| ಕನ್ನಡ ಸಾಹಿತ್ಯ.ಕಾಂ | |
| ಕನ್ನಡದ ಕಣ್ಣಲ್ಲಿ ವಿಶ್ವದ ಕನಸು | |
| ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ | |
| ತಲೆಕೆರೆಯಲು ಕೂಡಾ ಹೊತ್ತಿಲ್ಲ, ಅಷ್ಟೊಂದು ಕಾಟ | |
| ತಬ್ಬಿ ಎದೆಗೊತ್ತಿಕೊಂಡ ಅವನ ದೇಹದ ಮಾಟ | |
| ಹಿಡಿದೆಳೆದು ಒಂಟೆಗಳ ಸಾಲಿಗೆ | |
| ದೂಡಿದ ದೊರೆ ಥಟ್ಟನೆ- “ನೀನೇ ದಳಪತಿ ಈಗ” | |
| ಅವನು ರಕ್ತ ತೆಗೆದು ವೀರ್ಯವಾಗಿಸುತ್ತಾನೆ, ವೀರ್ಯದಿಂದ | |
| ಜೀವ ಸೃಷ್ಟಿಸುತ್ತಾನೆ, ಜೀವದ ಬಂಧ | |
| ಹಿಡಿದು ಕತ್ತರಿಸಿ ತರ್ಕ ಹುಟ್ಟಿಸುತ್ತಾನೆ | |
| ಪುನರುತ್ಥಾನದ ಹಿರಿಮೆ ಮೊಳಗಿಸುತ್ತಾನೆ | |
| ಕೋಲು ಹಿಡಿದು ಪಾರಿವಾಳ ಅಟ್ಟಿದಂತೆ | |
| ಅಟ್ಟುತ್ತಾನೆ ನನ್ನ, ಲಕ್ಷ ರೀತಿಗಳಿಂದ | |
| ಒಲಿಸಿ, ಪರಿಪರಿಯಾಗಿ ಹಂಬಲಿಸಿ | |
| ತನ್ನ ಸನ್ನಿಧಿಗೆ ಹಾಜರಾಗಿಸಿ | |
| ಸಮುದ್ರಯಾನಕ್ಕೆ ನನ್ನ ನಾವೆಯಾಗಿಸುತ್ತಾನೆ | |
| ಹಿಡಿದು ಹಡಗಿನ ಕಂಭಕ್ಕೆ ಕಟ್ಟುತ್ತಾನೆ | |
| ನಿರ್ಮಲತೆ ಶೋಧಕರಿಗೆ ನಾನು ಶುದ್ಧಜಲ | |
| ಅದೃಷ್ಟಹೀನರ ದಾರಿಗೂ ಬರಿ ಗೊಬ್ಬಳಿ ಮುಳ್ಳು | |
| ಅಷ್ಟ ಸ್ವರ್ಗಗಳ ಸೇರುವುದು ದೊರೆಯ ಗುರಿಯಲ್ಲ | |
| ನಾನೆ ದೊರೆಯ ಗುರಿ, ಎಂಥಾ ಸೌಭಾಗ್ಯಶಾಲಿ! | |
| ದೊರೆಯ ದಳಕ್ಕೆ ಸೇರಿದವರು ಸಾವಿನಿಂದ ಪಾರು | |
| ದೊರೆಯ ಕೈಯ ಖಡ್ಗ ನೋಡಿ, ಮಾಡಿದ ಗುರಾಣಿ ಚೂರು | |
| ಅಸಂಖ್ಯ ಹಗಲು ರಾತ್ರಿಗಳ ಆತ್ಮದ ಮುತ್ತಿಗೆಗೆ ನಾನು ಪಹರೆ | |
| ಮುತ್ತುಗಳ ಮೊರೆವ ಕಡಲಲ್ಲೀಗ ಅದು ನನ್ನಿಂದ ಮರೆ | |
| ಅವನ ಸೊಬಗನ್ನು ಎಷ್ಟೆಂದು ಬಣ್ಣಿಸುತ್ತಿ | |
| ಅವನು ಉಪಮಾತೀತ, ಇಲ್ಲಿಗೆ ಸಾಕು. | |
| ಪ್ರಳಯದ ಅಲೆಯು ಮೇಲೆ ನಾನು ಹೊರಟೆ | |
| ***** | |
