇಂದ್ರ ಸಚಿವರಾಗಿದ್ದಾರೆ. ನವ ದೆಹಲಿ :ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನ ನಿನ್ನೆ (ಗುರುವಾರ) ಬೆನ್ನು ನೋವಿನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ () ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಏಮ್ಸ್ ಆಸ್ಪತ್ರೆ ( ) ವತಿಯಿಂದ ಈ ಕುರಿತಂತೆ ಪತ್ರಿಕಾ ಹೇಳಿಕೆ ಹೊರಡಿಸಲಾಗಿದ್ದು( ) ಅವರ ಆರೋಗ್ಯ ಸ್ಥಿರವಾಗಿದ್ದು ಸದ್ಯ ವೈದ್ಯರು ಅವರ ಬೆನ್ನು ನೋವಿಗೆ ಚಿಕಿತ್ಸೆ ಮುಂದುವರೆಸಿದ್ದಾರೆ ಎಂದು ತಿಳಿಸಲಾಗಿದೆ. ಇದನ್ನೂ ಓದಿ- ಮೊನ್ನೆ ಮೊನ್ನೆಯಷ್ಟೇ, ಬುಧವಾರ (ಜುಲೈ 10) ತಮ್ಮ 73ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡ( ), ಮೋದಿ ಕ್ಯಾಬಿನೆಟ್ ನಲ್ಲಿ 2014ರಿಂದಲೂ ಕೇಂದ್ರ ಸಚಿವರಾಗಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲೂ ಲಕ್ನೋ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗುವ ಮೂಲಕ ಸತತ ಎರಡನೇ ಬಾರಿಗೆ ರಕ್ಷಣಾ ಸಚಿವರಾಗಿದ್ದಾರೆ. ಇದನ್ನೂ ಓದಿ- ರಾಜನಾಥ್ ಸಿಂಗ್ 1977-1980 ಮತ್ತು 2001-2003ರಲ್ಲಿ ಉತ್ತರ ಪ್ರದೇಶ ವಿಧಾನಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅವರು 1991 ರಿಂದ 1992 ರವರೆಗೆ ಉತ್ತರ ಪ್ರದೇಶ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದರು, 1999 ರಿಂದ 2000 ರವರೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಮೇಲ್ಮೈ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿದರು. ನಂತರ 2000-2002ರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. 2003ರಲ್ಲಿ ಕೇಂದ್ರ ಸಚಿವ ಸಂಪುಟದಲ್ಲಿ ಕೃಷಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. 2009 ರಲ್ಲಿ ಅವರು 15ನೇ ಲೋಕಸಭೆಗೆ ಆಯ್ಕೆಯಾದರು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_132.txt ADDED
@@ -0,0 +1 @@
 
 
1
+ ಅಗ್ನಿವೀರರಿಗೆ ಗುಡ್ ನ್ಯೂಸ್: ನಲ್ಲಿ ಶೇ 10% ಮೀಸಲಾತಿ ಘೋಷಣೆ ಕೆಲ ದಿನಗಳಿಂದ ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ಇದೇ ವೇಳೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೇಂದ್ರ ಪಡೆಗಳಲ್ಲಿ ಮಾಜಿ ಅಗ್ನಿಶಾಮಕ ಸಿಬ್ಬಂದಿಗೆ ಶೇ.10ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ.‘ಅಗ್ನಿಪಥ್’ ಯೋಜನೆಯಡಿ ಸೇನೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಯುವಕರಿಗೆ ಈ ಕ್ರಮದಿಂದ ಪರಿಹಾರ ದೊರೆಯಲಿದೆ. ನವದೆಹಲಿ:ಕೆಲ ದಿನಗಳಿಂದ ಅಗ್ನಿವೀರ್ ಯೋಜನೆಗೆ ಸಂಬಂಧಿಸಿದಂತೆ ದೇಶಾದ್ಯಂತ ಹಲವು ಚರ್ಚೆಗಳು ನಡೆಯುತ್ತಿವೆ. ಇದೇ ವೇಳೆ ಕೇಂದ್ರ ಸರಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಕೇಂದ್ರ ಪಡೆಗಳಲ್ಲಿ ಮಾಜಿ ಅಗ್ನಿಶಾಮಕ ಸಿಬ್ಬಂದಿಗೆ ಶೇ.10ರಷ್ಟು ಮೀಸಲಾತಿ ನೀಡುವುದಾಗಿ ಘೋಷಿಸಿದೆ.‘ಅಗ್ನಿಪಥ್’ ಯೋಜನೆಯಡಿ ಸೇನೆಯಲ್ಲಿ ನಾಲ್ಕು ವರ್ಷ ಸೇವೆ ಸಲ್ಲಿಸಿದ ಯುವಕರಿಗೆ ಈ ಕ್ರಮದಿಂದ ಪರಿಹಾರ ದೊರೆಯಲಿದೆ. ಇದನ್ನೂ ಓದಿ- ದೈಹಿಕವಾಗಿಯೂ ವಿನಾಯಿತಿ: ವಾಸ್ತವವಾಗಿ ಈ ಮೀಸಲಾತಿಯು ಕೇಂದ್ರೀಯ ಮೀಸಲು ಪೊಲೀಸ್ ಪಡೆ (), ಗಡಿ ಭದ್ರತಾ ಪಡೆ (), ಕೇಂದ್ರ ಕೈಗಾರಿಕಾ ಭದ್ರತಾ ಪಡೆ () ಮತ್ತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ () ಸೇರಿದಂತೆ ಎಲ್ಲಾ ಕೇಂದ್ರೀಯ ಪಡೆಗಳಲ್ಲಿ ಅನ್ವಯಿಸುತ್ತದೆ. ಅಲ್ಲದೆ, ದೈಹಿಕ ಪರೀಕ್ಷೆಗಳಲ್ಲಿ ಅವರಿಗೆ ವಿನಾಯಿತಿ ನೀಡಲಾಗುವುದು. ಕೇಂದ್ರೀಯ ಪಡೆಗಳಿಗೆ ಸೇರುವ ಅವಕಾಶ: ಈ ಯೋಜನೆಯಡಿಯಲ್ಲಿ, ಅಗ್ನಿಪಥ್ ಯೋಜನೆಯಡಿಯಲ್ಲಿ ಸೇವೆಯನ್ನು ಪೂರ್ಣಗೊಳಿಸಿದ ಮಾಜಿ ಸೈನಿಕರು ನೇಮಕಾತಿ ಮೂಲಕ ಕೇಂದ್ರ ಪಡೆಗಳಿಗೆ ಸೇರಲು ಅವಕಾಶವನ್ನು ಪಡೆಯುತ್ತಾರೆ.ಇದಕ್ಕಾಗಿ ಅವರು ದೈಹಿಕ ದಕ್ಷತೆ ಪರೀಕ್ಷೆ () ಮತ್ತು ಲಿಖಿತ ಪರೀಕ್ಷೆ () ಅಥವಾ ಇತರ ಅಗತ್ಯವಿರುವ ಸಾಮರ್ಥ್ಯಗಳನ್ನು ಪೂರ್ಣಗೊಳಿಸಬೇಕು. ಇದನ್ನೂ ಓದಿ- ನಿರ್ಧಾರದ ಬಗ್ಗೆ ಮಾಹಿತಿ ನೀಡಿದ ಸಿಐಎಸ್ಎಫ್ ಮಹಾನಿರ್ದೇಶಕ ನೀನಾ ಸಿಂಗ್, ಮಾಜಿ ಅಗ್ನಿಶಾಮಕ ದಳದ ಸಿಬ್ಬಂದಿಗೆ ದೈಹಿಕ ಮತ್ತು ನೇಮಕಾತಿಯಲ್ಲಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ಹೇಳಿದ್ದಾರೆ. ಅಗ್ನಿಶಾಮಕ ಸಿಬ್ಬಂದಿಗೆ ಮೊದಲ ವರ್ಷದಲ್ಲಿ ನೇಮಕಾತಿ ಸಮಯದಲ್ಲಿ ಐದು ವರ್ಷಗಳ ವಯೋಮಿತಿ ಸಡಿಲಿಕೆಯನ್ನು ನೀಡಲಾಗುತ್ತದೆ. ಇದರ ನಂತರ, ಮುಂದಿನ ವರ್ಷದ ನೇಮಕಾತಿ ಸಮಯದಲ್ಲಿ ಮೂರು ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ. ಈ ಮೂಲಕ ಸಿಐಎಸ್ಎಫ್ ಪೂರ್ವ ತರಬೇತಿ ಪಡೆದ ಸೇನಾ ಸಿಬ್ಬಂದಿಯನ್ನೂ ಪಡೆಯಲು ಸಾಧ್ಯವಾಗುತ್ತದೆ. ಗಡಿ ಭದ್ರತಾ ಪಡೆ ಬಿಎಸ್‌ಎಫ್‌ನ ಮಹಾನಿರ್ದೇಶಕ ನಿತಿನ್ ಅಗರ್ವಾಲ್ ಮಾತನಾಡಿ, ಅಗ್ನಿಶಾಮಕ ದಳದವರು ನಾಲ್ಕು ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಅವರು ಸಂಪೂರ್ಣ ಶಿಸ್ತುಬದ್ಧ ಮತ್ತು ತರಬೇತಿ ಪಡೆದ ಸಿಬ್ಬಂದಿ. ಇದು ಬಿಎಸ್‌ಎಫ್‌ಗೆ ತುಂಬಾ ಒಳ್ಳೆಯದು ಏಕೆಂದರೆ ನಾವು ತರಬೇತಿ ಪಡ��ದ ಸೈನಿಕರನ್ನು ಪಡೆಯುತ್ತಿದ್ದೇವೆ. ಅಂತಹ ಪರಿಸ್ಥಿತಿಯಲ್ಲಿ, ಸಂಕ್ಷಿಪ್ತ ತರಬೇತಿಯ ನಂತರ, ಅವರನ್ನು ಗಡಿಯಲ್ಲಿ ನಿಯೋಜಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_133.txt ADDED
@@ -0,0 +1 @@
 
 
1
+ ಒಂದು ವರ್ಷದಲ್ಲಿ ಭಾರತದ ಪೌರತ್ವ ತ್ಯಜಿಸಿದವರ ಸಂಖ್ಯೆ ದ್ವಿಗುಣ! ವಿದೇಶವನ್ನೇ ಇಷ್ಟಪಡ್ತಿರೋದೇಕೆ ಭಾರತೀಯರು? : ಮಾಧ್ಯಮ ವರದಿಗಳ ಪ್ರಕಾರ ಗುಜರಾತ್ ಯುವಜನತೆ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ತಮ್ಮ ವೃತ್ತಿಯನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. :ಗುಜರಾತಿಗಳು ಭಾರತೀಯ ಪಾಸ್‌ಪೋರ್ಟ್ ತೊರೆಯುವ ಪ್ರವೃತ್ತಿ ಹೆಚ್ಚುತ್ತಿದೆ. 2021 ರಿಂದ ಇಲ್ಲಿಯವರೆಗೆ, 1187 ಗುಜರಾತಿಗಳು ಭಾರತೀಯ ಪೌರತ್ವವನ್ನು ತ್ಯಜಿಸಿ ಇತರ ದೇಶಗಳಲ್ಲಿ ನೆಲೆಸಿದ್ದಾರೆ. ಗುಜರಾತಿಗಳಿಗೆ ಕೆನಡಾ ಮೊದಲ ಆಯ್ಕೆಯಾಗುತ್ತಿದೆ ಎಂಬುದು ವರದಿಗಳಲ್ಲಿ ಬಹಿರಂಗವಾಗಿದೆ. ಇದನ್ನೂ ಓದಿ: ಮಾಧ್ಯಮ ವರದಿಗಳ ಪ್ರಕಾರಯುವಜನತೆ ಅಧ್ಯಯನಕ್ಕಾಗಿ ಕೆನಡಾಕ್ಕೆ ಹೋಗುತ್ತಿದ್ದಾರೆ. ವಿದ್ಯಾಭ್ಯಾಸ ಮುಗಿದ ನಂತರ ತಮ್ಮ ವೃತ್ತಿಯನ್ನು ಹೊಂದಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ. ಕೆನಡಾದ ಪೌರತ್ವ ಪಡೆದ ನಂತರ ಅವರು ಭಾರತೀಯ ಪೌರತ್ವವನ್ನು ತ್ಯಜಿಸಿ ಅಲ್ಲಿಯೇ ನೆಲೆಸುತ್ತಿದ್ದಾರೆ. ಜನವರಿ 2021 ರಿಂದ 1187 ಗುಜರಾತಿಗಳು ತಮ್ಮ ಭಾರತೀಯ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ವರದಿಗಳು ಹೇಳಿವೆ. ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯ ಮಾಹಿತಿಯ ಪ್ರಕಾರ, 2023 ರಲ್ಲಿ 485 ಪಾಸ್‌ಪೋರ್ಟ್‌ಗಳನ್ನು ಸರೆಂಡರ್ ಮಾಡಲಾಗಿದೆ, ಇದು 2022 ಕ್ಕಿಂತ ದ್ವಿಗುಣ. ಇವರಲ್ಲಿ ಹೆಚ್ಚಿನವರು 30 ರಿಂದ 45 ರ ವಯೋಮಾನದವರು. ಇವರೆಲ್ಲಾ ಅಮೆರಿಕ, ಬ್ರಿಟನ್, ಕೆನಡಾ ಮತ್ತು ಆಸ್ಟ್ರೇಲಿಯಾದಂತಹ ದೇಶಗಳಲ್ಲಿ ವಾಸಿಸುತ್ತಿದ್ದಾರೆ. ಅಖಿಲ ಭಾರತ ಅಂಕಿಅಂಶಗಳನ್ನು ನೋಡುವುದಾದರೆ, 2014 ಮತ್ತು 2022ರ ನಡುವೆ 22,300 ಗುಜರಾತಿಗಳು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಈ ಸಂಖ್ಯೆ ದೆಹಲಿ (60,414) ಮತ್ತು ಪಂಜಾಬ್ (28,117) ನಂತರ ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಕೋವಿಡ್ ನಂತರ ಪಾಸ್‌ಪೋರ್ಟ್ ಸರೆಂಡರ್’ನಲ್ಲಿ ಏರಿಕೆಯಾಗಿದೆ. ಇದಕ್ಕೆ ಒಂದು ಕಾರಣವೆಂದರೆ ರಾಯಭಾರ ಕಚೇರಿಗಳನ್ನು ಪುನರಾರಂಭಿಸುವುದು ಮತ್ತು ಪೌರತ್ವ ಪ್ರಕ್ರಿಯೆಗಳನ್ನು ಪ್ರಾರಂಭಿಸುವುದು. ವಿದೇಶಕ್ಕೆ ಹೋಗುವ ಹೆಚ್ಚಿನ ಯುವಕರು ಓದಲು ಹೋಗಿ ಅಲ್ಲಿಯೇ ನೆಲೆಸುತ್ತಿದ್ದಾರೆ. ಇದಲ್ಲದೇ, ಜನರು ಉತ್ತಮ ಜೀವನಕ್ಕಾಗಿ ವಿದೇಶಗಳಿಗೆ ಹೋಗುತ್ತಿದ್ದಾರೆ. ಉತ್ತಮ ಮೂಲಸೌಕರ್ಯ ಮತ್ತು ಜೀವನಶೈಲಿಗಾಗಿ ಉದ್ಯಮಿಗಳು ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ಹೂಡಿಕೆದಾರರ ವೀಸಾ ಸಲಹೆಗಾರ ಲಲಿತ್ ಅಡ್ವಾಣಿ ಹೇಳುತ್ತಾರೆ. ಭಾರತದಲ್ಲಿ ಉತ್ತಮ ಜೀವನಮಟ್ಟ ಹೊಂದಿರುವವರು ಕೂಡ ಮಾಲಿನ್ಯ, ಹದಗೆಟ್ಟ ರಸ್ತೆಗಳಂತಹ ಸಮಸ್ಯೆಗಳಿಂದ ವಿದೇಶಕ್ಕೆ ಹೋಗುವ ಯೋಚನೆಯಲ್ಲಿದ್ದಾರೆ. ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಪಾಸ್‌ಪೋರ್ಟ್ ಸರೆಂಡರ್ ಸಂಖ್ಯೆ ಇನ್ನಷ್ಟು ಹೆಚ್ಚಾಗಬಹುದು ಎಂದು ಸಂಬಂಧಪಟ್ಟ ಅಧಿಕಾರಿ ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_134.txt ADDED
@@ -0,0 +1 @@
 
 
1