| ಕರ ಕರ ಕರ ಕೊರೆವ ಚಳಿ ಕೋಳೀಮರಿ ಕುಯ್ದ ಹಾಗೆ; ಮರ ಮರ ಮರ ಮರವಟ್ಟಿತು ಥರ ಥರ ಥರ ಧರೆ ನಡುಗಿತು ಇರುಳು ಕೆರಳಿ ಹೊಡಮರಳಿತು! ತಾರೆಯೊಂದು ತಿರೆಗುರುಳಿತು. ಏನಾಯಿತು! ಏಕಾಯಿತು? ಎನುತಿರ […] | |
| ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಪ್ರತಿ ಗಳಿಗೆಯೂ ಆತ್ಮ ಕೊಳೆಯುತ್ತಿದೆ ನಿನ್ನೆದುರು ಬೆಳೆಯುತ್ತ ಬಂದಿದೆ ಬರೀ ಒಂದು ಆತ್ಮಕ್ಕಾಗಿ ನಿನ್ನ ಬಳಿ ಮೊರೆಯಿಡಬೇಕೆ? ನೀನು ಕಾಲಿಟ್ಟ ಕಡೆ ನೆಲದಿಂದ ತಲೆಯೊಂದು ಚಿಮ್ಮುತ್ತದೆ? […] | |
| ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ ಇಷ್ಟೆಲ್ಲ ದೌರ್ಬಲ್ಯಕ್ಕೆ ಎಷ್ಟು ನೆಪ ಹೇಳುತ್ತಿ, ಹೃದಯವೆ? ಎಷ್ಟೊಂದು ನಿಷ್ಠೆ ಅತ್ತ ಕಡೆಯಿಂದ, ನಿನ್ನಿಂದ ಮಾತ್ರ ಬರೀ ದ್ರೋಹವೇ! ಅತ್ತ ಕಡೆಯಿಂದ ಅಷ್ಟೆಲ್ಲ ಹೃದಯ ವೈಶಾಲ್ಯ […] | |
| ಬಿಟ್ಟ್ಯಾ | |
| ಬಿಟ್ಟ್ಯಾ ತನ್ನ ಹಳ್ಳೀ ಬಿಟ್ಟು ಒ೦ದೇ ಸಮನೇ ಓಡುತ್ತಿದ್ದ. ಎಲ್ಲಿಗೆ ಅಂತಲೂ ಗೊತ್ತಿಲ್ಲ; ಯಾಕಂತಲೂ ಗೊತ್ತಿಲ್ಲ. ಅದೆಷ್ಟು ಹೊತ್ತು ಓಡಿದನೋ! ಇನ್ನೊಂದು ಊರು ಸೇರೋ ವರೆಗೂ ಓಡಿದ.… ಮುಂದೆ ಓದಿ… | |
| ಟಿಪ್ಸ್ ಸುತ್ತ ಮುತ್ತ | |
| "ಕಾಫಿಗೆ ಬರ್ತಿಯೇನೊ?" ಪರಿಚಯವಾಗಿ, ಸ್ನೇಹವಾಗಿ, ಸಲಿಗೆಯಾಗಿ ಒಂದು ತಿಂಗಳಷ್ಟೆ ಆಗಿತ್ತು. ಮುಕ್ತ ಸಲಿಗೆಯಿಂದ ಅವನು ಉತ್ತರ ಕೊಟ್ಟ. "ಕಾಸಿಲ್ಲ ಕೊಡಿಸ್ತೀಯ?" "ಬಾ ಹೋಗೋಣ..." -ಹೊರಗಡೆ ಸಣ್ಣದಾಗಿ ಮಳೆ.… ಮುಂದೆ ಓದಿ… | |
| ಮನ್ನಿ | |
| ನನಗೆ ಆ ಕಿಟಕಿಯೆಂದರೆ ಬಲು ಪ್ರೀತಿ.ಐ ಲವ್ ಇಟ್ , ಜಸ್ಟ್ ಸಿಂಪ್ಲಿ ಐ ಲವ್ ಇಟ್. ಕ್ಷಮಿಸಿ, ಗೋಕಾಕ್ ಚಳವಳಿಯನಂತರ ಸರ್ಕಾರ ಎಲ್ಲಾ ಹಂತಗಳಲ್ಲೂ ಕನ್ನಡ… ಮುಂದೆ ಓದಿ… | |
| ಬುಗುರಿ | |
| ಚೆಲುವ ಕಣ್ಣು ತುಂಬ ನೀರು ತುಂಬಿಕೊಂಡು ತನ್ನ ಬುಗುರಿ ಕಕ್ಕಸು ಗುಂಡಿಗೆ ಬಿದ್ದು ಹೋಯಿತಲ್ಲಾ ಎಂದು ಸಂಕಟ ಪಡುತ್ತಾ ಹಜಾರದ ಗೋಡೆಗೆ ಒರಗಿಕೊಂಡು ಕಣ್ಣು ಮುಖವನ್ನು ಕಣ್ಣೀರಿಂದ… ಮುಂದೆ ಓದಿ… |