+ : ಪೇಪರ್ ಲೀಕ್ ಕಿಂಗ್ ಪಿನ್ ರಾಕೇಶ್ ರಂಜನ್ ಸಿಬಿಐ ವಶಕ್ಕೆ ರಾಕೇಶ್‌ನನ್ನು ಹಿಡಿಯಲು ಸಿಬಿಐ ಅತ್ಯಾಧುನಿಕ ತಂತ್ರಜ್ಞಾನ ಬಳಸಿದೆ. ರಾಕೇಶ್ ರಂಜನ್ ಅವರ ಹುಡುಕಾಟದಲ್ಲಿ, ಪಾಟ್ನಾ, ಕೋಲ್ಕತ್ತಾ ಮತ್ತು ಪಾಟ್ನಾ ಸುತ್ತಮುತ್ತಲಿನ ಇನ್ನೂ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ನವದೆಹಲಿ:ನೀಟ್ ಪೇಪರ್ ಸೋರಿಕೆ ಪ್ರಕರಣದಲ್ಲಿ ಸಿಬಿಐ ಕಿಂಗ್ ಪಿನ್ ರಾಕೇಶ್ ರಂಜನ್ ಅಲಿಯಾಸ್ ರಾಕಿಯನ್ನು ಪಾಟ್ನಾದಿಂದ ಬಂಧಿಸಿದೆ. ರಾಕೇಶ್‌ನನ್ನು ಹಿಡಿಯಲು ಸಿಬಿಐ ಅತ್ಯಾಧುನಿಕ ತಂತ್ರಜ್ಞಾನ ಬಳಸಿದೆ. ರಾಕೇಶ್ ರಂಜನ್ ಅವರ ಹುಡುಕಾಟದಲ್ಲಿ, ಪಾಟ್ನಾ, ಕೋಲ್ಕತ್ತಾ ಮತ್ತು ಪಾಟ್ನಾ ಸುತ್ತಮುತ್ತಲಿನ ಇನ್ನೂ ಎರಡು ಸ್ಥಳಗಳಲ್ಲಿ ದಾಳಿ ನಡೆಸಲಾಯಿತು. ರಾಕೇಶ್ ತನ್ನ ಪತ್ನಿಯ ಮೇಲ್ ಐಡಿಯಿಂದ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಈಗ ಅದೇ ಐಪಿ ವಿಳಾಸವನ್ನು ಪತ್ತೆಹಚ್ಚಿದಅವರನ್ನು ತಲುಪಿತು. ಆರೋಪಿ ರಾಕೇಶ್ ರಂಜನ್ ನನ್ನು ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 10 ದಿನಗಳ ಕಾಲ ವಶಕ್ಕೆ ಪಡೆದಿದೆ. ರಾಕೇಶ್ ರಂಜನ್ ಅಲಿಯಾಸ್ ರಾಕಿ ನೇಪಾಳಕ್ಕೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದ ಎಂದು ಹೇಳಲಾಗುತ್ತಿದೆ, ಆದರೆ ಸಿಬಿಐ ಅವರನ್ನು ಸರಿಯಾದ ಸಮಯಕ್ಕೆ ವಶಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ರಾಕಿ ಮುಖ್ಯವಾಗಿ ಬಿಹಾರದ ನವಾಡ ನಿವಾಸಿಯಾಗಿದ್ದು, ಆತನ ಹೆಸರು ರಾಕೇಶ್. ಕೆಲವು ವರ್ಷಗಳಿಂದ ಅವರು ರಾಂಚಿಯಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದಾರೆ. ಚಿಂಟು, ಮುಖೇಶ್, ಮನೀಶ್ ಮತ್ತು ಅಶುತೋಷ್ ಅವರನ್ನು ವಿಚಾರಣೆ ನಡೆಸಿದಾಗ ಸಿಬಿಐ ರಾಕೇಶ್ ಬಗ್ಗೆ ಸುಳಿವು ಸಿಕ್ಕಿದೆ. ಪೇಪರ್ ಲೀಕ್ ಆದ ನಂತರ ರಾಕಿ ಪ್ರಶ್ನೆಗಳನ್ನು ಬಿಡಿಸಿ ಚಿಂಟು ಮೊಬೈಲ್ ಗೆ ಕಳುಹಿಸಿದ್ದ ಎನ್ನಲಾಗಿದೆ. ರಾಕೇಶ್ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಚಿಂಟು ಅವರಿಂದ ಹೊರತೆಗೆಯಲಾಗುತ್ತಿದೆ. ಸಂಜೀವ್ ಮುಖಿಯ ಬಗ್ಗೆಯೂ ಚಿಂಟು ಅವರಿಂದ ಮಾಹಿತಿ ಪಡೆಯಲಾಗುತ್ತಿದೆ, ಏಕೆಂದರೆ ಅವರು ಸಂಜೀವ್ ಅವರ ಸೊಸೆಯ ಪತಿಯಾಗಿದ್ದಾರೆ. ಸಂಜೀವ್ ಮುಖಿಯಾ ನೇಪಾಳಕ್ಕೆ ಪಲಾಯನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇತರ ಆರೋಪಿಗಳಾದ ಮನೀಶ್ ಮತ್ತು ಅಶುತೋಷ್ ಅವರು 35 ವಿದ್ಯಾರ್ಥಿಗಳಿಗೆ ಪತ್ರಿಕೆಯನ್ನು ಕಂಠಪಾಠ ಮಾಡಲು ವ್ಯವಸ್ಥೆ ಮಾಡಿದ್ದರು. ಚಿಂಟು ಸೂಚನೆ ಮೇರೆಗೆ ಮನೀಶ್ ಮತ್ತು ಅಶುತೋಷ್ ಈ ಕೃತ್ಯ ಎಸಗಿದ್ದಾರೋ ಅಥವಾ ಬೇರೆಯವರೂ ಮಾರ್ಗದರ್ಶನ ಮಾಡುತ್ತಿದ್ದಾರಾ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಯುತ್ತಿದೆ. ಇದನ್ನೂ ಓದಿ- ಮನೀಶ್ ಮತ್ತು ಅಶುತೋಷ್ ಅವರು ಜೂನ್ 4 ಮತ್ತು 5 ರಂದು ಪಾಟ್ನಾದ ಪ್ಲೇ ಲರ್ನ್ ಸ್ಕೂಲ್‌ನಲ್ಲಿ ಅಭ್ಯರ್ಥಿಗಳನ್ನು ಹೋಸ್ಟ್ ಮಾಡಿದ್ದಾರೆ ಎಂಬ ಆರೋಪವೂ ಇದೆ. ಈ ಶಾಲೆಯಲ್ಲಿ, ಅಭ್ಯರ್ಥಿಗಳು ಸೋರಿಕೆಯಾದ ಪ್ರಶ್ನೆಗಳಿಗೆ ಉತ್ತರಗಳನ್ನು ನೆನಪಿಟ್ಟುಕೊಳ್ಳುವಂತೆ ಮಾಡಲಾಯಿತು. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_135.txt ADDED
@@ -0,0 +1 @@
 
 
1
+ - 2024 ರ ಪರೀಕ್ಷೆಯಲ್ಲಿ ಯಾವುದೇ ಸಾಮೂಹಿಕ ನಕಲು ಇಲ್ಲ: ಕೇಂದ್ರ ಸರ್ಕಾರ ನೀಟ್‌-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಗೆ ಮುನ್ನಾ ದಿನವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ಸಲ್ಲಿಕೆಯಲ್ಲಿ, ಯಾವುದೇ ಸಾಮೂಹಿಕ ಅವ್ಯವಹಾರದ ಯಾವುದೇ ಸೂಚನೆಯಿಲ್ಲ ಎಂದು ಕೇಂದ್ರವು ಬುಧವಾರ ಹೇಳಿದೆ. ನವದೆಹಲಿ:ನೀಟ್‌-ಯುಜಿ ಪರೀಕ್ಷೆಯಲ್ಲಿನ ಅಕ್ರಮಗಳ ಕುರಿತು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಹಲವು ಅರ್ಜಿಗಳ ವಿಚಾರಣೆಗೆ ಮುನ್ನಾ ದಿನವೇ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತನ್ನ ಸಲ್ಲಿಕೆಯಲ್ಲಿ, ಯಾವುದೇ ಸಾಮೂಹಿಕ ಅವ್ಯವಹಾರದ ಯಾವುದೇ ಸೂಚನೆಯಿಲ್ಲ ಎಂದು ಕೇಂದ್ರವು ಬುಧವಾರ ಹೇಳಿದೆ. ಇದನ್ನೂ ಓದಿ- ಗೆ ಸಲ್ಲಿಸಿರುವ ಹೆಚ್ಚುವರಿ ಅಫಿಡವಿಟ್‌ನಲ್ಲಿ, 2024-25ರ ಶೈಕ್ಷಣಿಕ ವರ್ಷಕ್ಕೆ, ಪದವಿಪೂರ್ವ ಸೀಟುಗಳ ಕೌನ್ಸೆಲಿಂಗ್ ಪ್ರಕ್ರಿಯೆಯನ್ನು ಜುಲೈ ಮೂರನೇ ವಾರದಿಂದ ನಾಲ್ಕು ಸುತ್ತುಗಳಲ್ಲಿ ನಡೆಸಲಾಗುವುದು ಎಂದು ಕೇಂದ್ರವು ಪ್ರಕಟಿಸಿದೆ.ಈ ವಿಶ್ಲೇಷಣೆಯು ಅಂಕಗಳ ವಿತರಣೆಯು ಸಾಕಷ್ಟು ಸಾಮಾನ್ಯವಾಗಿದೆ ಎಂದು ಸೂಚಿಸುತ್ತದೆ ಮತ್ತು ಯಾವುದೇ ಬಾಹ್ಯ ಅಂಶಗಳಿಲ್ಲ ಎಂದು ತೋರುತ್ತದೆ, ಇದು ಅಂಕಗಳ ವಿತರಣೆಯ ಮೇಲೆ ಪ್ರಭಾವ ಬೀರುತ್ತದೆ" ಎಂದು ಎನ್ಟಿಎ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಇದನ್ನೂ ಓದಿ- ವಿವಾದಿತ ನೀಟ್-ಯುಜಿ 2024ರ ವೈದ್ಯಕೀಯ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠವು ಗುರುವಾರ ವಿಚಾರಣೆ ನಡೆಸಲಿದೆ.ಈ ಮನವಿಯು ಮೇ 5 ರ ಪರೀಕ್ಷೆಯಲ್ಲಿ ಅಕ್ರಮಗಳು ಮತ್ತು ಅವ್ಯವಹಾರಗಳ ಆರೋಪಗಳನ್ನು ಒಳಗೊಂಡಿದೆ ಮತ್ತು ಅದನ್ನು ಹೊಸದಾಗಿ ನಡೆಸಲು ನಿರ್ದೇಶನವನ್ನು ಕೋರಿದೆ. ಬುಧವಾರ ಸಲ್ಲಿಸಿದ ಹೆಚ್ಚುವರಿ ಅಫಿಡವಿಟ್‌ನಲ್ಲಿ, ಸುಪ್ರೀಂ ಕೋರ್ಟ್‌ನ ನಿರ್ದೇಶನದ ಅಡಿಯಲ್ಲಿ ಶಿಕ್ಷಣ ಸಚಿವಾಲಯವು - 2024 ರಲ್ಲಿ ಭಾಗವಹಿಸಿದ ಅಭ್ಯರ್ಥಿಗಳ ಫಲಿತಾಂಶಗಳ ಸಂಪೂರ್ಣ ಡೇಟಾ ವಿಶ್ಲೇಷಣೆಯನ್ನು ನಡೆಸುವಂತೆ ಐಐಟಿ ಮದ್ರಾಸ್‌ನ ನಿರ್ದೇಶಕರಿಗೆ ವಿನಂತಿಸಿದೆ ಎಂದು ಹೇಳಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_136.txt ADDED
@@ -0,0 +1 @@
 
 
1
+ : ಯಾವ ದೇಶವು ವಿಶ್ವದಲ್ಲಿ ಅತಿಹೆಚ್ಚು ಸಾಕ್ಷರತೆಯನ್ನು ಹೊಂದಿದೆ? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಸಾಪೇಕ್ಷತಾ ಸಿದ್ಧಾಂತವನ್ನು ಕಂಡುಹಿಡಿದವರು ಯಾರು? ಉತ್ತರ: ಆಲ್ಬರ್ ಐನ್ಸ್ಟೈನ್ ಪ್ರಶ್ನೆ 2:ʼಹಿಂದ್ ಸ್ವರಾಜ್ʼ ಕೃತಿಯನ್ನು ರಚಿಸಿದವರು ಯಾರು? ಉತ್ತರ: ಮಹಾತ್ಮ ಗಾಂಧಿ ಪ್ರಶ್ನೆ 3: ವಿಶ್ವಪ್ರಸಿದ್ಧ ವರ್ಣಚಿತ್ರ ʼಮೋನಾಲಿಸಾʼವನ್ನು ಚಿತ್ರಿಸಿದವರು ಯಾರು? ಉತ್ತರ: ಲಿಯೊನಾರ್ಡೊ ಡಾ ವಿನ್ಸಿ ಪ್ರಶ್ನೆ 4:ಯಾವ ದೇಶವನ್ನು ಉದಯಿಸುವ ಸೂರ್ಯನ ನಾಡು ಎಂದು ಕರೆಯಲಾಗುತ್ತದೆ? ಉತ್ತರ: ಜಪಾನ್ ಪ್ರಶ್ನೆ 5:ಯಾವ ವರ್ಷದಲ್ಲಿ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದುಕೊಂಡಿತು? ಉತ್ತರ: 1947 ಇದನ್ನೂ ಓದಿ: ಪ್ರಶ್ನೆ 6:ಪ್ರಪಂಚದಲ್ಲಿ ಯಾವ ನದಿಯು ಅತಿ ಉದ್ದವಾಗಿದೆ? ಉತ್ತರ: ನೈಲ್ ಪ್ರಶ್ನೆ 7:ಮಾನವ ದೇಹದಲ್ಲಿ ಎಷ್ಟು ಮೂಳೆಗಳಿವೆ? ಉತ್ತರ: 206 ಪ್ರಶ್ನೆ 8:ವಿಶ್ವಪ್ರಸಿದ್ಧ 'ಹ್ಯಾಮ್ಲೆಟ್' ನಾಟಕವನ್ನು ಬರೆದವರು ಯಾರು? ಉತ್ತರ: ವಿಲಿಯಂ ಶೇಕ್‌ಸ್ಪಿಯರ್ ಪ್ರಶ್ನೆ 9:ಕಂಪ್ಯೂಟರ್‌ನ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಚಾರ್ಲ್ಸ್ ಬ್ಯಾಬೇಜ್ ಪ್ರಶ್ನೆ 10:ಯಾವ ದೇಶವು ವಿಶ್ವದಲ್ಲಿ ಅತಿಹೆಚ್ಚು ಸಾಕ್ಷರತೆಯನ್ನು ಹೊಂದಿದೆ? ಉತ್ತರ: ಫಿನ್ಲ್ಯಾಂಡ್ ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_137.txt ADDED
@@ -0,0 +1 @@
 
 
1
+ ಬದಲಾಗುವುದು 3 ಮತ್ತು 6 ನೇ ತರಗತಿ ಪಠ್ಯಪುಸ್ತಕ ! ಪಠ್ಯಕ್ರಮ ಗೊಂದಲಕ್ಕೆ ಸ್ಪಷ್ಟನೆ ನೀಡಿದ 2024-25ರ ಶೈಕ್ಷಣಿಕ ವರ್ಷಕ್ಕೆ ತನ್ನ ಪಠ್ಯಕ್ರಮದ ಮಾರ್ಗಸೂಚಿಗಳನ್ನು ಸ್ಪಷ್ಟಪಡಿಸಿದೆ. 3 ಮತ್ತು 6 ನೇ ತರಗತಿಗಳನ್ನು ಹೊರತುಪಡಿಸಿ ಬೇರೆ ತರಗತಿಗಳ ಪಠ್ಯಪುಸ್ತಕಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ ಎಂದು ಹೇಳಿದೆ. ಬೆಂಗಳೂರು :ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ () 2024-25ರ ಶೈಕ್ಷಣಿಕ ವರ್ಷದ ಪಠ್ಯಕ್ರಮದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದೆ. 3 ಮತ್ತು 6 ನೇ ತರಗತಿ ಹೊರತುಪಡಿಸಿ ಎಲ್ಲಾ ತರಗತಿಗಳಿಗೆ ಹಿಂದಿನ ವರ್ಷದ ಪಠ್ಯಪುಸ್ತಕಗಳನ್ನೇ ಬಳಸುವುದನ್ನು ಮುಂದುವರಿಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಇತ್ತೀಚಿನ ವರದಿ ಪ್ರಕಾರ,ಪಠ್ಯಕ್ರಮದ ಮಾರ್ಗಸೂಚಿಗಳನ್ನು ಅನುಸರಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿದೆ. ಇದರಲ್ಲಿ ಶೈಕ್ಷಣಿಕ ವಿಷಯ, ಪರೀಕ್ಷೆಯ ಪಠ್ಯಕ್ರಮಗಳು,ಕಲಿಕೆಯ ಫಲಿತಾಂಶಗಳು, ಶಿಕ್ಷಣ ಅಭ್ಯಾಸಗಳು ಮತ್ತು ಮೌಲ್ಯಮಾಪನ ಮಾರ್ಗಸೂಚಿಗಳು ಸೇರಿವೆ. ಇದನ್ನೂ ಓದಿ : ಶಾಲಾ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟನ್ನು ಅಳವಡಿಸಿಕೊಳ್ಳುವುದರೊಂದಿಗೆ (--2023), ಶಾಲೆಗಳು ತಮ್ಮ ಅಭ್ಯಾಸಗಳನ್ನು ಹೊಸ ಚೌಕಟ್ಟಿನ ಶಿಫಾರಸುಗಳೊಂದಿಗೆ ಜೋಡಿಸಲು ಸೂಚಿಸಲಾಗಿದೆ. ಇದು ವಿಷಯ, ಶಿಕ್ಷಣ ತಂತ್ರಗಳು,ಮೌಲ್ಯಮಾಪನ ವಿಧಾನಗಳು ಮತ್ತು ಮಂಡಳಿಯಿಂದ ತಿಳಿಸಲಾದ ಇತರ ಸಂಬಂಧಿತ ಕ್ಷೇತ್ರಗಳ ಮೇಲಿನ ಮಾರ್ಗಸೂಚಿಗಳನ್ನು ಒಳಗೊಂಡಿದೆ. 3 ಮತ್ತು 6 ನೇ ತರಗತಿಗಳಿಗೆ ಹೊಸ ಪಠ್ಯಕ್ರಮಗಳು ಮತ್ತು ಪಠ್ಯಪುಸ್ತಕಗಳು ಪ್ರಸ್ತುತ ಅಭಿವೃದ್ಧಿ ಹಂತದಲ್ಲಿದ್ದು,ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದುಮಾಹಿತಿ ನೀಡಿದೆ. ಇದನ್ನೂ ಓದಿ : ಮುಂಬರುವ ಶೈಕ್ಷಣಿಕ ವರ್ಷಕ್ಕೆ ಈ ಹೊಸ ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಬಳಸಲು ಶಾಲೆಗಳಿಗೆ ಸೂಚಿಸಲಾಗಿದೆ.ಹೆಚ್ಚುವರಿಯಾಗಿ, 6 ನೇ ತರಗತಿಗೆ ಬ್ರಿಡ್ಜ್ ಕೋರ್ಸ್ ಅನ್ನು ಅಭಿವೃದ್ಧಿಪಡಿಸುತ್ತಿದೆ. --2023 ನೊಂದಿಗೆ ಜೋಡಿಸಲಾದ ಹೊಸ ಶಿಕ್ಷಣ ಅಭ್ಯಾಸಗಳು ಮತ್ತು ಅಧ್ಯಯನದ ಕ್ಷೇತ್ರಗಳಿಗೆ ಪರಿವರ್ತನೆಯನ್ನು ಸುಲಭಗೊಳಿಸಲು 3 ನೇ ತರಗತಿಗೆ ಸಂಕ್ಷಿಪ್ತ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುತ್ತಿದೆ. ಈ ಸಂಪನ್ಮೂಲಗಳನ್ನು ಎನ್‌ಸಿಇಆರ್‌ಟಿಯಿಂದ ಸ್ವೀಕರಿಸಿದ ನಂತರ ಆನ್‌ಲೈನ್‌ನಲ್ಲಿ ಶಾಲೆಗಳಿಗೆ ಒದಗಿಸಲಾಗುತ್ತದೆ.ರಾಷ್ಟ್ರೀಯ ಶಿಕ್ಷಣ ನೀತಿ 2020 (-2020) ನಲ್ಲಿ ಕಲ್ಪಿಸಲಾಗಿರುವ ಹೊಸ ಬೋಧನಾ-ಕಲಿಕೆಯ ದೃಷ್ಟಿಕೋನಗಳೊಂದಿಗೆ ಅವರನ್ನು ಪರಿಚಿತಗೊಳಿಸಲು ಶಾಲಾ ಮುಖ್ಯಸ್ಥರು ಮತ್ತು ಶಿಕ್ಷಕರಿಗೆ ಸಾಮರ್ಥ್ಯ-ವರ್ಧನೆಯ ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗ��ನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_138.txt ADDED
@@ -0,0 +1 @@
 
 
1
+ ಅನಂತ್ ಅಂಬಾನಿ - ರಾಧಿಕಾ ಮದುವೆ : ಮುಂಬೈ ಹೋಟೆಲ್‌ಗಳಿಗೆ ಭಾರೀ ಬೇಡಿಕೆ!! ಈ ಹೋಟೆಲ್ ಗಳ ದರ ಹೆಚ್ಚಳ.. : ಅನಂತ ಅಂಬಾನಿ ಮದುವೆ ಇದೇ ತಿಂಗಳ 12ರಂದು ಮುಂಬೈ ನಲ್ಲಿ ನಡೆಯಲಿದ್ದು, ಮುಂಬೈ ನಲ್ಲಿರುವ ಹೋಟೆಲ್ ಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದ್ದು ಹೋಟೆಲ್ ಗಳು ದರವನ್ನು ಹೆಚ್ಚಿಸಿವೆ. : ಅಂಬಾನಿ ಮನೆಯಲ್ಲಿ ನಡೆಯಲಿರುವ ಮದುವೆಗೆ ಸೆಲೆಬ್ರಿಟಿಗಳು ಮುಂಬೈಗೆ ಬರುತ್ತಿರುವ ಹಿನ್ನೆಲೆ ಅವರಿಗೆ ಉಳಿದುಕೊಳ್ಳಲು ಸ್ಟಾರ್ ಹೋಟೆಲ್‌ಗಳು ಬೇಕು, ಇದರಿಂದ ಇದನ್ನರಿತ ಮುಂಬೈನ ಹೋಟೆಲ್‌ಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ ಮತ್ತು ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಎರಡು ಪ್ರಮುಖ ಹೋಟೆಲ್‌ಗಳು ದರವನ್ನು ಹೆಚ್ಚಿಸಿವೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ, ಬಿಲಿಯನೇರ್ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ಜೂನ್ 12 ರಂದು ವಿವಾಹವಾಗಲಿದ್ದಾರೆ. ಈ ಮದುವೆ ಸಮಾರಂಭಗಳು ಸತತ ಮೂರ್ನಾಲ್ಕು ದಿನಗಳ ಕಾಲ ನಡೆಯುತ್ತವೆ. ಮದುವೆಗೆ ಹಲವು ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ. ಅವರಿಗೆ ಉಳಿದುಕೊಳ್ಳಲು ಸ್ಟಾರ್ ಹೋಟೆಲ್‌ಗಳು ಬೇಕಾದ್ದರಿಂದ ಮುಂಬೈನ ಹೋಟೆಲ್‌ಗಳಿಗೆ ಭಾರಿ ಬೇಡಿಕೆ ಹೆಚ್ಚಾಗಿದೆ ಇದನ್ನು ಓದಿ : ಜುಲೈ 10 ರಿಂದ 15 ರವರೆಗೆ ಇಲ್ಲಿನ ಹೋಟೆಲ್ ಬೆಲೆಗಳು ಗಗನಕ್ಕೇರಿವೆ. ಸಾಮಾನ್ಯವಾಗಿ ಇಲ್ಲಿ ಒಂದು ರಾತ್ರಿ ಹೋಟೆಲ್ ಬಾಡಿಗೆ ರೂ. 13,000. ಆದರೆ ಈ ಹೋಟೆಲ್‌ಗಳು ಅಂಬಾನಿ ಮದುವೆಯ ದಿನಾಂಕದಂದು ರಾತ್ರಿಗೆ 91,350 ರೂ ಏರಿಸಿವೆ. ಪ್ರಯಾಣ ಮತ್ತು ಹೋಟೆಲ್ ವೆಬ್‌ಸೈಟ್‌ಗಳ ಪ್ರಕಾರ, ಟ್ರೈಡೆಂಟ್ ನಲ್ಲಿ ಕೊಠಡಿ ದರಗಳು ಹೆಚ್ಚು ಬದಲಾಗುತ್ತವೆ. 10,000, ಬಾಡಿಗೆ ಜೂನ್ 15 ರ ಹೊತ್ತಿಗೆ 17,000 ತಲುಪಿತು. ದರಗಳು ಜುಲೈ 9 ರಂದು ರೂ 13,000 ರಿಂದ ಜುಲೈ 14 ರಂದು ರೂ 91,350 ಕ್ಕೆ ಏರಿಕೆಯಾಗಿದೆ. ಇತರ ಪಂಚತಾರಾ ಹೋಟೆಲ್‌ಗಳಾದ ಗ್ರ್ಯಾಂಡ್ ಹಯಾಟ್, ತಾಜ್ ಸಾಂತಾಕ್ರೂಜ್, ತಾಜ್ ಬಾಂದ್ರಾ ಮತ್ತು ಸೇಂಟ್ ರೆಜಿಸ್ ಕೂಡ ದರವನ್ನು ಹೆಚ್ಚಿಸಿವೆ. ಹೈ-ಪ್ರೊಫೈಲ್ ಮದುವೆ ಮತ್ತು ಸಮಾರಂಭಗಳಲ್ಲಿ ಹೋಟೆಲ್‌ಗಳು ದರವನ್ನು ಹೆಚ್ಚಿಸುವುದು ಸಹಜ. ಈ ಟ್ರೆಂಡ್ ದೆಹಲಿಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ನಿಂದ ಮದುವೆ ಸೀಸನ್ ಮತ್ತು ಬೆಂಗಳೂರಿನಲ್ಲಿ ಏರೋ ಶೋದಂತಹ ಕಾರ್ಯಕ್ರಮಗಳಿಗೆ ವಿಸ್ತರಿಸುತ್ತದೆ. ಇವುಗಳು ಹೋಟೆಲ್ ನಿವಾಸಿಗಳ ಮೇಲೆ ಪರಿಣಾಮ ಬೀರುವುದಲ್ಲದೆ ವಿಮಾನ ದರಗಳು ಮತ್ತು ಸಾರಿಗೆ ವೆಚ್ಚಗಳನ್ನು ಹೆಚ್ಚಿಸುತ್ತವೆ. ಇದನ್ನು ಓದಿ : ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹದ ಕಾರಣ ಮುಂಬೈ ಸಂಚಾರ ಪೊಲೀಸರು ಜುಲೈ 12 ರಿಂದ 15 ರವರೆಗೆ ಗಾಗಿ ಸಂಚಾರ ಸಲಹೆಯನ್ನು ನೀಡಿದ್ದಾರೆ. ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ಗೆ ಹೋಗುವ ಎಲ್ಲಾ ರಸ್ತೆಗಳನ್ನು ಮಧ್ಯಾಹ್ನ 1 ರಿಂದ ಮಧ್ಯರಾತ್ರಿಯವರೆಗೆ ಮುಚ್ಚಲಾಗುವುದು ಮತ್ತು ಇತ್ತೀಚಿನ ದಿನಗಳಲ್ಲಿ ಅನ���ಕ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_139.txt ADDED
@@ -0,0 +1 @@
 
 
1
+ : HIVಗೆ 47 ವಿದ್ಯಾರ್ಥಿಗಳು ಬಲಿ, 828ಕ್ಕೂ ಹೆಚ್ಚು ಮಂದಿಗೆ ಪಾಸಿಟಿವ್‌! ರಾಜ್ಯದಲ್ಲಿ ಇದುವರೆಗೆ ಒಟ್ಟು 828 ವಿದ್ಯಾರ್ಥಿಗಳು ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 572 ವಿದ್ಯಾರ್ಥಿಗಳು ಬದುಕಿದ್ದು, 47 ವಿದ್ಯಾರ್ಥಿಗಳು ಏಡ್ಸ್‌ ವೈರಸ್‌ಗೆ ಸಾವನ್ನಪ್ಪಿದ್ದಾರೆ ಎಂದು ತ್ರಿಪುರಾ ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 828 :ಇಡೀ ದೇಶವೇ ಬೆಚ್ಚಿ ಬೀಳುವಂತಹ ಆಘಾತಕಾರಿ ಘಟನೆಯೊಂದು ತ್ರಿಪುರಾದಲ್ಲಿ ನಡೆದಿದೆ. ರಾಜ್ಯದ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು, ಈ ಪೈಕಿ 47 ವಿದ್ಯಾರ್ಥಿಗಳು ಏಡ್ಸ್ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಹೌದು, ರಾಜ್ಯದಲ್ಲಿ ಇದುವರೆಗೆ ಒಟ್ಟು 828HIV ಸೋಂಕಿಗೆ ತುತ್ತಾಗಿದ್ದಾರೆ. ಈ ಪೈಕಿ 572 ವಿದ್ಯಾರ್ಥಿಗಳು ಬದುಕಿದ್ದು, 47 ವಿದ್ಯಾರ್ಥಿಗಳು ಏಡ್ಸ್‌ ವೈರಸ್‌ಗೆ ಸಾವನ್ನಪ್ಪಿದ್ದಾರೆ ಎಂದು ತ್ರಿಪುರಾ ರಾಜ್ಯದ ಏಡ್ಸ್ ನಿಯಂತ್ರಣ ಸೊಸೈಟಿಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬಹುತೇಕ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ದೇಶದ ಹಲವು ಪ್ರಾಂತ್ಯಗಳಲ್ಲಿರುವ ಶಿಕ್ಷಣ ಸಂಸ್ಥೆಗಳಿಗೆ ತೆರಳಿದ್ದರಂತೆ. ಇದನ್ನೂ ಓದಿ: ತ್ರಿಪುರಾ ರಾಜ್ಯದ 220 ಶಾಲೆಗಳು ಮತ್ತು 24 ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿಗಳು ಇಂಜೆಕ್ಷನ್ ಮೂಲಕ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವ ವಿಚಾರ ಬೆಳಕಿದೆ ಬಂದಿದೆ ಎಂದಿರುವ ತ್ರಿಪುರಾದ ಏಡ್ಸ್ ನಿಯಂತ್ರಣ ಸೊಸೈಟಿಯು, ಸೋಂಕು ಹರಡಲು ಇದು ಪ್ರಮುಖ ಕಾರಣವಾಗಿರಬಹುದು ಅಂತಾ ಹೇಳಲಾಗಿದೆ. ಈ ಕುರಿತು ತ್ರಿಪುರಾ ರಾಜ್ಯದಾದ್ಯಂತ ಸುಮಾರು 164 ಆರೋಗ್ಯ ಸಂಸ್ಥೆಗಳಿಂದ ಅಧಿಕಾರಿಗಳು ಮಾಹಿತಿ ಸಂಗ್ರಹಿಸಲಾಗಿದೆ. ಸಮಗ್ರ ತನಿಖೆ ಬಳಿಕ ಹೆಚ್ಚಿನ ಮಾಹಿತಿ ಹೊರ ಬೀಳಲಿದೆ. ಏಡ್ಸ್ ಸೋಂಕಿಗೆ ತುತ್ತಾಗಿರುವ ವಿದ್ಯಾರ್ಥಿಗಳ ಪೈಕಿ ಬಹುತೇಕರು ಶ್ರೀಮಂತ ಮನೆತನದ ಮಕ್ಕಳಾಗಿದ್ದು, ಈ ವಿದ್ಯಾರ್ಥಿಗಳ ಪೋಷಕರು ತುಂಬಾ ಸಿರಿವಂತರಿದ್ದಾರೆಂದು ತಿಳಿದುಬಂದಿದೆ. ಶ್ರೀಮಂತರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಡ್ರಗ್ಸ್‌ ದಾಸರಾಗಿ ಇಂತಹ ಖಾಯಿಲೆಗಳಿಗೆ ತುತ್ತಾಗಿ ತಮ್ಮ ಜೀವನವನ್ನೇ ಹಾಳುಮಾಡಿಕೊಳ್ಳುತ್ತಿದ್ದಾರೆಂಬತಿಳಿದುಬಂದಿದೆ. ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_14.txt ADDED
@@ -0,0 +1 @@
 
 
1
+ : 70ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ! : ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ಇಂದು ಮಧ್ಯಾಹ್ನ ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಘಟನಾ ಸ್ಥಳದಿಂದ ಡೆತ್‌ನೋಟ್‌ ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಕೆಲವರು ತಮೆಗ ಕಿರುಕುಳ ನೀಡುತ್ತಿದ್ದರೆಂದು ಸಲೀಲ್‌ ಅವರು ಆರೋಪಿಸಿದ್ದಾರೆ. :ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷ ಸಲೀಲ್ ಕಪೂರ್ ದೆಹಲಿಯ ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೆಹಲಿಯ ಎಪಿಜೆ ಅಬ್ದುಲ್ ಕಲಾಂ ಮಾರ್ಗದಲ್ಲಿರುವ ತಮ್ಮ ಮನೆಯಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪೊಲೀಸರು ಮಧ್ಯಾಹ್ನ 2.30ರ ಸುಮಾರಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಮನೆಯಲ್ಲಿ ಸಿಕ್ಕ ಡೆತ್‌ನೋಟ್ಅನ್ನು ವಶಪಡಿಸಿಕೊಂಡಿದ್ದಾರೆ. ಕಪೂರ್ ತಮ್ಮ ೩ ಅಂತಸ್ತಿನ ಮನೆಯೊಳಗಿನ ದೇವರ ಮನೆಯಲ್ಲಿ ಕುಳಿತುಕೊಂಡು ರಿವಾಲ್ವರ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೆಲವರಿಂದ ಕಿರುಕುಳ ಆರೋಪ ಅವರ ಮನೆಯಲ್ಲಿ ಪೊಲೀಸರು ಡೆತ್‌ನೋಟ್‌ ವಶಪಡಿಸಿಕೊಂಡಿದ್ದು, ಅದರಲ್ಲಿ ಕಪೂರ್ ಕೆಲವರು ತನಗೆ ಚಿತ್ರಹಿಂಸೆ ನೀಡಿದ್ದಾರೆಂದು ಆರೋಪಿಸಿದ್ದಾರೆ. ಸುದ್ದಿ ತಿಳಿದ ನಂತರ ಪೊಲೀಸರು ಡಾ.ಎಪಿಜೆ ಅಬ್ದುಲ್ ಕಲಾಂ ಲೇನ್ ಅವರ ನಿವಾಸಕ್ಕೆ ಹಾಜರಾಗಿದ್ದಾರೆ. ಸ್ಥಳದಿಂದ ವಶಪಡಿಸಿಕೊಂಡಿರುವ ಡೆತ್‌ನೋಟ್‌ನಲ್ಲಿ ಕೆಲವರ ವಿರುದ್ಧ ಕಿರುಕುಳದ ಆರೋಪಗಳನ್ನು ಮಾಡಲಾಗಿದೆ ಅಂತಾ ದೆಹಲಿ ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. 2015ರಲ್ಲಿ ಸಲೀಲ್ ಕಪೂರ್‌ರನ್ನು ದೆಹಲಿ ಪೊಲೀಸರ ಆರ್ಥಿಕ ಅಪರಾಧ ವಿಭಾಗ () 9 ಕೋಟಿ ರೂ. ವಂಚನೆಯ ಎರಡು ಪ್ರಕರಣಗಳಲ್ಲಿ ಉತ್ತರಾಖಂಡದಲ್ಲಿ ಬಂಧಿಸಿದ್ದರು. ಇದನ್ನೂ ಓದಿ: ತಲೆಮರೆಸಿಕೊಂಡಿರುವ ಆರೋಪ! ಮೊದಲ ಪ್ರಕರಣದಲ್ಲಿ ಸತೀಂದರ್ ನಾಥ್ ಮೈರಾ ಅವರು ಸಲೀಲ್ ಕಪೂರ್ ಅವರ ಕುಟುಂಬ ಸ್ನೇಹಿತ ಪ್ರಶಾಂತ್ ಕಪೂರ್ ಅವರಿಗೆ ಹೂಡಿಕೆಗಾಗಿ 13 ಕೋಟಿ ರೂ. ಪಡೆದುಕೊಂಡಿದ್ದರಂತೆ. ಈ ಹಣವನ್ನು ಹಿಂತಿರುಗಿಸುವಂತೆ ಕೇಳಿದಾಗ ಸಲೀಲ್ ಅವರು ೭ ಪೋಸ್ಟ್ ಡೇಟೆಡ್ ಚೆಕ್‌ಗಳನ್ನು ನೀಡಿದ್ದಾನೆ. ಆದರೆ ಈ ಬಗ್ಗೆ ಎಲ್ಲರಿಗೂ ಅವಮಾನವಾಯಿತು. ಪೊಲೀಸ್ ತನಿಖೆಯ ಸಮಯದಲ್ಲಿ ಸಾಕೇತ್ ನ್ಯಾಯಾಲಯವು ಸಲೀಲ್ ತಲೆಮರೆಸಿಕೊಂಡಿದ್ದಾನೆಂದು ಘೋಷಿಸಿತು. ಅಟ್ಲಾಸ್ ಸೈಕಲ್ಸ್‌ನ ಮಾಜಿ ಅಧ್ಯಕ್ಷೆ ಸುನೀತಾ ಬನ್ಸಾಲ್ ಎಂಬ ಮಹಿಳೆಯ ದೂರಿನ ಮೇರೆಗೆ ೨ನೇ ಪ್ರಕರಣವನ್ನು ದಾಖಲಿಸಲಾಗಿದೆ. ಸುನೀತಾ ಬನ್ಸಾಲ್ ಅವರು ಸಲೀಲ್ ವಿರುದ್ಧ 4 ಕೋಟಿ ರೂ. ವಂಚನೆ ಪ್ರಕರಣ ದಾಖಲಿಸಿದ್ದರು. ಪತ್ನಿ & ಮೂವರ�� ಮಕ್ಕಳ ಪ್ರತ್ಯೇಕ ವಾಸ ಮಧ್ಯಾಹ್ನ 1ಗಂಟೆ ವೇಳೆಗೆ ಡಾ.ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಮನೆಯ ಪೂಜಾ ಕೊಠಡಿಯ ಬಳಿ ಸಲೀಲ್ ಕಪೂರ್ ರಕ್ತದಲ್ಲಿ ‌ಮಡುವಿನಲ್ಲಿ ಬಿದ್ದಿದ್ದ ದೇಹವನ್ನು ಅವರ ಮ್ಯಾನೇಜರ್ ಮೊದಲು ನೋಡಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಪರವಾನಗಿ ಪಡೆದ ರಿವಾಲ್ವರ್‌ನಿಂದ ಕಪೂರ್ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾರಂತೆ. ಘಟನಾ ಸ್ಥಳದಿಂದ ವಶಪಡಿಸಿಕೊಂಡಿರುವ ಡೆತ್‌ನೋಟ್‌ನಲ್ಲಿ ಸಲೀಲ್ ಕಪೂರ್ ತಮ್ಮ ಮೇಲಿರುವ ಆರ್ಥಿಕ ಹೊರೆಯನ್ನು ಉಲ್ಲೇಖಿಸಿದ್ದಾರೆಂದು ಅವರು ಹೇಳಿದರು. ಕಪೂರ್ ಅವರ ಪತ್ನಿ ಮತ್ತು ಮೂವರು ಮಕ್ಕಳು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಇದನ್ನೂ ಓದಿ: ಕಪೂರ್ ಅವರ ಮ್ಯಾನೇಜರ್ ಮತ್ತು ಅವರ ಕುಟುಂಬವು ಅವರೊಂದಿಗೆ ೩ ಅಂತಸ್ತಿನ ಕಟ್ಟಡದಲ್ಲಿ ವಾಸಿಸುತ್ತಿದ್ದರು. ಕಪೂರ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆಂದು ಘೋಷಿಸಿದರು. ಸ್ಥಳದಿಂದ ಪುರಾವೆಗಳನ್ನು ಸಂಗ್ರಹಿಸಲು ವಿಧಿವಿಜ್ಞಾನ ಮತ್ತು ಇತರ ತಂಡಗಳನ್ನು ಕರೆಯಲಾಗಿದೆ ಎಂದು ಅಧಿಕಾರಿ ಹೇಳಿದರು. ಸಲೀಲ್ ಅವರ ಸಂಬಂಧಿ ನತಾಶಾ ಕಪೂರ್ ಕೂಡ ಜನವರಿ 2020ರಲ್ಲಿ ಇದೇ ಮನೆಯಲ್ಲಿ ನೇಣು ಬಿಗಿದುಕೊಂಡುಮಾಡಿಕೊಂಡಿದ್ದರು. ನತಾಶಾ ಅವರು ತಮ್ಮ ಕುಟುಂಬ ಸದಸ್ಯರನ್ನು ನೋಡಿಕೊಳ್ಳುವಂತೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ. ಆದರೆ ಈ ಕ್ರಮಕ್ಕೆ ಕಾರಣವೇನು ಎಂಬುದನ್ನು ಅವರು ವಿವರಿಸಿಲ್ಲ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_140.txt ADDED
@@ -0,0 +1 @@
 
 
1
+ ಮೋದಿ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್.. ನೇರವಾಗಿ ರೂ.10 ಲಕ್ಷ..! 2024 : ಕೇಂದ್ರ ಸರ್ಕಾರದ 2024ರ ಬಜೆಟ್ ಇದೇ ತಿಂಗಳ 23ರಂದು ಮಂಡನೆಯಾಗಿದ್ದು, ಮೋದಿ ಸರ್ಕಾರ ಜನರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ. :ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರ 2024ರ ಬಜೆಟ್ ಇದೆ ತಿಂಗಳ 23ರಂದು ಸಾಮಾನ್ಯ ಬಜೆಟ್ ಮಂಡಿಸಲಿದೆ ಈ ಕುರಿತಂತೆ ಸಿದ್ಧತೆಗಳು ನಡೆಯುತ್ತಿದ್ದು, ಜಾರಿಯಲ್ಲಿರುವ ಯೋಜನೆಗಳಿಗೆ ಹೆಚ್ಚು ಮಹತ್ವವನ್ನ ಕೊಡುವ ಉದ್ದೇಶವನ್ನು ಹೊಂದಿದೆ ಮತ್ತು ಸಾಮಾನ್ಯ ಜನರಿಗೆ ಪೂರ್ಣ ಪ್ರಮಾಣದಲ್ಲಿ ಯೋಜನೆಗಳ ಪ್ರಯೋಜನ ಸಿಗಲಿದೆ. ಇದನ್ನು ಓದಿ : ಸಾಮಾನ್ಯ ಜನರಿಗೆ ಆದಾಯ ತೆರಿಗೆ ಕಲ್ಯಾಣ ಮತ್ತು ಆರೋಗ್ಯದ ರಕ್ಷಣೆಗಾಗಿ ಹೆಚ್ಚಿನ ಬಜೆಟ್ ಮೀಸಲಿಡಲಾಗುವುದು ಎಂದು ತಿಳಿಸಿದೆ ಮತ್ತು ಅದರ ಜೊತೆಗೆ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ ಹಾಗೂ ಆಯುಷ್ಮಾನ್ ಭಾರತ ಯೋಜನೆಗಳಿಗೆ ಸರ್ಕಾರವು ಪ್ರಮುಖ ಘೋಷಣೆ ಮಾಡುವ ನಿರೀಕ್ಷೆಯನ್ನು ಹೊಂದಿದೆ. ಇದರೊಂದಿಗೆ ಆರೋಗ್ಯ ವಿಮಾನ ರಕ್ಷಣೆಯನ್ನು ದ್ವಿಗುಣಗೊಳಿಸುವಂತೆ ಸರ್ಕಾರವು ಯೋಜಿಸುತ್ತಿದೆ. ಇದನ್ನು ಓದಿ : ಈ ಎರಡು ಯೋಜನೆಗಳಡಿ ವಿಮಾ ಮೊತ್ತ ಎರಡನ್ನು ಹೆಚ್ಚಿಸುವಂತೆ ಹಾಗೂ ಫಲಾನುಭವಿಗಳಿಗೆ ನೀಡಲಾಗುವ ವ್ಯಾಪ್ತಿಯ ಮಿತಿಯು 5 ಲಕ್ಷದಿಂದ 10 ಲಕ್ಷಕ್ಕೆ ಏರಿಸುವಂತೆ ಸಿದ್ಧತೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ. ಮೂರು ವರ್ಷಗಳಲ್ಲಿ ಆರೋಗ್ಯ ವಿಮಾ ಯೋಜನೆ ಅಡಿ ಫಲಾನುಭವಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಉದ್ದೇಶವನ್ನು ಹೊಂದಿದೆ. 70 ವರ್ಷ ಮೇಲ್ಪಟ್ಟ ಹೊಸಬರು ಈ ಯೋಜನೆ ಅಡಿಯಲ್ಲಿ ನಾಲ್ಕರಿಂದ ಐದು ಕೋಟಿ ಅಷ್ಟು ಜನ ಫಲ ಪಡೆಯಲಿದ್ದಾರೆ ಎಂದು ತಿಳಿಸಿದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_141.txt ADDED
@@ -0,0 +1 @@
 
 
1
+ : "ಡಿಸ್ಕವರಿ ಆಫ್ ಇಂಡಿಯಾ" ಕೃತಿಯನ್ನು ಬರೆದವರು ಯಾರು? : : ಇಂದು ನಾವು ನಿಮಗಾಗಿ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. :ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ. ಪ್ರಶ್ನೆ 1:ಜಗತ್ತಿನ ಅತಿ ದೊಡ್ಡ ದ್ವೀಪ ಯಾವುದು? ಉತ್ತರ: ಗ್ರೀನ್ಲ್ಯಾಂಡ್ ಪ್ರಶ್ನೆ 2:"ಡಿಸ್ಕವರಿ ಆಫ್ ಇಂಡಿಯಾ" ಕೃತಿಯನ್ನು ಬರೆದವರು ಯಾರು? ಉತ್ತರ: ಜವಾಹರಲಾಲ್ ನೆಹರು ಪ್ರಶ್ನೆ 3:ಭಾರತದಲ್ಲಿ ಯಾವ ರಾಜ್ಯವನ್ನು "ಆರ್ಕಿಡ್ ಪ್ಯಾರಡೈಸ್" ಎಂದು ಕರೆಯಲಾಗುತ್ತದೆ? ಉತ್ತರ: ಅರುಣಾಚಲ ಪ್ರದೇಶ ಪ್ರಶ್ನೆ 4:ಜ್ಯಾಮಿತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ? ಉತ್ತರ: ಯೂಕ್ಲಿಡ್ ಪ್ರಶ್ನೆ 5:ಭಾರತದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಯಾವಾಗ ಆಚರಿಸಲಾಗುತ್ತದೆ? ಉತ್ತರ: ಜನವರಿ 24ರಂದು ಇದನ್ನೂ ಓದಿ: ಪ್ರಶ್ನೆ 6:ವಿಶ್ವ ಪ್ರಸಿದ್ಧ ಆಗ್ರಾ ಯಾವ ನದಿಯ ದಡದಲ್ಲಿದೆ? ಉತ್ತರ: ಯಮುನಾ ನದಿಯ ದಂಡೆ ಪ್ರಶ್ನೆ 8:ಯಾವ ಎರಡು ದ್ವೀಪಗಳು ಭಾರತದ ಭಾಗವಾಗಿದೆ? ಉತ್ತರ: ಅಂಡಮಾನ್ & ನಿಕೋಬಾರ್ ಮತ್ತು ಲಕ್ಷದ್ವೀಪ ಪ್ರಶ್ನೆ 9:ನಮ್ಮ ದೇಹದ ಅತ್ಯಂತ ಸೂಕ್ಷ್ಮ ಅಂಗ ಯಾವುದು? ಉತ್ತರ: ಚರ್ಮ ಪ್ರಶ್ನೆ 10:ಯಾವ ಅಂಗವು ನಮ್ಮ ರಕ್ತವನ್ನು ಶುದ್ಧೀಕರಿಸುತ್ತದೆ? ಉತ್ತರ: ಮೂತ್ರಪಿಂಡ(ಕಿಡ್ನಿ) ಇದನ್ನೂ ಓದಿ: ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
zeenewskannada/data1_url7_1_to_200_142.txt ADDED
@@ -0,0 +1 @@
 
 
1
+ ಕಥುವಾದಲ್ಲಿ ಭಾರತೀಯ ಸೇನಾ ವಾಹನದ ಮೇಲೆ ಉಗ್ರ ದಾಳಿ, ಹೊಣೆಹೊತ್ತ ಕಾಶ್ಮೀರ್ ಟೈಗರ್ಸ್ : ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಮತ್ತೊಮ್ಮೆ ಭಯೋತ್ಪಾದಕರು ಭಾರತೀಯ ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದಾರೆ. ಕಾಶ್ಮೀರ ಟೈಗರ್ಸ್ ಎಂಬ ಉಗ್ರಗಾಮಿ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. :ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೇಡಿ ಪ್ರದೇಶದಲ್ಲಿ ಸೋಮವಾರ (ಜೂನ್ 8) ಭಾರತೀಯ ಸೇನಾ ಬೆಂಗಾವಲು ವಾಹನವನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ದಾಳಿ ನಡೆಸಿದ್ದಾರೆ. ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಚಕಮಕಿಯಲ್ಲಿ ಐವರು ಸೇನಾ ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ. ( ) ಮಚೇಡಿ-ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದವು. ಇದನ್ನೇ ಗುರಿಯಾಗಿಸಿಕೊಂಡಿರುವ ಭಯೋತ್ಪಾದಕ () ಸಂಘಟನೆ ಕಥುವಾದಿಂದ ಸುಮಾರು 150 ಕಿ.ಮೀ ದೂರದಲ್ಲಿ ಈ ದಾಳಿ ನಡೆಸಿದೆ. ಇದನ್ನೂ ಓದಿ- ಈ ದಾಳಿಗೆ ಪ್ರತ್ಯುತ್ತರ ನೀಡಿರುವ ಸೇನೆಯೂ ಕ್ರಮ ಕೈಗೊಂಡಿದ್ದು, ನಂತರನಿರಂತರ ಎನ್‌ಕೌಂಟರ್ ನಡೆಯುತ್ತಿದೆ. ಏತನ್ಮಧ್ಯೆ, ಕಾಶ್ಮೀರದ ಭಯೋತ್ಪಾದಕ ಸಂಘಟನೆಯು ಈ ದಾಳಿಯ ಹೊಣೆಯನ್ನು ಹೊತ್ತುಕೊಂಡಿದ್ದು, ಜೂನ್ 26 ರಂದು ಜಮ್ಮು ಮತ್ತು ಕಾಶ್ಮೀರದ ದೋಡಾದಲ್ಲಿ ಹತರಾದ ಮೂವರು ಭಯೋತ್ಪಾದಕರ ಸಾವಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಹೇಳಿಕೊಂಡಿದೆ. ಇದನ್ನೂ ಓದಿ- ಕಥುವಾ ಜಿಲ್ಲೆಯಲ್ಲಿ ನಡೆದ ದಾಳಿಯ ಬಳಿಕ ಭಾರತೀಯ ಸೇನೆ ( ) ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ಮುಂದುವರಿದಿದೆ. ವಿವಿಧೆಡೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ದಾಳಿಯ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ಆರಂಭದಲ್ಲಿ ಭಯೋತ್ಪಾದಕರು ಸೇನಾ ವಾಹನದತ್ತ ಗ್ರೆನೇಡ್ ಎಸೆದರು, ನಂತರ ಅವರು ಗುಂಡಿನ ದಾಳಿ ಆರಂಭಿಸಿದರು. ದಾಳಿಗೆ ಸೇನಾ ಭದ್ರತಾ ಪಡೆಗಳು ಪ್ರತಿದಾಳಿ ನಡೆಸಿದಾಗ, ಭಯೋತ್ಪಾದಕರು ಅರಣ್ಯದ ಕಡೆಗೆ ಪಲಾಯನ ಮಾಡಿದರು ಎಂದು ತಿಳಿಸಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Free AI Image Generator No sign-up. Instant results. Open Now